nil
NA
ಭಾಷಾಂತರವೆನ್ನುವುದು 'ನೆರಳು' ಎಂದರು ದ ರಾ ಬೇಂದ್ರೆಯವರು, ಯಾವುದಾದರೂ ವಸ್ತುವಿನ ನೆರಳು ಆ ವಸ್ತುವಿನ ಆಕಾರದಲ್ಲಿಯೇ ಇರುತ್ತದೆಯಷ್ಟೆ ಅನುವಾದ ಕೂಡ ಹಾಗೆಯೇ. ನೂರಕ್ಕೆ ನೂರರಷ್ಟು ಮೂಲ ಕೃತಿಯನ್ನು ಅನುಸರಿಸಿದ ಅನುವಾದ ಕೂಡ ಸ್ವಸಂಪೂರ್ಣ ಕೃತಿಯಲ್ಲ ಕೊನೆಗೂ ಅದೊಂದು ಅನುವಾದವಷ್ಟೆ ಹಾಗಾಗಿ ಒಂದು ಭಾಷೆಯ ಕೃತಿಯನ್ನು ಇನ್ನೊಂದು ಭಾಷೆಗೆ ತರುವವರ ಅನುವಾದದಲ್ಲಿ ಅವರದೇ ಭಾಷೆ, ಗ್ರಹಣಶಕ್ತಿ, ಸಂವೇದನೆ, ಅಭಿರುಚಿ ಮುಂತಾದವು ಇರುವ ಹಾಗೆಯೇ ಅವರ ಕಾಲಧರ್ಮವೂ ಉಸಿರಾಡುತ್ತಿರುತ್ತದೆ. ಈ ಮಾತು ಶ್ರೀರಾಮ್ ಅವರ ಈ ಅನುವಾದಕ್ಕೂ ಸಲ್ಲುವಂಥದು. ಹೀಗಿದ್ದೂ ಇಲ್ಲಿನ ಕೆಲವು ಕತೆಗಳಲ್ಲಿ ಮೂಲ ಕತೆಗಳ ಧಾಟಿ ಧೋರಣೆಗಳಿಗೆ ಅನುಗುಣವಾದ, ಕನ್ನಡದಲ್ಲಿ ಸಾಮಾನ್ಯವಾಗಿ ಕಾಣದ ವಾಕ್ಯರಚನೆಗಳೂ ನುಡಿಗಟ್ಟುಗಳೂ ಇವೆಯೆಂಬುದು ಗಮನಾರ್ಹ. ಇಂಥವು ಯಾವುದೇ ಭಾಷೆಯ ಅಭಿವೃದ್ಧಿಗೆ ಅತ್ಯಗತ್ಯ ಕೂಡ. ಎಸ್ ದಿವಾಕರ್
ದೂರದ ಬಾಂಬೆಯಲ್ಲಿ ದೀರ್ಘಕಾಲದಿಂದ ನೆಲೆಸಿದ್ದರೂ ಮಿತ್ರಾ ವೆಂಕಟರಾಜ ಅವರ ಭಾಷೆ ಒಂದಿಷ್ಟೂ ಬದಲಾಗಿಲ್ಲ. ಆಕರ್ಷಕ ಕಥನಶೈಲಿ ಅವರದು. ಬಿಟ್ಟು ಹೋಗಿರುವ ನೆಲದ ಬೇರುಗಳು ಇನ್ನೂ ಆಳಕ್ಕಿಳಿದಿವೆ. 'ಕುಂದಾಪ್ರ ಕನ್ನಡ'ದ ಕೆಲವು ಕಥೆಗಳೂ ಇಲ್ಲಿವೆ. ಇದು ಅವರ ನಾಲ್ಕನೆಯ ಕಥಾ ಸಂಕಲನ, ಮಿತ್ರಾರವರು ತಮ್ಮ ಕತೆಗಳಲ್ಲಿ ಅನ್ವೇಷಿಸುವ ವಿಷಯಗಳು, ಪಾತ್ರಗಳ ಸಾಮಾಜಿಕ ಕೌಟುಂಬಿಕ ನೆಲೆಗಳು ಮತ್ತು ಬದಲಾಗುವ ಸಾಮಾಜಿಕ ಪರಿವರ್ತನೆಯ ಪ್ರಭಾವಗಳು ಬೆರಗುಗೊಳಿಸುವಷ್ಟು ವೈವಿಧ್ಯಮಯ. ಸ್ತ್ರೀ ಪ್ರಧಾನ ಕಥೆಗಳು ಇಲ್ಲಿಯ ವಿಶೇಷ. ಕಥೆಗಳು ಮುಗಿದರೂ ಕಥಾವಸ್ತು ಮನಸ್ಸಿನಿಂದ ಮಾಸುವುದೇ ಇಲ್ಲ. ಅವರ ಕಥನಗಾರಿಕೆಯ ಶಕ್ತಿಯೇ ಅದು. ಹೊರ ರಾಜ್ಯದಲ್ಲಿ ನೆಲಸಿದ್ದರೂ ಕನ್ನಡ ಕಥಾಪ್ರಪಂಚವನ್ನು ವಿಸ್ತರಿಸುತ್ತಿರುವ ಕೆಲವೇ ಲೇಖಕಿಯರಲ್ಲಿ ಒಬ್ಬರು ಮಿತ್ರಾ ವೆಂಕಟರಾಜ ಅವರು
Showing 241 to 270 of 506 results