nil
Peggy Ramesar Mohan, Romila Thapar ಅಲೆಮಾರಿಗಳು ಅರಸರು ವರ್ತಕರು / Alemarigalu Arasaru Vartakaru ಬಹುಪಾಲು ಭಾರತೀಯರು ಇರ್ನುಡಿಗರು;
#
ಕನ್ನಡ ಪ್ರೇಮಕಾವ್ಯಗಳಲ್ಲಿ ಇದೊಂದು ವಿಲಕ್ಷಣವಾದ ನಾಟ್ಯದ ರಚನೆ... ಕನ್ನಡ ಕಾವ್ಯಪ್ರಪಂಚಕ್ಕೆ ಈ ದಿನಗಳಲ್ಲಿ ಪ್ರವೇಶ ಮಾಡಿರುವ ಈ ಪದ್ಯ ಘನವಾದ ಒಂದು ಅನುಭವವನ್ನು ಸರಳವಾಗಿಯೇ ಅಭಿವ್ಯಕ್ತಗೊಳಿಸುತ್ತದೆ. ಬೇಂದ್ರೆಯವರು ಹೇಳುತ್ತಾರಂತೆ: “ಭಾಷೆ ಬೆದರಿ ಕಾವ್ಯವಾಗುತ್ತದೆ.” ತೇಜಶ್ರೀ ಕವನದಲ್ಲಿ ಭಾಷೆ ಬೆದರಿ, ಬೆವರಿ, ಮಿಂಚಿ, ಮಳೆಗರೆದು ಸುಖದ ಅನುಭವವನ್ನೂ, ಸಾವಿನ ಅನುಭವವನ್ನೂ, ಮರುಹುಟ್ಟಿನ ವಿಸ್ಮಯವನ್ನೂ ಕೊಡುತ್ತ ಕಾವ್ಯವಾಗುತ್ತದೆ. ಯು.ಆರ್.ಅನಂತಮೂರ್ತಿ
ಅಂಕಣ ಬರಹವೆಂದರೆ ಪದಗಳ ಮತ್ತು ಒಂದು ನಿರ್ದಿಷ್ಟ ಜಾಗದ ಚೌಕಟ್ಟು, ಆ ಚೌಕಟ್ಟಿನ ಮಿತಿಯೊಳಗೆ ದೀಕ್ಷಿತ್ ನಾಯರ್ ತಮ್ಮ ಚಿತ್ರಗಳನ್ನು ಕುಂದಿಲ್ಲದಂತೆ ಜೋಡಿಸುವ ಉತ್ತಮ ಪ್ರಯತ್ನ ಮಾಡಿದ್ದಾರೆ. ಈ ಅಂಕಣ ಬರಹಗಳ ವಸ್ತು ವಿಷಯಗಳಲ್ಲಿ ವೈವಿಧ್ಯತೆಯಿದೆ, ಚಿಕಿತ್ಸಕ ಮನೋಭಾವವಿದ್ದಾಗ ಮಾತ್ರ ನಮ್ಮ ಸುತ್ತ ಮುತ್ತಲಿನ ಪರಿಸರದಲ್ಲೇ ಇಷ್ಟೊಂದು ವಿಚಾರಗಳು ಕಣ್ಣಿಗೆ ಬೀಳಬಹುದು. ಸರಾಗವಾಗಿ ಓದಿಸಿಕೊಳ್ಳುವ ಸರಳ ನಿರೂಪಣೆಯ ಈ ಅಂಕಣ ಬರಹಗಳಲ್ಲಿ ಬೌದ್ಧಿಕತೆಗಿಂತ ಭಾವುಕತೆ ಹೆಚ್ಚಾಗಿದ್ದರೂ, ಎಲ್ಲಾ ಬರಹಗಳಲ್ಲೂ ಮಾನವೀಯ ಅಂತಃಕರಣ ಮಿಡಿಯುತ್ತದೆ. ದೀಕ್ಷಿತ್ ಈ ಬರಹಗಳಲ್ಲಿ ಯುವ ಜನರಿಗೆ ಪ್ರೋತ್ಸಾಹದ ನುಡಿಗಳನ್ನಾಡುತ್ತಾರೆ, ಮಧ್ಯಮ ವರ್ಗದ ಬವಣೆಗಳಿಗೆ ಸಾಂತ್ವನ ಹೇಳುತ್ತಾರೆ, ಬಾಳ ಸಂಜೆಯಲ್ಲಿರುವವರ ಕುರಿತು ಕಾಳಜಿ ತೋರುತ್ತಾರೆ, ಬಾಳಿಗೆ ದಾರಿ ದೀಪವಾಗಬಲ್ಲ ಸಾಧಕರನ್ನು ಪರಿಚಯಿಸುವ ಮೂಲಕ ಬಿದ್ದವರು ಮತ್ತೆ ಮೇಲೇಳಬಹುದೆಂಬ ಭರವಸೆ ತುಂಬುತ್ತಾರೆ. ಇಲ್ಲಿ ಒಬ್ಬ ಮೃದು ಹೃದಯದ ಭಾವುಕ ಬರಹಗಾರನೂ, ವಸ್ತುನಿಷ್ಠ ಪತ್ರಕರ್ತನೂ, ಸ್ಪೂರ್ತಿ ತುಂಬಬಲ್ಲ ಮಾತುಗಾರನೂ ಒಟ್ಟಿಗೆ ಕಾಣಿಸುತ್ತಾರೆ. ತಾವು ಕೆಚ್ಚಿನಿಂದ ಕನ್ನಡ ಕಲಿತು, ದೀಕ್ಷಿತ್ ಬಾಲ್ಯದಿಂದಲೇ ಕನ್ನಡ ಭಾಷೆ ಮತ್ತು ಸಾಹಿತ್ಯದತ್ತ ಆಸಕ್ತರಾಗುವಂತೆ ಮಾಡಿದ ತಾತನವರ ಬಗ್ಗೆ ಅಭಿಮಾನ ಮೂಡಿತು.
ನಾನು ನಿಜವಾಗಿಯೂ ನಿಮ್ಮ ಬರೆಹದ ಭಾಷೆಗೆ ಕರಗಿ ಮಳೆಯಾದೆ. ಒಂದು ಕಥನಕ್ಕೆ ಏನೇನ್ ಬೇಕೋ ಎಲ್ಲಾ ಈ ಕಥನದಲ್ಲಿದೆ. ನಾನ್ ಎಷ್ಟ್ ಥ್ರಿಲ್ ಆಗಿದೀನಿ ಅಂದ್ರೆ. ಬಿಜ್ಜು ತನ್ನ ಕಷ್ಟಕ್ಕೆ ಪರಿಹಾರ ಹುಡುಕುತ್ತಾ ಸ್ನೇಹಿತ ಮುತ್ತುವಿನ ಊರು ತಲುಪೋದು.ಅಲ್ಲಿ ಮುತ್ತುವಿನ ಸುಳಿವೇ ಸಿಗದೇ ಆತನ ಡೈರಿ ಸಿಗುವುದು.ಮುಂದೆ ಡೈರಿಯಲ್ಲಿ ಮೂಡಿಬರುವ ಮುತ್ತುವಿನ ಕಥೆ ಒಂದು ಶುದ್ಧ ಪ್ರೇಮ. ಅವ್ವನ ಮೇಲಿನ ಅಚಲ ಪ್ರೀತಿ, ಬಾಲ್ಯ ಹುಟ್ಟೂರ ಮೇಲಿನ ಅಭಿಮಾನ, ಪುಸ್ತಕ, ಸ್ನೇಹ, ಬೀದಿಬದಿಯ ನಾಯಿಗಳ ಕಾಳಜಿ, ಮೇಷ್ಟ್ರು ಸೇರಿದಂತೆ ಹಲವರ ನಡುವಿನ ಅಸಕ್ತ ಬದುಕ ಬವಣೆಗಳ ಸೊಗಸಾದ ಭಾವಗೀತೆಯಂತೆ ರೂಪುಗೊಂಡಿದೆ ನಿಮ್ಮ ಕಥನ ಹಂದರ.
Showing 301 to 330 of 5190 results