nil
ಕವಿಚಕ್ರವರ್ತಿ ಬಿರುದಾಂಕಿತ ಮಹಾಮೇರು ಕವಿ ರನ್ನ ವಿರಚಿತ ಗದಾಯುದ್ದಂ (ಸಾಹಸ ಭೀಮ ವಿಜಯಂ) ಕೃತಿ , ಗಮಕ ವಿದ್ವಾನ್ ಡಾ. ಎಂ ಎ ಜಯರಾಮ್ ರಾವ್ ಅವರ ವ್ಯಾಖ್ಯಾನದೊಂದಿಗೆ. 'ಗದಾಯುದ್ಧ'ವನ್ನು ರನ್ನನು ತನ್ನ ಆಶ್ರಯದಾತ ಅರಸನಾದ ಸತ್ಯಾಶ್ರಯನನ್ನು ಮಹಾಭಾರತದ ಭೀಮನಿಗೆ ಹೋಲಿಸಿ, ಭೀಮನನ್ನೇ ಕಥಾನಾಯಕನನ್ನಾಗಿ ಕಲ್ಪಿಸಿ(ಕೊನೆಯಲ್ಲಿ ಪಟ್ಟಾಭಿಷೇಕವಾಗುವುದು ಭೀಮನಿಗೇ) ಬರೆದಿದ್ದಾನೆ. ಹತ್ತು ಆಶ್ವಾಸಗಳುಳ್ಳ ಈ ಚಂಪೂ ಕೃತಿಯು ಕೇವಲ ಗದಾಯುದ್ಧದ ಪ್ರಸಂಗವನ್ನಷ್ಟೇ ಕಥಾವಸ್ತುವನ್ನಾಗಿ ಹೊಂದಿದ್ದರೂ, ಸಮಗ್ರ ಮಹಾಭಾರತದ ಸಿಂಹಾವಲೋಕನವನ್ನಿಲ್ಲಿ ಕಾಣಬಹುದು.
ಕವಿಚಕ್ರವರ್ತಿ ಬಿರುದಾಂಕಿತ ಮಹಾಮೇರು ಕವಿ ರನ್ನ ವಿರಚಿತ ಗದಾಯುದ್ದಂ (ಸಾಹಸ ಭೀಮ ವಿಜಯಂ) ಕೃತಿ , ಗಮಕ ವಿದ್ವಾನ್ ಡಾ. ಎಂ ಎ ಜಯರಾಮ್ ರಾವ್ ಅವರ ವ್ಯಾಖ್ಯಾನದೊಂದಿಗೆ.
#
ಮಲೆನಾಡಿನ ಶ್ರೀಮಂತ ಜಮಿನ್ದಾರಿ ಕುಟುಂಬ ಶತಮಾನಗಳ ಕಾಲ ಪಾಳೆಗಾರರಾಗಿ ಸ್ವಂತ ಸೈನ್ಯವನ್ನು ಹೊಂದಿ ಸಾವಿರಾರು ಎಕರೆ ಭೂ ಮಾಲಿಕರಾಗಿ ಆಳು ಕಾಳು ಒಕ್ಕಲು ಹತ್ತಾರು ಗ್ರಾಮದ ಪಟೇಲ್ ಜವಬ್ದಾರಿ ಘರ್ವದಿಂದ ಗತ್ತಿನಿಂದ ಎಂತವರಿಗು ಅವರ ಆಡಳಿತ ಮತ್ತು ಶ್ರೀಮಂತಿಕೆ ಬೆರುಗು ತರುವಂತಿತ್ತು. ಇಲ್ಲಿ ಬರುವ ಪಟೇಲರು ಒಮ್ಮೆ ಹೈದರಾಲಿ ಆತನ ಮಗ ಟಿಪ್ಪು ವಿರುದ್ಧ ಬ್ರಿಟೀಷರ ಸಹಾಯ ಪಡೆದು ಸಮರ ಸಾರಿದವರು. ಒಮ್ಮೊಮ್ಮೆ ಗೆಲುವು ಕಂಡವರು. ಹೈದರ್ ಮತ್ತು ಟಿಪ್ಪು ಸಂತತಿ ಅಳಿದ ನಂತರ ಬ್ರಿಟೀಷರ ಕಾನೂನು ಮತ್ತು ಮತಾಂತರದ ವಿರುದ್ಧ ಸಮರ ಸಾರಿದವರು. ಹೀಗೆ ಹಲವಾರು ಘಟನೆಗಳ ಚಿತ್ರಣವನ್ನು ಈ ಕಾದಂಬರಿಯಲ್ಲಿ ಸೆರೆ ಹಿಡಿಯಲಾಗಿದೆ. ಒಮ್ಮೊಮ್ಮೆ ಕೆಲವು ಕಡೆ ಉತ್ತೇಕ್ಷೆಯಂತೆ ಕಂಡರು ಕೆಲವು ಕಡೆ ಗೊಂದಲವಾಗಿಯೂ ಕಂಡು ಬರಬಹುದು. ಅದೆಲ್ಲದಕ್ಕು ಕೂನೆಯಲ್ಲಿ ಉತ್ತರ ದೊರೆತಂತೆ ಕಾಣುತ್ತದೆ. ನಾನು ಹೇಳಬೇಕಾದ ಕೆಲವು ವಿಚಾರಗಳನ್ನು ಕಥಾ ನಾಯಕರ ಬಾಯಿಯಿಂದ ಹೇಳಿಸುವ ಪ್ರಯತ್ನ ಮಾಡಿದ್ದೇನೆ ಎನ್ನುವುದು ಸತ್ಯ. ಈ ಕೃತಿ ಓದಿ ತಾವು ಪ್ರಾಮಾಣಿಕ ಅಭಿಪ್ರಾಯವನ್ನು ನನ್ನೊಂದಿಗೆ ಹಂಚಿಕೊಳ್ಳುತ್ತೀರೆಂದು ನಂಬಿದ್ದೇನೆ.
Showing 1591 to 1620 of 5582 results