nil
ಡಿಯರ್ ಡಿಟೆಕ್ಟಿವ್ ಹಿಮವಂತ್, ನಾನು ಈ ಡೆತ್ ನೋಟನ್ನು ನಿನಗೆ ಕಳಿಸುತ್ತಿರುವ ಹಿಂದೆ ಒಂದು ಪ್ರಮುಖ ಕಾರಣವಿದೆ. ಇತ್ತೀಚಿನ ದಿನಗಳಲ್ಲಿ ನನ್ನ ಬದುಕು ದುಸ್ತರವಾದಂತೆ ನನಗನಿಸುತ್ತಿದೆ. ಜೊತೆಗೆ ನನ್ನ ವೈಯಕ್ತಿಕ ಜೀವನವು ತೀರ ಹದಗೆಟ್ಟು ಹೋಗಿರುವುದರಿಂದ ನನಗೆ ಬದುಕುವ ಆಸಕ್ತಿಯು ಹೊರಟುಹೋಗಿದೆ. ಒಂದಿಷ್ಟು ತಿಂಗಳಿನಿಂದ ಸೀವಿಯರ್ ಡಿಪ್ರೆಶನ್ ನಿಂದ ಬಳಲುತ್ತಿದ್ದೇನೆ. ಹಾಗೇಯೇ ಮೂರ್ನಾಲ್ಕು ತಿಂಗಳಿಂದ ಒಂದಕ್ಷರವನ್ನು ಬರೆಯಲಾಗುತ್ತಿಲ್ಲ ಎಂಬ ಕೊರಗು ನನ್ನನ್ನು ಸದಾ ಕಾಡುತ್ತಿದೆ. “ಫಿಲ್ಲರ್ ಕಾದಂಬರಿಗಾರ್ತಿ ಯಾಗಿ ಸಿಕ್ಕ ಖ್ಯಾತಿಯೆಲ್ಲವೂ ಶೂನ್ಯವೆಂದು ನನಗೀಗ ಅರಿವಾಗುತ್ತಿದೆ. ಒಂದು ವೇಳೆ ನಾನು ಸತ್ತು ಹೋದರೆ, ಅದಕ್ಕೆ ನನ್ನ ಗಂಡ ಮತ್ತು ಅವನೊಟ್ಟಿಗೆ ಅಕ್ರಮ ಸಂಬಂಧವನ್ನು ಹೊಂದಿರುವ “ಚರ್ಚ್ ಸ್ಪೀಟ್ ನ ಹುಡುಗಿಯು ಕಾರಣವಾಗಿರುತ್ತಾರೆ. ಇದಲ್ಲದೆ ಸಾಯುವ ಮುನ್ನ ಸಾಕಷ್ಟು ರಹಸ್ಯಗಳನ್ನು ನಿನ್ನೊಂದಿಗೆ ತೆರದಿಡಬೇಕಿದೆ. ಆದ್ದರಿಂದ ಮಧ್ಯರಾತ್ರಿ ಒಂದರ ವೇಳೆಗೆ ನೀನು ನನ್ನನ್ನು ಭೇಟಿಯಾಗಬೇಕು. ಭೇಟಿಯು ರಹಸ್ಯವಾಗಿರುವುದರಿಂದ ಸ್ಥಳವನ್ನು ಕೂಡ ರಹಸ್ಯವಾಗಿರಿಸಿದ್ದೇನೆ. ನೆನಪಿರಲಿ, ಇದೊಂದು ಸೀಕ್ರೆಟ್ ಡೆತ್ ನೋಟ್ !! ನೋವಿನಿಂದ ತಾರಾಗುಪ್ತ…
ಪ್ರಸ್ತುತ ಜಮಾನದಲ್ಲಿ ನಿಸ್ವಾರ್ಥ ಮನಸ್ಸಿನ ಯುವ ಪೀಳಿಗೆ ಕಾಣಸಿಗುವುದು ಅಪರೂಪ. ಎಲ್ಲೋ ನೋಡಿದ ಕೇಳಿದ ಆದರ್ಶಗಳನ್ನು ಪಾಲಿಸಿಕೊಂಡು ಬಂದಿರುವ ವ್ಯಕ್ತಿಯ ಚಿತ್ರಣ ನನ್ನ ಮನಸ್ಸಿನಲ್ಲಿ ಮೂಡಿತ್ತು. ಅದೇ ವ್ಯಕ್ತಿತ್ವವನ್ನು ಈ ಕಾದಂಬರಿಯಲ್ಲಿ ಒಂದು ಪಾತ್ರವನ್ನಾಗಿಸಿದೆ. ಅಂತಹ ಯುವಕನ ‘ಜೊತೆಯಾಗಿ ಬೆಳೆಯೋಣ’ ಎನ್ನುವ ಧ್ಯೇಯ ನನ್ನನ್ನು ಬಹಳವಾಗಿ ಕಾಡಿತ್ತು. ಇನ್ನೂ ಅಂತಹ ಆದರ್ಶ ಧ್ಯೇಯಗಳನ್ನು ಹೊತ್ತ ಯುವಕರು ನಮ್ಮ ನಡುವೆ ಇದ್ದಾರೆ ಎನ್ನುವ ಅಚ್ಚರಿಯಿಂದ ಈ ಕಾದಂಬರಿಯನ್ನು ಬರೆದೆ. ಈ ರೀತಿಯ ಯುವ ಪೀಳಿಗೆ ಇನ್ನಷ್ಟು ಬೆಳೆದರೆ ಗಾಂಧೀಜಿ ಯವರು ಕಂಡ ರಾಮರಾಜ್ಯದ ಕನಸು ನನಸಾದೀತು. ತನ್ನ ಗುರಿ ತಲುಪಿದ ಮೇಲೆಯೇ ಬಾಕಿ ವಿಚಾರಗಳೆಂದು ಸಂಯಮದಿAದ ವರ್ತಿಸಿ ತನ್ನ ಪ್ರೀತಿಯಲ್ಲಿಯೂ ಆದರ್ಶವನ್ನು ಮೆರೆದ ಆರ್ಯನ್ನ ಪಾತ್ರ, ಎಂದೂ ಎಲ್ಲೆ ಮೀರದ ಚಿಗುರುವಿನಂತಹ ಪಾತ್ರ ಓದುಗರಿಗೆ ಮುದ ನೀಡದಿರಲಾರದು.
Showing 331 to 360 of 731 results