#
nil
'ಸಂಗೀತ ಶರಧಿ' ಇದು ನಮ್ಮ ರಾಷ್ಟ್ರದ ಹೆಮ್ಮೆಯ ಸಂಗೀತ ದಿಗ್ಗಜಗಳ ಬದುಕಿನ ಕಥೆ. ಅವರ ಬದುಕಿನ ಸಂದೇಶದ ಕಥೆ. ನಮ್ಮ ನಾಡು ಮರೆಯಲೇಬಾರದ ಲೆಜೆಂಡ್ಸ್ ಅವರು. ಅದರಲ್ಲೂ ಕೆಲವರು ಎಲೆಯ ಮರೆಯ ಕಾಯಿಯಂತೆ ತಮ್ಮ ಬದುಕನ್ನು ಸವೆಸಿದವರು. ಭಾರತೀಯ ಸಂಸ್ಕೃತಿಯನ್ನು ಶ್ರೀಮಂತವಾಗಿ ಮಾಡಿದವರು. ಯಾರು ಸಂಗೀತವನ್ನು ಪ್ರೀತಿಸುತ್ತಾರೆಯೋ ಅವರು ಓದಲೇಬೇಕಾದ ಪುಸ್ತಕ ಇದು. ರಾಜೇಂದ್ರ ಭಟ್ ಕೆ
S Shashidhar
ಜೆ ಪಿ ಪ್ರದೀಪ್ ಕುಮಾರ್
ಈ ಪುಸ್ತಕವನ್ನು ಬರೆದ ಡಾ. ಸತ್ಯವತಿ ಮೂರ್ತಿಯವರ ಕನ್ನಡ ಪ್ರೇಮ ಮತ್ತು ಸಾಧನೆಯೂ ಗಮನಾರ್ಹ. ವಿವಿಧ ಪ್ರಕಾರಗಳ ಹಲವು ಪುಸ್ತಕಗಳನ್ನು ರಚಿಸಿರುವ ಇವರು, ಇಂಗ್ಲೆಂಡಿನ ಮ್ಯಾಂಚೆಸ್ಟರ್ ನಲ್ಲಿ (ರಾಯಲ್ ಕಾಲೇಜ್ ಆಫ್ ಮ್ಯೂಸಿಕ್) ನಡೆದ ಅಖಿಲ ಭಾರತೀಯ ಕವಿಗೋಷ್ಠಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಇಂಗ್ಲೆಂಡಿನಲ್ಲಿ ನೆಲೆಸಿ, ಸಾಹಿತ್ಯ ರಚನೆ, ಸಂಶೋಧನೆ ಮತ್ತು ಉಪನ್ಯಾಸಗಳನ್ನು ನೀಡುತ್ತಾ ಬಂದಿರುವ ಇಂಗ್ಲೆಂಡಿನ ಸರ್ಕಾರದ ವತಿಯಿಂದ 'ಪ್ರಿಸನ್ ಮಿನಿಸ್ಟರ್' ಆಗಿ ನೇಮಕಾತಿಯಾಗಿರುವುದು ಹೆಮ್ಮೆಯ ವಿಚಾರ. ವಿದೇಶದಲ್ಲಿ ನೆಲೆಸಿದ್ದು, ಇಷ್ಟೆಲ್ಲಾ ಬಿಡುವಿಲ್ಲದ ಕೆಲಸದ ನಡುವೆಯೂ, ಕನ್ನಡದ ಕುರಿತು, ಕನ್ನಡದ ಸಣ್ಣ ಕಥೆಗಳ ಕುರಿತು ಅಪಾರ ಅಭಿಮಾನವಿಟ್ಟುಕೊಂಡು, ಈ ಕೃತಿಯನ್ನು ಬರೆದಿರುವುದು ಸಹ ಎಲ್ಲರೂ ಹೆಮ್ಮೆ ಪಡುವ ವಿಚಾರ. "ಸಣ್ಣ ಕಥೆಗಳಲ್ಲಿ ಜೀವನ ತತ್ವ"ದಂತಹ ಅಪರೂಪದ ಕೃತಿಯನ್ನು ಕನ್ನಡದ ಓದುಗರಿಗೆ ನೀಡಿರುವ ಡಾ. ಸತ್ಯವತಿ ಮೂರ್ತಿಯವರನ್ನು ಮನಸಾರೆ ಅಭಿನಂದಿಸುತ್ತೇನೆ. -ಶಶಿಧರ ಹಾಲಾಡಿ
Showing 3271 to 3300 of 3807 results