#
nil
ಜೀವನದ ಕೊನೆಯ ಹಂತಗಳನ್ನು ಅಲ್ಲಗಳೆದು ಸದಾ ಯೌವ್ವನ, ಯಶಸ್ಸನ್ನೇ ಹುಡುಕಿ ಮೆರೆಸುವ ಇತ್ತೀಚಿನ ಸಮಾಜದಲ್ಲಿ, ಹೆಚ್ಚುತ್ತಿರುವ ವೃದ್ಧರ ಸಂಖ್ಯೆಯು ಒಂದು ನಿಜವಾದ ಸಂಗತಿ. ಈ ವಯೋವರ್ಗದ ಅವಶ್ಯಕತೆಗಳು, ಅವರು ಎದುರಿಸಬಹುದಾದ ಸಮಸ್ಯೆಗಳು ಹಾಗು ಅವುಗಳನ್ನು ನಿಭಾಯಿಸುವ ಹಲವಾರು ಸಾಧ್ಯತೆಗಳನ್ನು ವಿವರಿಸುವ ಪುಸ್ತಕ ಇದು. ತಿಳಿ ಹಾಸ್ಯದೊಂದಿಗೆ ಸಾಮಾನ್ಯವಾಗಿ ಒಪ್ಪಿಕೊಳ್ಳಲು ಹಿಂಜರಿಯುವ ವಿಷಯಗಳನ್ನು ಬಿಡಿಸಿ ಹೇಳಿ, ಮುಗುಳ್ನಗೆಯಿಂದ ಮುಪ್ಪನ್ನು ಕೂಡ ಧೈರ್ಯದಿಂದ ಆಲಿಂಗಿಸಿ ಮುನ್ನಡೆಯುವುದಕ್ಕೆ ಒಂದು ಮಾರ್ಗಸೂಚಿ. ಡಾ।। ಸರಸ್ವತಿ ಐತಾಳ್ ಅವರು ಬೆಂಗಳೂರಿನ ಸಂಜಯನಗರದಲ್ಲಿ ಕಳೆದ 20 ವರ್ಷಗಳಿಂದ ವೈದ್ಯೆ ವೃತ್ತಿಯನ್ನು ನಡೆಸಿಕೊಂಡು ಬಂದಿದ್ದಾರೆ. ಅವರಿಗೆ ಗ್ರಾಮಾಂತರ ವೈದ್ಯಕೀಯ ಸೇವೆ, ಜೀವನ ಶೈಲಿಯ ರೋಗಗಳು (ಮಧುಮೇಹ), ಮಹಿಳೆಯರು ಹಾಗು ವೃದ್ಧರ ಆರೋಗ್ಯ ಸಮಸ್ಯೆಗಳ ಬಗ್ಗೆ ಹೆಚ್ಚು ಕಾಳಜಿ. ಅದರ ಫಲಶ್ರುತಿಯೇ ಅವರ ಈ ಮೊದಲನೆಯ ಪುಸ್ತಕ `ಅರವತ್ತರ ನಂತರ ಮರಳಿ ಅರಳಿ'.
ತನ್ನ ಕಛೇರಿಯ ಸಮಯದ ನಂತರವೂ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಸಿದ್ಧತೆ ಮಾಡುವ ವೃತ್ತಿ ಯಾವುದಾದರೂ ಇದ್ದರೇ ಅದು ಶಿಕ್ಷಕ ವೃತ್ತಿ ಮಾತ್ರ. ಆ ಕಾರ್ಯತತ್ಪರತೆಯ ಗೌರವ ನಮಗಿರಬೇಕು. ತಮ್ಮ ಸ್ವಂತ ಮಕ್ಕಳೊಡನೆ ಸಮಯ ಕೊಡಲಾಗದಿದ್ದರೂ ವಿದ್ಯಾರ್ಥಿಗಳೆಲ್ಲರನ್ನು ಮಕ್ಕಳಂತೆ ಪ್ರೀತಿಸಿ, ಪೋಷಿಸುವ ನಿಸ್ವಾರ್ಥ ಸೇವೆಯ ಅರಿವು ನಮಗಿರಬೇಕು. ನೂರಾರು ಕಣ್ಣುಗಳ ನಡುವೆ ನೊಂದು ತೇವವಾದ, ಸೋತು ಸೊರಗಿ ಹೋದ, ಆತ್ಮ ವಿಶ್ವಾಸ ಕಳೆದುಕೊಂಡು ಕುಗ್ಗಿ ಕಮರಿದ ಮನಸ್ಸುಗಳನ್ನು ಸದಾ ಹುರಿದುಂಬಿಸಿ, ಗೆಲುವಾಗುವ ದಾರಿ ತೋರಿಸಿ, ಕೈ ಹಿಡಿದು ಮುನ್ನಡೆಸಿ, ಭವ್ಯ ಭವಿಷ್ಯದ ಕನಸನ್ನು ಕಲ್ಪಿಸಿ ಬದುಕು ಬೆಳಗಿಸುವ ದಿವ್ಯ ದೃಷ್ಟಿಯನ್ನು ಸೃಷ್ಟಿಸುವ ಶಿಕ್ಷಕರ ಪಾತ್ರದ ಮಹತ್ವ ನಮಗೆ ತಿಳಿದಿರಬೇಕು. ಒಬ್ಬ ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣದಲ್ಲಿ ಇಂತಹ ನಮ್ರತೆ, ಸದ್ಗುಣಗಳ ವಿವೇಕವನ್ನು ಜ್ಞಾನದ ಜೊತೆಗೆ ಕಲಿಸುವ ಮಹಾಗುರುವನ್ನು, ಸದಾ ಪೂಜ್ಯನೀಯ ಸ್ಥಾನದಲ್ಲಿ ನೋಡುವ ಹಾಗೂ ಸದ್ವಿಚಾರವನ್ನು ಕಲಿಸುವ ಜ್ಞಾನ ದೇಗುಲವೆಂಬ ಶಾಲೆಯನ್ನು ಕೈ ಮುಗಿದು ಗೌರವಿಸುವ ಮನವೆಂದೂ ಪ್ರಶ್ನಿಸುವ, ಅಪಮಾನಿಸುವ, ಅಣಕಿಸುವ, ಅಪಹಾಸ್ಯ ಮಾಡುವ ಕುತ್ಸಿತ ಸ್ಥಿತಿಗೆ ರೂಪಾಂತರವಾಗದಿರಲಿ.
Nil
ಜೆ ರಂಜಾನ್ , ವಿ ಸಿ ರುದ್ರಾಣಿ
Showing 301 to 330 of 5582 results