ಕಾಲಾತೀತ ವಿಖ್ಯಾತ ಖಲೀಲ್ ಗಿಬ್ರಾನ್
₹ 190 Original price was: ₹ 190.₹ 169Current price is: ₹ 169.
Secure Payments
Your payments are 100% secure
Pan India Shipping
Delivery between 2-8 Days
Return Policy
No returns accepted. Please refer our full policy
SYNOPSIS
ಲೇಖಕನಾಗಿ, ಚಿತ್ರಕಾರನಾಗಿ, ಚಿಂತಕನಾಗಿ, ಮನುಕುಲದ ಹಿತಚಿಂತಕನಾಗಿ ಇಡೀ ಜಗತ್ತಿನ ಗಮನ ಸೆಳೆದ ಖಲೀಲ್ ಗಿಬ್ರಾನ್ ಬದುಕಿದ್ದು ಕೇವಲ ನಲವತ್ತೆಂಟು ವರ್ಷ. ಆದರೆ ಆ ಅತ್ಯಲ್ಪ ಕಾಲದಲ್ಲೇ ಅವನು ಕಲೆ, ಸಾಹಿತ್ಯ, ತತ್ವಜ್ಞಾನ, ಕಾನೂನು, ಮಾನವ ಘನತೆ ಮತ್ತು ಸ್ವಾತಂತ್ರ್ಯ, ಹೀಗೆ ಹಲವು ವಿಷಯಗಳ ಬಗೆಗೆ ಆಳವಾಗಿ ಚಿಂತಿಸಿದವನು, ಗೊಡ್ಡು ಸಂಪ್ರದಾಯಗಳ ವಿರುದ್ಧ ಬಂಡಾಯವೆದ್ದವನು; ಪ್ರಶಾಂತವಾದ ಆಧ್ಯಾತ್ಮಿಕ ಜೀವನದ ಕನಸು ಕಂಡವನು. ಅವನ ಸೃಜನಶೀಲ ಪ್ರತಿಭೆ ಕಾವ್ಯಮೂಲದ್ದು. ಪ್ರತಿಮೆ, ಅನ್ಯೋಕ್ತಿ, ಸಂಕೇತ, ಇವೆಲ್ಲವೂ ಧಾರಾಳವಾಗಿರುವ ಅವನ ಕೃತಿಗಳಲ್ಲಿ ಮನುಷ್ಯ ಜೀವನದ ವಿವರಗಳು, ಪ್ರಾಣಿಪಕ್ಷಿಗಳು, ವಸ್ತು-ಸಂಗತಿಗಳು ಉಜ್ವಲ ರೂಪಕಗಳಾಗಿ ಕಾವ್ಯದ ಸೊಬಗನ್ನೂ ಧ್ವನಿಶಕ್ತಿಯನ್ನೂ ಪಡೆದುಕೊಂಡಿವೆ. ಅವನದು ರೂಪಕಗಳ ಮೂಲಕ, ದೃಷ್ಟಾಂತಗಳ ಮೂಲಕ, ಅನ್ಯೋಕ್ತಿಗಳ ಮೂಲಕ ಹನಿಗತೆಗಳನ್ನು ಹೇಳುವ ಅಸಾಧಾರಣ ಪ್ರತಿಭೆ.
ಕನ್ನಡದಲ್ಲಿ ಈಗಾಗಲೇ ಖಲೀಲ್ ಗಿಬ್ರಾನನ ಕೆಲವು ಕೃತಿಗಳು ಅನುವಾದಗೊಂಡಿವೆ, ನಿಜ. ಆದರೆ ಬಹುಮಟ್ಟಿಗೆ ಸಮಗ್ರ ಎನ್ನಬಹುದಾದ ಇಂಥ ಬೃಹತ್ಕೃತಿ ಪ್ರಕಟವಾಗುತ್ತಿರುವುದು ಇದೇ ಮೊದಲು. ಪ್ರಸಿದ್ಧ ಲೇಖಕ ಮತ್ತು ಪತ್ರಕರ್ತ ಜಿ.ಎನ್. ರಂಗನಾಥ ರಾವ್ ನಮ್ಮ ಅತ್ಯುತ್ತಮ ಭಾಷಾಂತರಕಾರರಲ್ಲಿ ಒಬ್ಬರು. ಅವರ ಅಪಾರ ಪರಿಶ್ರಮದ ಫಲವಾಗಿರುವ ಈ ಗ್ರಂಥದಿಂದ ಖಲೀಲ್ ಗಿಬ್ರಾನನ ಕೃತಿಸಂಚಯ ಕನ್ನಡ ಸಾಂಸ್ಕೃತಿಕ ಲೋಕದ ಒಂದು ಅನನ್ಯಭಾಗವಾಗುವಂತಾಗಿದೆ.
ABOUT AUTHOR
Opinion of Others
There are no others opinion yet.
Reviews
There are no reviews yet.