ಕ್ಯಾಸೆಟ್ ಕವಿತೆಗಳು

Original price was: ₹ 150.Current price is: ₹ 134.

SKU: casette kavitegalu Categories: ,

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .4 kg
Author ,
Page Nos
Publications

SYNOPSIS

80ರ ದಶಕವನ್ನು “ಕ್ಯಾಸೆಟ್ ಯುಗ” ಎಂದೇ ವರ್ಣಿಸಲಾಗುತ್ತದೆ. ಕನ್ನಡ ಕವಿಗಳು ಮತ್ತು ಹಾಡುಗಾರರು ಕ್ಯಾಸೆಟ್ ಮೂಲಕ ಜನಮಾನಸ ಸೂರೆಗೊಂಡ ಕಾಲವದು. ವೃತ್ತಿಯಲ್ಲಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಆಲೂರು ನಾಗಪ್ಪ ಅವರು ಪ್ರವೃತ್ತಿಯಲ್ಲಿ ಸಾಹಿತ್ಯ ರಚನಕಾರರಾಗಿ, ಹಾಡುಗಾರರಾಗಿ ಅದಾಗಲೇ ಪ್ರಸಿದ್ದರಾಗಿದ್ದರು. ಕ್ಯಾಸೆಟ್ ಕಾಲ ಪ್ರಾರಂಭವಾಗುತ್ತಿದ್ದಂತೆಯೇ ಆ ಕ್ಷೇತ್ರವನ್ನು ಪ್ರವೇಶಿಸಿದ ನಾಗಪ್ಪ ಅವರು “ನಿಂಗವ್ವ ಬೆಂಗಳೂರಿಗೆ ಬ೦ದು ನೋಡವ್ವ” ಹಾಡು ಬರೆದು, ತಮ್ಮ ಸಿರಿ ಕಂಠದಿಂದ ಅದ್ಭುತವಾಗಿ ಹಾಡಿ ಬೆಳಗಾಗುವುದರಲ್ಲಿ ಸುಪ್ರಸಿದ್ಧರಾದದ್ದು ಈಗ ಇತಿಹಾಸ. ಸಮಾಜದ ಅಂಕು ಡೊಂಕು, ಸ್ತ್ರೀಯರ ವೇದನೆ, ಬಡವನ ಆಕ್ರಂದನ, ನಾಡು ನುಡಿಯ ಬಗೆಗಿನ ಭಕ್ತಿ ಮುಂತಾದ ವೈವಿದ್ಯಮಯ ಅಭಿವ್ಯಕ್ತಿಗೆ ಕಾರಣವಾದ ಅವರ ಲೇಖನಿಯ ಶಕ್ತಿ, ಅವರ ಅಪೂರ್ವ ಕಂಠಸಿರಿಯಲ್ಲಿ ಹೊಮ್ಮಿ ಜನತೆಯ ಹೃದಯದಲ್ಲಿ ಸ್ಥಾನ ಪಡೆಯಿತು. ಅಂದಿನ ಕಾಲಕ್ಕೆ ರೈತರ ಟ್ರ್ಯಾಕ್ಟರ್ ಗಳಲ್ಲಿಯೂ ಮೊಳಗಿದ ನಾಗಪ್ಪನವರ ಧ್ವನಿ ಅವರ ಅಖಂಡ ಜನಪ್ರಿಯತೆಗೆ ಸಾಕ್ಷಿ. “ನ್ಯಾಯ ಎನ್ನುವುದು ಹಾವಾಗಿದೆ” “ಯಾಕಮ್ಮ ನಾಡಲಿ ಹೀಗಾಗಿದೆ” “ಹರಿದ ಮನಸು ಕರಗಿ ಹೋಯಿತು” “ಕತ್ತಲಲ್ಲಿ ಬೆತ್ತಲಾದಲ್ಲೇ, ನಿಂಗವ್ವ ಬೆಳದಿಂಗಳಲ್ಲಿ ಬೆಂದು ಹೋದಲ್ಲೇ” ಮುಂತಾದ ಅವರ ಶಕ್ತಿಶಾಲಿ ಸಾಹಿತ್ಯ ಅವರದೇ ಕಂಚಿನ ಕಂಠದಲ್ಲಿ ಮೊಳಗಿದ್ದು ವಿಶೇಷವೇ ಸರಿ. ಜನಪದ ಶೈಲಿ, ದೇಸಿ ಮಾಧುರ್ಯ, ನಿರ್ಭೀತ ಪ್ರಸ್ತುತಿ ಅವರ ಪ್ರತಿಭೆಗೆ ಅನ್ವರ್ಥವಾಗಿದ್ದವು.
ಆಲೂರು ನಾಗಪ್ಪನವರು ಈಗ ನಮ್ಮೊಂದಿಗಿಲ್ಲ. ಆದರೆ ಅವರ ಎಲ್ಲ ಪ್ರತಿಭಾ ಲಕ್ಷಣಗಳನ್ನೂ ಎರಕ ಹೊಯಿದಂತೆ ಇರುವ ತಂದೆಗೆ ತಕ್ಕ ಮಗಳು ದಿವ್ಯ ಆಲೂರ್ ತಂದೆಯ ಕನಸುಗಳನ್ನು ಸಾಕಾರಗೊಳಿಸುತ್ತಿದ್ದಾರೆ. ಆಲೂರು ನಾಗಪ್ಪ ಪ್ರತಿಷ್ಠಾನದ ವತಿಯಿಂದ ನಾಗಪ್ಪನವರ ಕ್ಯಾಸೆಟ್ ಕವಿತೆಗಳನ್ನು ಅಕ್ಷರ ರೂಪಕ್ಕೆ ತಂದು ಈಗಿನ ಪೀಳಿಗೆಗೆ ಉಣಬಡಿಸುತ್ತಿದ್ದಾರೆ. ದಿವ್ಯ ಅವರ ಈ ಶ್ರಮ ಸಾರ್ಥಕವಾಗಲಿ ಎಂದು ಹಾರೈಸುತ್ತೇನೆ.
– ಹಿ ಚಿ ಬೋರಲಿಂಗಯ್ಯ
ವಿಶ್ರಾಂತ ಕುಲಪತಿ ಅಧ್ಯಕ್ಷರು, ಕರ್ನಾಟಕ ಜಾನಪದ ಪರಿಷತ್ತು

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಕ್ಯಾಸೆಟ್ ಕವಿತೆಗಳು”

Your email address will not be published. Required fields are marked *

Related Products