ನಗರವಾಸಿಗಳು ಸ್ವರ್ಗವೆಂದು ಉದ್ಘರಿಸುವ ಸಕಲೇಶಪುರ ಭಾಗದ ಹಸಿಹಸಿ ಚಿತ್ರಣ, ಅಲ್ಲಿನ ಜನಜೀವನ, ಕೆಲವೇ ವರ್ಷಗಳಲ್ಲಾದ ಭೌಗೋಳಿಕ ಬದಲಾವಣೆಗಳು, ಅಪರೂಪವಾಗುತ್ತಿರುವ ಅಪ್ಪಟ ಮಲೆನಾಡಿನ ಮರಗಳು, ಪ್ರಾಣಿಪಕ್ಷಿಗಳು, ಕ್ರಿಮಿಕೀಟಗಳು, ಮಲೆನಾಡಗಿಡ್ಡ ತಳಿಯ ದನಗಳು ಹೀಗೆ ಸಾಗುವ ಕೃತಿಯಲ್ಲಿ ಅಚ್ಚುಕಟ್ಟಾದ ಕಥಾ ಹಂದರವು ಒಂದು ಸುಂದರ ಪ್ರಾಕೃತಿಕ ಪ್ರವಾಸದಂತೆ ಸಾಗಿದೆ.
Category: | ಕನ್ನಡ |
Sub Category: | ಕಾದಂಬರಿ |
Author: | ಹೃದ್ಯ |
Publisher: | Concve Media and Publishers |
Language: | Kannada |
Number of pages : | 1 |
Publication Year: | 2024 |
Weight | |
ISBN | 9788196 266165 |
Book type | Paperback |
Delivery between 2-8 Days
No returns accepted. Please refer our full policy
Your payments are 100% secure
ಮಲೆನಾಡನ್ನು ಮರಳಿ ಕಟ್ಟುವ ಕನಸು ಕಟ್ಟಿಕೊಂಡ ಯುವ ಜೋಡಿಯ ಪಯಣದಲ್ಲಿ ನಾವೂ ಸೇರಿಕೊಳ್ಳಬೇಕು ಎಂದೆನಿಸದಿರದು. ಮಲೆನಾಡಿಗರನ್ನು ಕನಲುವಂತೆ ಮಾಡಿದ್ದ ಗುಂಡ್ಯ ಜಲವಿದ್ಯುತ್ ಯೋಜನೆ ಹಿಮ್ಮೆಟ್ಟಿದ ಪರಿ, ಎತ್ತಿನ ಹೊಳೆ ನದಿ ತಿರುವು ಯೋಜನೆ ಮೂಲಕ ಪಶ್ಚಿಮ ಘಟ್ಟಕ್ಕೆ ಹಾಕಿರುವ ಬರೆ ಎಲ್ಲವೂ ಮನಸ್ಸಿಗೆ ನಾಟುತ್ತದೆ. ಮಲೆನಾಡು ನಮ್ಮ ನಾಡು ಎಂಬ ಅಪ್ಯಾಯತೆ ಮೂಡುತ್ತದೆ.
ಹೃದ್ಯ |
0 average based on 0 reviews.