ಕಥಾ ಸಂಕ್ರಾಂತಿ 2024
ಸುಗ್ಗಿಯ ಹಿಗ್ಗಿನ ಮಹಾಕನಸು!
ಇದೊಂದು ಅತ್ಯಪೂರ್ವ ಅವಕಾಶ: “ಬಾ ಇಲ್ಲಿ ಸಂಭವಿಸು!”
ಇಂಥ ವಿಶಿಷ್ಟ ಕಥಾಸ್ಪರ್ಧೆ ನಮ್ಮ ದೇಶ-ಭಾಷೆ-ಕಾಲದಲ್ಲಿ ಈಗ ಘಟಿಸುತ್ತಿರುವ ಅಪೂರ್ವ!
ಹೊಸ ತಲೆಮಾರಿನ ಕಥನೋತ್ಸಾಹಿಗಳಾದ ನೀವು ಪೈಪೋಟಿಯಲ್ಲಿ ಬಹುಮಾನಿತರಾದರೆ ನಿಮಗೆ ದೊರಕುವ ಮಾನ್ಯತೆ-ಅವಕಾಶ ಅಸಾಮಾನ್ಯ.
ನೀವು ಪ್ರಯೋಗಶೀಲ ಕಥನ ಕುಶಲಿಗರೆ?
ಒಕ್ಕಲು ಮಕ್ಕಳ ನಾಡ-ನುಡಿಹಬ್ಬ ‘ಕಥಾ ಸಂಕ್ರಾಂತಿ 2024″ ನಿಮ್ಮ ಪ್ರತಿಭೆಯಿಂದ ಹುಟ್ಟುವ ಹೊಸ ಕಥನ ಬೀಜವನ್ನು ಬಿತ್ತಲು ಫಲವತ್ತಾದ ನೆಲ.
ಕಾದಿಟ್ಟ ಅನುಭವದ ತೆನೆಯಗಳನ್ನು ಸುಗ್ಗಿಯಾಗಿಸಬಲ್ಲ ಕಣಜ.
ನೀವೇಕೆ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕು, ಏನಂಥ ವಿಶೇಷ?
ನಿಮ್ಮ ಕಥಾಪ್ರತಿಭೆಗೆ ಬೊಗಸೆ ತುಂಬಬಲ್ಲ ಹಮ್ಮಿಣಿ, ಬಹುಮಾನ ಮೊತ್ತ.
ಇಲ್ಲಿವೆ ಉಸಿರು ಬಿಗಿ ಹಿಡಿವ ಇನ್ನಷ್ಟು ವಿಶಿಷ್ಟತೆ ಮತ್ತು ವಿಶೇಷಣಗಳು
ನೀವು ಮಾಡಬೇಕಿರುವುದು ಇಷ್ಟೇ:
ಕನ್ನಡದ ಓದುಗರ ಸಂವೇದನೆ, ಸೂಕ್ಷ್ಮತೆಗಳನ್ನು ಮುಟ್ಟಿತಟ್ಟಿ, ಜಾಗರೂಕಗೊಳಿಸಬಲ್ಲ ಹೊಚ್ಚ ಹೊಸ ಕಥೆಯನ್ನು ಬರೆಯುವುದು. ಹೊಸ ಕಥನಗಳ ದಾರಿಗೆ ಬೇಕಾದ ಹೊಸ ಕಸುವು, ತಾರುಣ್ಯದ ಹುಮ್ಮಸ್ಸನ್ನು ತುಂಬುವುದು.ಕನ್ನಡ ಕಥಾಲೋಕಕ್ಕೆ ಇದು ‘ನುಡಿಯ ಭಾಗ್ಯ’ ಎನ್ನುವಂಥ ಮಹತ್ವಾಕಾಂಕ್ಷೆಯ ಕಥೆಯನ್ನು ಕಟ್ಟುವುದು.
ಕಥಾಸ್ಪರ್ಧೆಯ ನಿಯಮಗಳು
ನಮ್ಮ ವಾಗ್ದಾನ:
ಎಲ್ಲವೂ ಮನವರಿಕೆಯಾಯಿತೆ? ಇನ್ನೂ ಏಕೆ ತಡ? ಕೂಡಲೇ ಕಥೆ ಬರೆಯಲು ಆರಂಭಿಸಿ.
ಕಥೆಯನ್ನು ಎಲ್ಲೆಡೆಯೂ ತೆರೆದುಕೊಳ್ಳಬಲ್ಲ ಯೂನಿಕೋಡ್ ಫಾಂಟ್ ಬಳಸಿ. ಕಥೆಯ ಹೆಸರು, ಕಥೆಗಾರರ ಹೆಸರು, ವಿಳಾಸ, ದೂರವಾಣಿಯ ವಿವರಗಳನ್ನು ಪ್ರತ್ಯೇಕ ಹಾಳೆಯಲ್ಲಿ ಬರೆಯಿರಿ.
ಸ್ಪರ್ಧೆಗೆ ಕಥೆಯ ಸಾಫ್ಟ್ ಪ್ರತಿ ಮಾತ್ರ ಸ್ವೀಕಾರಾರ್ಹ.
ಕಥೆ ಕಳಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ ೦೫, ೨೦೨೩
ಕಥೆ ಕಳಿಸಬೇಕಾದ ಈಮೇಲ್ ವಿಳಾಸ:
veeralokakathasankranti@gmail.com
ಪರಿಕಲ್ಪನೆ ಮತ್ತು ಸಂಪಾದಕ
ಕೇಶವ ಮಳಗಿ
ನಿಮ್ಮ
ವೀರಕಪುತ್ರ ಶ್ರೀನಿವಾಸ