ಪದಸಾಗರ
₹ 150 Original price was: ₹ 150.₹ 134Current price is: ₹ 134.
Secure Payments
Your payments are 100% secure
Pan India Shipping
Delivery between 2-8 Days
Return Policy
No returns accepted. Please refer our full policy
SYNOPSIS
ಹೆಸರು ನವೀನ್ ಕುಮಾರ್. ಹುಟ್ಟಿದ್ದು ಸಾಗರದಲ್ಲಿ, ಬೆಂಗಳೂರಿಗೆ ಅಂದಮೇಲೆ ನವೀನ್ ಸಾಗರ ಆಗಿದ್ದು, ಬಾಲ್ಯದಲ್ಲಿ ಸೃಷ್ಟಿಯಾದ ಣವಿಣ ಎಂಬ ಹೆಸರು ಈಗ ಫೇಸ್ ಬುಕ್ ಗೆಳೆಯ ಗೆಳತಿಯರ ನಡುವೆಯೂ ಚಾಲ್ತಿಗೆ ಬಂದು ಹಾಗೆ ಕರೆಯುವವರ ಸಂಖ್ಯೆಯೂ ದೊಡ್ಡದಾಗಿದೆ. ಸಂತೋಷಕ್ಕೂ ಸಂತಾಪಕ್ಕೂ ನನಗಿರೋದು ಒಂದೇ ಔಟ್ಲೆಟ್, ಅದು ಬರವಣಿಗೆ, ಬದುಕು ನೀಡುತ್ತಿರೋದು
ಕೂಡ ಅದೇ. ಧಾರಾವಾಹಿ ಮತ್ತು ಸಿನಿಮಾಗಳಿಗೆ ಬರೆಯುತ್ತಿರುವುದು ಹೊಟ್ಟೆ ತುಂಬಿಸುತ್ತಿದೆ. ಹೆಸರು ನೀಡುತ್ತಿದೆ. ಪತ್ರಿಕೋದ್ಯಮ ಹಾಗೂ ನಮ್ಮ ಕನಸಿನ ಕೂಸು ಬ್ಲಾಕ್ ಟಿಕೆಟ್ ವೆಬ್ ಸೈಟ್ ನನ್ನೊಳಗೊಂದು ಸಾಮಾಜಿಕ ಜವಾಬ್ದಾರಿ ಮತ್ತು ಆತ್ಮಸಂತೋಷ ನನ್ನದಾಗಿಸುವಲ್ಲಿ ಪಾತ್ರವಹಿಸಿವೆ. ಇನ್ನು ಫೇಸ್ಬುಕ್ ನನಗೆ ಈ ಜಗತ್ತಿಗೆ ಹಂಚಿದರೂ ಮಿಕ್ಕುವಷ್ಟು ಸ್ನೇಹಪ್ರೀತಿ ಮತ್ತು ರೆಕಗ್ನಿಷನ್ ಕೊಟ್ಟಿದೆ. ಅತಿ ದೊಡ್ಡ ಓದುಗ ಬಳಗವನ್ನು ನೀಡಿದೆ. ಬದುಕು ನನ್ನಿಂದ ಇರೋಬರೋ ಉದ್ಯೋಗಗಳನ್ನೆಲ್ಲ ಮಾಡಿಸಿ ತೃಪ್ತಿಪಟ್ಟುಕೊಂಡು ಇದೀಗ ನನ್ನ ಇಷ್ಟದ ಬರವಣಿಗೆ ಮಾಡ್ಕೊಂಡಿರೋಕೆ ಬಿಟ್ಟಿದೆ. ಈ ಹಾದಿಯಲ್ಲಿ ಹಾಯ್ ಬೆಂಗಳೂರ್, ಓ ಮನಸೇ, ಕನ್ನಡಪ್ರಭ, ವಿಶ್ವವಾಣಿ, ಸ್ಟಾರ್ ಸುವರ್ಣ ಎಲ್ಲವೂ ಬಂದು ಹೋಗಿವೆ. ಸದ್ಯದ ನಿಲ್ದಾಣ ಸತ್ಯ: ಮೀಡಿಯಾ ಮತ್ತು ಬ್ಲಾಕ್ ಟಿಕೆಟ್. ಸ್ನೇಹ ನಂಬಿಕೆ-ನಗು-ಪ್ರೀತಿ ನನ್ನಲ್ಲಿರುವ ನಾನು ಕೊಡಬಲ್ಲ ಆಸ್ತಿ. ನಾನು ಗಳಿಸಿರುವ ಆಸ್ತಿ ಮತ್ತು ತೀರಿಸಲಾಗದ ಸಾಲ ಎರಡೂ ಇವೇ. ಮಿಕ್ಕಂತೆ ಬರೆದುಕೊಳ್ಳುವಂಥದ್ದೇನೂ ಸಾಧಿಸಿಲ್ಲ. ಆಯಸ್ಸು ತೀರೋ ಮುನ್ನ ಹುಟ್ಟಿದ್ದು ಸಾರ್ಥಕವಾಯ್ತು ಅನಿಸುವಂಥ ಕೆಲಸವೊಂದಿಷ್ಟನ್ನು ಮಾಡುವ ಆಸೆ-ಗುರಿ-ವಿಶ್ವಾಸವಿದೆ. ನೋಡೋಣ.
ABOUT AUTHOR
Opinion of Others
There are no others opinion yet.
Reviews
There are no reviews yet.