nil
#
ವರದಾ ತೀರದ ಕಥೆಗಳನ್ನು ಓದುತ್ತಾ ಮನಸಾರೆ ನಕ್ಕಿದ್ದೇನೆ. ಅರಿವಿಲ್ಲದೇ ಕಣ್ಣಂಚಿನಲ್ಲಿ ಬಂದ ನೀರನ್ನು ಒರೆಸಿಕೊಂಡಿದ್ದೇನೆ. ಹೀಗಾಗಬಾರದಿತ್ತು ಎಂದು ನೊಂದುಕೊಂಡಿದ್ದೇನೆ. ಬರಹಗಾರನ ಕಥೆಯ ಭಾವಕ್ಕೆ ಓದುಗನ ಭಾವನೆಗಳು ಹೊಂದಿದ್ದೇ ಆದರೆ ಕಥಾಪ್ರಸವ ಅನುಭವಿಸಿದ ಕಥೆಗಾರನಿಗೂ ನೆಮ್ಮದಿಯ ನಿಟ್ಟುಸಿರು. ರವೀಂದ್ರ ಮುದ್ದಿಯವರ ಸಿನಿಮಾ, ಟಿವಿಗಳಲ್ಲಿ ಇನ್ನೂ ಬಳಕೆಯಾಗದ ಜವಾರಿ ಭಾಷೆಯ ಪದ ಪ್ರಯೋಗ ಮಾತ್ರ ಅದ್ಭುತ. ವರದಾ ತೀರದ ಕತೆಗಳನ್ನು ಓದುತ್ತಿದ್ದರೆ ನಮಗೆ ಗೊತ್ತಿಲ್ಲದಂತೆ ನಾವು ಆಡಿ ಬೆಳೆದ ನಮ್ಮೂರು ಚಿತ್ರಣ ಕಣ್ಮುಂದೆ ಮುಂದೆ ಬರುವುದು ಗ್ಯಾರಂಟಿ.
ವರದಾ ತೀರದ ಕಥೆಗಳನ್ನು ಓದುತ್ತಾ ಮನಸಾರೆ ನಕ್ಕಿದ್ದೇನೆ. ಅರಿವಿಲ್ಲದೇ ಕಣ್ಣಂಚಿನಲ್ಲಿ ಬಂದ ನೀರನ್ನು ಒರೆಸಿಕೊಂಡಿದ್ದೇನೆ. ಹೀಗಾಗಬಾರದಿತ್ತು ಎಂದು ನೊಂದುಕೊಂಡಿದ್ದೇನೆ.
ವಸಾಹತುಪೂರ್ವ ಮತ್ತು ವಸಾಹತುಕಾಲೀನ ಭಾರತದ ಸಂದರ್ಭದಲ್ಲಿ ಆರ್ಥಿಕತೆಯ ಜೀವನಾಡಿಯಾಗಿದ್ದುದು ಕೃಷಿ ಮತ್ತು ಅದಕ್ಕೆ ಪೂರಕವಾಗಿದ್ದ ಕೈಗಾರಿಕೆಗಳ ವ್ಯವಸ್ಥೆಯೇ ಆಗಿದ್ದರೂ ಕರ್ನಾಟಕಕ್ಕೆ ಸಂಬಂಧಿಸಿ ಆ ಕುರಿತ ಅಧ್ಯಯನಗಳು ನಡೆದದ್ದು ಕಡಿಮೆಯೇ. ಈ ದೃಷ್ಟಿಯಿಂದ ಗೆಳೆಯ ಸಿದ್ದಲಿಂಗಸ್ವಾಮಿಯವರ ''ವಸಾಹತುಶಾಹಿ ಮೈಸೂರು ಸಂಸ್ಥಾನದ ಆರ್ಥಿಕ ಚರಿತ್ರೆ'' ಎಂಬ ಈ ಕೃತಿ ಸ್ವಾಗತಾರ್ಹವಾದುದು. 19ನೆಯ ಶತಮಾನಾರಂಭದಿಂದ ಹಿಡಿದು 20ನೇ ಶತಮಾನದ ಪೂರ್ವಾರ್ಧದ ವರೆಗಿನ ಅವಧಿಯ ಕರ್ನಾಟಕದ ಕೃಷಿ, ಕೃಷಿ ವ್ಯವಸ್ಥೆ, ಭೂ ಹಿಡುವಳಿ, ಭೂಕಂದಾಯ ವ್ಯವಸ್ಥೆಗಳು, ಔದ್ಯಮೀಕರಣ ಹಾಗೂ ನಗರೀಕರಣಗಳ ಪ್ರಕ್ರಿಯೆಯಲ್ಲಿ ಉಂಟಾದ ಕೃಷಿಯ ವಾಣಿಜೀಕರಣದಿಂದ ಉಂಟಾದ ಸ್ಥಿತ್ಯಂತರಗಳೇ ಮೊದಲಾದ ವಿಷಯಗಳನ್ನು ಸಿದ್ದಲಿಂಗಸ್ವಾಮಿಯವರು ವಿಮರ್ಶಾತ್ಮಕವಾಗಿ ಪರಿಶೀಲಿಸಿದ್ದಾರೆ.
Showing 4411 to 4440 of 5582 results