| Category: | ಕನ್ನಡ |
| Sub Category: | ಲೇಖನಗಳು, ಪ್ರಬಂಧಗಳು |
| Author: | ಗಿರೀಶ್ ಶ್ರೀಪಾದ ಮೇವುಂಡಿ | Girish Shreepaada Mevundi |
| Publisher: | ಸಾವಣ್ಣ ಪ್ರಕಾಶನ | Sawanna Prakashana |
| Language: | Kannada |
| Number of pages : | 160 |
| Publication Year: | 2026 |
| Weight | 100 |
| ISBN | 978-81-689557-0-7 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಈ ಬದುಕನ್ನು ಬದಲಾಯಿಸಬಲ್ಲ ಅವಕಾಶಗಳು ಇಲ್ಲಿ ಎಲ್ಲರಿಗೂ ಲಭ್ಯವಿದೆ. ಆದರೆ ಅನೇಕರು ತಮ್ಮಲ್ಲಿ ಬೇರುಬಿಟ್ಟಿರುವ ಸೋಮಾರಿತನ, ಆಲಸ್ಯ, ಕೀಳರಿಮೆ, ಅಜ್ಞಾನ, ಭಯ ಹಾಗೂ ಆತ್ಮವಿಶ್ವಾಸಗಳ ಕೊರತೆಯಿಂದ ಭವ್ಯವಾದ ಬದುಕನ್ನು ಕಟ್ಟಿಕೊಳ್ಳದೆ ಸಾಮಾನ್ಯರಾಗಿಯೇ ಉಳಿದುಬಿಡುತ್ತಾರೆ. ಇನ್ನು ಹಲವರು, ತಮ್ಮ ಬದುಕು ಬೇರೊಬ್ಬರಿಂದ ಅಥವಾ ಅದೃಷ್ಟದ ಮೂಲಕ ಬದಲಾಗುತ್ತದೆಂಬ ಭ್ರಮೆಯಲ್ಲಿ ಮುಳುಗಿಹೋಗಿರುತ್ತಾರೆ. ತೆವಳುವ ಕಂಬಳಿಹುಳವು ಹಕ್ಕಿಯಂತೆ ಹಾರುವ ಕನಸು ಕಾಣುತ್ತಾ ಗೂಡನ್ನು ಹರಿದು ಚಿಟ್ಟೆಯಾಗಿ ರೂಪಾಂತರಹೊಂದಿ ಹೊರಬರುವಂತೆ ಈ ಜಾಡ್ಯಗಳನ್ನು ಕಿತ್ತೆಸೆಯಲು ನಮ್ಮಲ್ಲಿ ಕೂಡ ತೀವ್ರ ತೆರನಾದ ಪರಿವರ್ತನೆಯೆಂಬ ಕ್ರಾಂತಿಗೆ ಕಿಚ್ಚೊಂದನ್ನು ಹಚ್ಚಬೇಕಿದೆ. `ಈ ಬದುಕು ಇರುವುದು ಸುಮ್ಮನೆ ಸವೆಯುವುದಕ್ಕಲ್ಲ; ಬದಲಿಗೆ ಏನಾದರೊಂದು ಅಸಾಧಾರಣವಾದ ಸಾಧನೆ ಮಾಡಿ ಯಶಸ್ವಿ ಬದುಕನ್ನು ಸವಿಯುವುದಕ್ಕೆಂಬುದನ್ನು' ಅರಿತು ಬದುಕೆಂಬ ಕುಲುಮೆಗೆ ಆತ್ಮವಿಶ್ವಾಸ, ಶಿಸ್ತು, ಶ್ರಮ ಹಾಗೂ ಸಾಹಸಗಳೆಂಬ ಸೌದೆಯನ್ನು ಹಾಕಿ ಕ್ರಿಯಾಶೀಲತೆ ಎಂಬ ಆಯುಧವನ್ನು ಹರಿತಗೊಳಿಸಿ ಜ್ಞಾನವೆಂಬ ಕಿಚ್ಚನ್ನು ಹಚ್ಚಿ ಬದುಕಿನ ಹೋರಾಟದಲ್ಲಿ ಯಶಸ್ಸೆಂಬ ಗೆಲುವು ಸಾಧಿಸಲು ಪ್ರೇರಣೆಯ ಮುನ್ನುಡಿಯೇ ಈ `ಸ್ವಯಂ ಕ್ರಾಂತಿ'!
![]() |
ಗಿರೀಶ್ ಶ್ರೀಪಾದ ಮೇವುಂಡಿ | Girish Shreepaada Mevundi |
|
ಗಿರೀಶ್ ಶ್ರೀ ಮೇವುಂಡಿ ಉದ್ಯೋಗ: ಮೂಲತಃ ಗ್ರಾಮೀಣಾಭಿವೃದ್ಧಿ ಪಂಚಾಯತ ರಾಜ್ ಇಲಾಖೆಯ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಪ್ರಾದೇಶಿಕ ತರಬೇತಿ ಕೇಂದ್ರ ಧಾರವಾಡದಲ್ಲಿ ಆಡಳಿತ ಮತ್ತು ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಣ: ಎಂ.ಬಿ.ಎ. (ಗ್ರಾಮೀಣಾಭಿವೃದ್ಧಿ ನಿರ್ವಹಣೆ), ಎಂ.ಎ. (ಇತಿಹಾಸ) ಮತ್ತು ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಸ್ನಾತಕೋತ್ತರ ಡಿಪ್ಲೋಮಾ. ಹವ್ಯಾಸ: ಪುಸ್ತಕ ಓದುವುದು, ಪುಸ್ತಕ ಬರೆಯುವುದು, ಚಾರಣ, Read More... |
0 average based on 0 reviews.