ತೀರ ಸಾಮಾನ್ಯರನ್ನು ಕುರಿತ ಕತೆಗಳಿವು, ನಿಜ. ಆದರೆ ಈ ಸಾಮಾನ್ಯರ ಕನಸುಗಳು, ನಿರಾಶಾದಾಯಕವಾಗಿದ್ದರೂ ಅವರ ದೈನಿಕದ ಸ್ಥಿತಿಗತಿಗಳನ್ನು ಮರೆಮಾಚುವುದಿಲ್ಲ.
ಕವಿತೆಗೆ ಓದುಗರೇ ಇಲ್ಲವೆನ್ನುವವರ ಮುಂದೆ ಇಲ್ಲಿನ ಕವಿತೆಗಳನ್ನು ನಿಲ್ಲಿಸಬೇಕು. ಯಾಕೆಂದರೆ ಅಬ್ದುಲ್ ರಶೀದ್ ಅವರ ಕವಿತೆಗಳನ್ನು ಓದುವುದೇ ಒಂದು ಪರಮಸುಖ. ಅಷ್ಟು ತೀಕ್ಷ್ಮವಾದ ವೇಗ ಇಲ್ಲಿನ ಕವಿತೆಗಳಿಗಿವೆ. ಇಲ್ಲಿನ ಕವಿತೆಗಳು ಓದುಗನೊಳಗೆ ಹುದುಗಿರುವ ಕವಿಯನ್ನು ಬಡಿದೆಬ್ಬಿಸುವುದಂತು ನಿಜ!
ಯಾರಾದರೂ ನನ್ನ ಎದೆಗೆ ಬಂದೂಕಿಟ್ಟು, ನಿನ್ನ ಕೊನೆಯ ಆಸೆ ಏನು ಅಂತ ಕೇಳಿದ್ರೆ… ಅಬ್ದುಲ್ ರಶೀದ್ ಅವರ ಬರಹಗಳನ್ನು ಇನ್ನೊಮ್ಮೆ ಓದಿಕೊಂಡುಬಿಡ್ತೀನಿ ಅಂತ ಬಂದೂಕಿಟ್ಟವರಿಗೆ ಹೇಳುವೆ. ಜಯಂತ್ ಕಾಯ್ಕಿಣಿ. ಕಾಯ್ಕಿಣಿ ಸರ್ ಇಂತಹ ಮಾತುಗಳನ್ನು ಹೇಳುತ್ತಾರೆಂದರೆ ‘ಅಬ್ದುಲ್ ರಶೀದ್’ ಅವರ ಸಾಹಿತ್ಯದ ಶಕ್ತಿ ನಿಮಗೆ ಅರಿವಾದೀತು. ಅವರು ಕಥೆ ಹೇಳುವ ರೀತಿ, ಅವರ ಕಥೆಗಳಲ್ಲಿನ ವಸ್ತು ವೈವಿದ್ಯತೆ, ಒಳನೋಟಗಳು ತುಂಬಾ ಅನನ್ಯವಾಗಿರುತ್ತವೆ. ಆದ್ದರಿಂದಲೇ ಅವರ ಕಥೆಗಳು ಒಂದಕ್ಕಿಂತ ಒಂದು ವಿಶೇಷವಾಗಿರುತ್ತವೆ ಮತ್ತು ಅವರನ್ನು ಓದುವ, ಅವರ ಕಥೆಗಳಿಗಾಗಿ ಕಾಯುವ ಒಂದು ದೊಡ್ಡವರ್ಗವೇ ಇದೆ. ಅಂತಹ ಅಬ್ದುಲ್ ರಶೀದ್ ಅವರ ಹೂವಿನ ಕೊಲ್ಲಿ ಪರಿಷ್ಕೃತ ಕಾದಂಬರಿಯನ್ನು ಇದೀಗ ವೀರಲೋಕ ಹೊರತರುತ್ತಿದೆ. ಕೊಡಗಿನ ಕಾಫಿ ತೋಟದ ಒಳಗಿನ ಬದುಕನ್ನು ಹೇಳುವ ಕಾದಂಬರಿ ಇದು. ಅಂತರ್ಜಾಲಕ್ಕಾಗಿ ಬರೆದಂತಹ ಈ ಕಾದಂಬರಿಯನ್ನು ಆಗ ಲೇಖಕರಾದ ಅಬ್ದುಲ್ ರಶೀದ್ ಅವರು ಬ್ಲಾಗಂಬರಿ ಎಂದೂ ಕರೆದಿದ್ದರು. ಈ ಕಾದಂಬರಿ ಈಗ ಪರಿಷ್ಕೃತಗೊಂಡು ಬಿಡುಗಡೆಗೊಳ್ಳುತ್ತಿದೆ.
ಯಾರಾದರೂ ನನ್ನ ಎದೆಗೆ ಬಂದೂಕಿಟ್ಟು, ನಿನ್ನ ಕೊನೆಯ ಆಸೆ ಏನು ಅಂತ ಕೇಳಿದ್ರೆ… ಅಬ್ದುಲ್ ರಶೀದ್ ಅವರ ಬರಹಗಳನ್ನು ಇನ್ನೊಮ್ಮೆ ಓದಿಕೊಂಡುಬಿಡ್ತೀನಿ ಅಂತ ಬಂದೂಕಿಟ್ಟವರಿಗೆ ಹೇಳುವೆ.