ಹೊರದೇಶವಾಸಿ
₹ 250 ₹ 223
Secure Payments
Your payments are 100% secure
Pan India Shipping
Delivery between 2-8 Days
Return Policy
No returns accepted. Please refer our full policy
SYNOPSIS
ಆರಂಭದಲ್ಲಿ ತಮ್ಮ ಬರಹಗಳ ಮೂಲಕ ಕಿರಣ್, ಉಪಾಧ್ಯಾಯ ಹೆಸರಿಗೆ ತಕ್ಕಂತೆ, ವಿದೇಶವಾಸಿಯಾಗಿದ್ದರು. ಕ್ರಮೇಣ ಅವರ ಗ್ರಹಿಕೆ ಹಿಗ್ಗುತ್ತಾ, ಅನುಭವಗಳೂ ಜತೆಯಾಗಿ, ಅವರ ಬರಹಗಳ ವ್ಯಾಪ್ತಿಯೂ ವಿಸ್ತಾರವಾಗುತ್ತಲೇ ಹೋದವು. ವಿದೇಶದಲ್ಲಿ ‘ದೇಶ’ವೂ ಇದೆಯಲ್ಲ? ಹೀಗಾಗಿ ಅವರು ವಿಜಾರಗಳ ಗಡಿ ನೋಡಿ, ಗಡಿಯೇ ಇಲ್ಲದ ವಿಶ್ವದ ವಿಷಯಗಳ ಕುರಿತು ಬರೆಯಲಾರಂಭಿಸಿದರು. ಅಂದರೆ ಎಲ್ಲ ವಿಷಯ, ವ್ಯಕ್ತಿಗಳ ಬಗ್ಗೆಯೂ ಬರೆಯಲಾರಂಭಿಸಿದರು. ಇದು ಒಬ್ಬ ಅಂಕಣಕಾರ ತನ್ನ ಚೌಕಟ್ಟು ಮೀರಿ, ಸಮಪಾತಳಿ ಕಂಡುಕೊಳ್ಳುವ ಬಗ್ಗೆ ಈ ಕಾರಣದಿ೦ದ ಕಿರಣ್ ಅಂಕಣಗಳಲ್ಲಿ ಮೊದಲಿಗಿಂತ ಹೆಚ್ಚಿನ ಉತ್ಸಾಹ, ಉತ್ಕಟತೆಯನ್ನು ಗ್ರಹಿಸಬಹುದು, ಅಂಕಣಕಾರ ಬರೆಯುತ್ತಾ, ತನ್ನ ಓದುಗನನ್ನು ಒಳಗೊಳ್ಳುತ್ತಾ ಅವರಿಸಿಕೊಳ್ಳುತ್ತಾ ಹೋಗುತ್ತಾನೆ. ಅಂಕಣ ಪೊರೆಯುವಿಕೆಯ ಜರೂರತ್ತಿನ ನಡುವೆ, ತನ್ನ ಪೊರೆಯನ್ನೂ ಕಳಚಿಕೊಳ್ಳುತ್ತಾ ಓದುಗರ ಮುಂದೆ ವಾರವಾರವೂ ನೂತನವಾಗುವ ಪ್ರಯತ್ನವನ್ನು ತನಗರಿವಿಲ್ಲದೇ ಮಾಡುತ್ತಲೇ ಇರುತ್ತಾನೆ, ಇದು ಓದುಗರನ್ನು ಹುಡುಕುತ್ತಾ, ತನ್ನನ್ನು ಹುಡುಕುವ ಪ್ರಯತ್ನವೂ ಹೌದು, ಇಲ್ಲಿನ ಬರಹಗಳಲ್ಲಿ ಕಿರಣ್ ಅವರ ವಿಷಯ ಆಯ್ಕೆಯ ಹರವು, ವಿಚಾರಗಳ ನಿಲುವು ಮತ್ತು ಕಕ್ಕುಲಾತಿಯಿಂದ ಬರೆಯುವ ಒಲವು ಸಹಜವಾಗಿ ಅಭಿವ್ಯಕ್ತವಾಗಿರುವುದನ್ನು ಗುರುತಿಸಬಹುದು.
– ವಿಶ್ವೇಶ್ವರ ಭಟ್
ABOUT AUTHOR
Opinion of Others
There are no others opinion yet.
Reviews
There are no reviews yet.