nil
ಕನಸುಗಳನ್ನು ಶೃಂಗರಿಸುವ ಜರೂರನ್ನು ಕಾಪಾಡಿಕೊಳ್ಳುವುದು. ಸ್ತ್ರೀ ಸ್ವಾತಂತ್ರ್ಯ, ವೈಚಾರಿಕತೆಯನ್ನು ಮುಟ್ಟಲು ಕಾದಂಬರಿ ಮೇರೆ ಮೀರಿ ಪ್ರಯತ್ನಿಸಿದೆ ಮತ್ತು ಆ ಮೂಲಕ ಸರ್ವಾಂಗೀಣ ಬೆಳವಣಿಗೆ ಸಾಧ್ಯತೆಯನ್ನು ಸಾರಲು ಪರಿಕ್ರಮಿಸಿದೆ. ಎಲ್ಲಾ ತಾರತಮ್ಯವನ್ನು ತಿರಸ್ಕರಿಸಿ ಸಾಮಾಜಿಕ ಕಳಕಳಿಯ ಅಂಶವನ್ನು ಎತ್ತಿಹಿಡಿಯುವ ಮಾರ್ಗದಲ್ಲಿ ಸಾಗಿದೆ. ಲೇಖಕರೊಬ್ಬರ ಲೇಖನಿಯಲ್ಲಿ ಎಲ್ಲವೂ ಶುಭಂ ಆಗುವ ಸಂಭವವಿರುವುದರಿಂದ, ಕಾದಂಬರಿಯೂ ಸಹ ಆತಂಕ, ತಲ್ಲಣಗಳನ್ನು ಹೊತ್ತು ಕೊಂಡೇ, ಆದಷ್ಟೂ ಬದುಕಿನ ಸಹಜತೆಯನ್ನು ಕಾಯ್ದುಕೊಳ್ಳಲು ಯತ್ನಿಸಿದೆ. ಕಥೆಯಲ್ಲಿ ಹೆಚ್ಚು ಕಡಿಮೆ ಎಲ್ಲಾ ಪಾತ್ರಗಳಿಗೂ ಅವಕಾಶವಿದೆ. ಅಧ್ಯಾಯದ ಉಪಕತೆಗಳಲ್ಲಿ ಕನೆಕ್ಟಿವಿಟಿ ಇದೆ. ಒಟ್ಟು ಮುನ್ನೂರಕ್ಕೂ ಹೆಚ್ಚು ಪುಟಗಳ ಕಾದಂಬರಿ ಮೂವತ್ತು ಅಧ್ಯಾಯಗಳನ್ನು ಒಳಗೊಂಡಿದೆ. ಸಾದಾಸೀದವಾಗಿ ಯಾವುದೇ ಭಾರವಿಲ್ಲದೇ ಸರಳವಾಗಿ ಓದಿಸಿಕೊಳ್ಳುತ್ತದೆ. ಉದ್ವಿಗ್ನತೆ, ಒತ್ತಡದ ಸನ್ನಿವೇಶಗಳನ್ನು ಬರೆಯುವಾಗ ತೀರಾ ಒದ್ದಾಡದೆ, ನಿರುದ್ವಿಗ್ನವಾಗಿ ನಿರೂಪಿಸುತ್ತಾ ನೇರ ಮಾರ್ಗಕ್ಕೆ ತಂದು ಬಿಡುತ್ತಾರೆ. ಶೃಂಗಾರದ ಸಮಯ ತೀರಾ ಕಡಿಮೆಯಿವೆ. ಧಾರಾವಾಹಿಗಳಂತೆ ಅಸಹಜತೆಗಳಿಲ್ಲದೆ, ಕೃತಕ ಅಲಂಕಾರಗಳಿಲ್ಲದೆ, ನಿರಾಡಂಬರವಾಗಿ ವಿನ್ಯಾಸಿಸಿದ್ದಾರೆ. ಒಂದು ಸಿನೆಮಾವನ್ನು ಕುಟುಂಬ ಸಮೇತವಾಗಿ ನೋಡಬಹುದು ಅನ್ನುತ್ತಾರಲ್ಲ ಹಾಗೆ ಕನಸು ಸೊಗಸು ಎಲ್ಲಾ ವರ್ಗದ, ವಯೋಮಾನದ ಮಂದಿಯೂ ಓದಬಹುದಾದ ವಸ್ತು ವಿಷಯ ಹೊಂದಿದೆ. ಶ್ರೀನಾಥರಿಗೆ ಒಳಿತಾಗಲಿ, ಅವರು ಹಲವಾರು ಪ್ರಕಾರಗಳಲ್ಲಿ ಬರೆಯುವಂತಾಗಲಿ. ಈ ಕಾದಂಬರಿಯ ಸೊಗಡು ಸಾಹಿತ್ಯಕವಾಗಿ ಸಾಕಷ್ಟು ಹರಡಲಿ ಎಂಬ ಸದಾಶಯದೊಡನೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಬ್ರಾಹ್ಮಣರಿಗೆ ʼಮನು ಸ್ಮತಿʼ ಅಸ್ಪೃಶ್ಯ ಸಂಸ್ಕೃತಿಯನ್ನು ಹೇಳಿ ಕೊಟ್ಟಿತೆ?
ಇತ್ತೀಚೆಗೆ ಬರೆಯುತ್ತಿರುವ ಕತೆಗಾರರಲ್ಲಿ ನೀವು ಹೆಚ್ಚು ಇಷ್ಟವಾಗುತ್ತೀರಿ. ಮನುಷ್ಯರ ಮನಸ್ಸಿನೊಳಗೆ ನೀವು ಪ್ರವೇಶಿಸುತ್ತಿರುವ ರೀತಿ ನನಗೆ ಆಶ್ಚರ್ಯವನ್ನು ತಂದಿದೆ... ಮನುಷ್ಯನಿಗೆ ಅಂಥಾ ಹೇಳಿಕೊಳ್ಳುವಂತಹಾ ಗುರಿ-ಉದ್ದೇಶಗಳಿರುವುದಿಲ್ಲ. ಆತ ಭಾವ ಜೀವಿಯಾಗಿರುತ್ತಾನೆ. ಭ್ರಮಾಜೀವಿಯಾಗಿರುತ್ತಾನೆ. ಮನುಷ್ಯ ಜಗತ್ತು ಇವುಗಳಿಂದಲೇ ನಿರ್ಮಾಣವಾಗಿದೆ. ಆಗುತ್ತಲೂ ಇರುತ್ತದೆ. ನಿಮ್ಮ 'ನಿರ್ಗಮನ', 'ಒಂದುಹನಿ ಪ್ರೀತಿಗಾಗಿ', 'ಆ ಇನ್ನರ್ಧ', 'ನಾನು ನಾನಲ್ಲ', 'ಕಾಲ', 'ಚಿಟ್ಟೆ' ಹೀಗೆ ಹೆಚ್ಚು ಕಡಿಮೆ ಎಲ್ಲಾ ಕತೆಗಳೂ ನನಗೆ ಬಹಳ ಇಷ್ಟವಾದವು. ಮೇಲಿನ ಕತೆಗಳನ್ನು ಎರಡೆರಡು ಬಾರಿ ಓದಿದೆ. "ಹಾರಲು ಮರೆತ ಚಿಟ್ಟೆಗಳಂತೆ ಹೂವುಗಳು ಬಿದ್ದಿದ್ದವು' ಎಂಬ ವಾಕ್ಯ ಮತ್ತೆ ಮತ್ತೆ ನೆನಪಾಗುತ್ತಿರುತ್ತದೆ.
Rajendra Madikula
ಜ ಕನ್ನಡವೆಂದರೆ ಬರಿ ನುಡಿಯಲ್ಲ. ಕನ್ನಡ ಒಂದು ಸಮೃದ್ಧ ಜನಮಾನಸದ ಜೀವ ಚೈತನ್ಯ. ನವೆಂಬರ್ ಒಂದರಂದು ಭಾವ ಅಲ್ಲ. ಆವಾಹಿಸಿಕೊಳ್ಳುವ ನಿತ್ಯವೂ ನಮ್ಮಲ್ಲಿ ಹರಿಯುತ್ತಿರಬೇಕು. ಪ್ರತಿನಿತ್ಯ ಕನ್ನಡದ ಏನಾದರೂ ಒಂದು ಹೊಸ ಸಂಗತಿ ತಿಳಿದುಕೊಳ್ಳಬೇಕು. ಕನ್ನಡ ಲೋಕದ ಅಗಾಧತೆಯನ್ನು, ವಿಸ್ಮಯಗಳನ್ನೂ ಸರಳವಾಗಿ ತಿಳಿದುಕೊಳ್ಳಬೇಕು. ಪುಟ್ಟ ಪುಟ್ಟ ಹೆಜ್ಜೆ ಇಟ್ಟರೆ, ನಂತರ ಕನ್ನಡ ತಾನೇ ನಮ್ಮನ್ನು ತುಂಬಿಕೊಳ್ಳುತ್ತದೆ. ಹಾಗೆ ಕನ್ನಡವನ್ನೇ ಮನಸಲ್ಲಿ ತುಂಬಿಕೊಂಡಾಗ, ಉಳಿಸುವ, ಬೆಳೆಸುವ. ಹೋರಾಡುವ ಪ್ರಶ್ನೆಯೇ ಬರುವುದಿಲ್ಲ. ಎಲ್ಲೆಲ್ಲೂ ಕನ್ನಡಮ್ಮನೇ ಕಾಣುತ್ತಾಳೆ. ಅವಳೇ ನಮ್ಮನ್ನು ಅಪ್ಪಿಕೊಳ್ಳುತ್ತಾಳೆ. ಹಾಗೆ ದಿನಕ್ಕೆ ಒಂದು ಕನ್ನಡ ಚಿಂತನೆ ಕೊಡುವ, ಕನ್ನಡದ ವಿಸ್ಮಯಗಳನ್ನು ಪರಿಚಯಿಸುವ ನಿತ್ಯ ಕನ್ನಡ ಚಿಂತನೆಯ ಪುಸ್ತಕ ಇದು.
#
ಡಾ ಟಿ.ವಿ. ವೆಂಕಟಚಾಲಶಾಸ್ತ್ರೀ
Showing 691 to 720 of 3807 results