nil
#
ಡಾ ಗಜಾನನ ಶರ್ಮ
ಒಂದು ಮಕ್ಕಳ ಕಥೆ ಹೇಳೇಕಾದ್ರೆ ಅದ್ರಲ್ಲಿ ಮಕ್ಕಿಗೆ ಒಂದು ಮಾರಲ್ ಇರ್ಬೇಕಾಗುತ್ತೆ. ಮತ್ತೆ ಮಕ್ಕಿಗೆ encourage ಮಾಡೋಕಾಗಿರೋ ಗುಣಗಳು ಅದ್ರಲ್ಲಿ ಇರ್ಬೇಕಾಗುತ್ತೆ. ಅದ್ರು ಜೊತೆಗೆ ಒಂದಷ್ಟು ಮಾಹಿತಿನೂ ಕೊಡೋಕಾಗುತ್ತೆ. ಈ ಪುಸ್ತಕದಲ್ಲಿ ನಾನು ಓದಿದ ಕಥೆ ಒಬ್ಬ ಹುಡುಗ ಸೈಕಲ್ ತಗೋಬೇಕು ಅಂಥ ಅವ್ರ ಬದುಕನ್ನ ಕಟ್ಟಿಕೊಳ್ಳಲು ಹೊಡೆದಾಡುವ ಸಂದರ್ಭದಲ್ಲಿ, ಒಬ್ಬ ಪ್ರಿನ್ಸಿಪಾಲ್ ಹೇಗೆ ಅವನಿಗೆ ಅರಿವಿಲ್ಲದಂತೆ ಒಂದ್ ಎಕ್ಸಾಮ್ ಬರ್ಸಿ, ಆ ಎಕ್ಸಾಮ್ ಇಂದ ಅನ್ನು ಜೀವನದಲ್ಲಿ ಹೇಗೆ ಮುಂದೆ ಹೋಗ್ತಾನೆ ಅನ್ನೋ ವಿಷಯ ತುಂಬಾ ಅರ್ಥಪೂರ್ಣವಾಗಿದೆ. ಇನ್ನರ್ಮೇಷನ್ ಇಲ್ವ, ಅದು ಮಕ್ಕಿಗೆ ಮಾತ್ರ ಅಲ್ಲ ಎಲ್ಲೂ ಓದಿದಾಗ ಈ ತರಹದ ಪರೀಕ್ಷೆ ಒಂದು ಇದೆ. ನಾವು ತುಂಬಾ ಜನಕ್ಕೆ ಇದನ್ನ ತಲುಪಿಸಬೇಕು ಮತ್ತು ಅದರ ಜವಾಬ್ದಾರಿ ಕೂಡ ನಮ್ಮದೇ ಎನ್ನುವುದು ತಿಳಿಯುತ್ತದೆ. ಇಷ್ಟೆಲ್ಲವನ್ನು ಹೊಂದಿಸಿ ಬರೆದಿರುವ ಈ ಕಥೆ ನನಗೆ ಬಹಳ ಇಷ್ಟವಾಗಿದೆ, ಆಮೇಲೆ ಪೂರ್ಣಿಮಾ ಹೆಗ್ಗಡೆಯವರು ಒಬ್ಬರು ಪ್ರಿನ್ಸಿಪಾಲ್ ಆಗಿ ಮಕ್ಕಳನ್ನ ಹತ್ತಿರದಿಂದ ನೋಡಿ ಮಕ್ಕಿಗೆ ಏನೇನೂ ಅವಶ್ಯಕತೆಗಳಿವೆ, ಆ ಮಕ್ಕು ಹೇಗೆ ಬೆಳೀಬೇಕು, ಆ ಮಕ್ಕಿಗೆ ನಾವು ಟೀಚರ್ ಗಳಾಗಿ ಏನೇನನ್ನ ತಲುಪಿಸಬೇಕು ಅನ್ನೋ ಬದ್ಧತೇನ ತಮ್ಮ ಕಥೆಗಳು ಮತ್ತು ಜೀವನ ಎರಡರಲ್ಲೂ ಅಳವಡಿಸಿಕೊಂಡಿರೋದು ಬಹಳ ಖುಷಿ ಕೊಡುತ್ತೆ. ಪೂರ್ಣ ಚಂದ್ರ ಚಲನಚಿತ್ರ ನಟರು
ಯಂಡಮೂರಿ ವೀರೇಂದ್ರನಾಥ್ ಯಂಡಮೂರಿ ವೀರೇಂದ್ರನಾಥ್ ಒಬ್ಬ ಭಾರತೀಯ ಕಾದಂಬರಿಕಾರರು ಮತ್ತು ಚಿತ್ರಕಥೆಗಾರರು. ಇವರು ತೆಲುಗು ಭಾಷೆಯಲ್ಲಿನ ಕೃತಿಗಳಿಗೆ ಹೆಸರುವಾಸಿಯಾಗಿದ್ದಾರೆ.ಅವರು ತಮ್ಮ ಸಾಮಾಜಿಕವಾಗಿ ಸಂಬಂಧಿತ ಬರಹಗಳು ಮತ್ತು ಯೂಟ್ಯೂಬ್ ವೀಡಿಯೊಗಳೊಂದಿಗೆ ಯುವ ಪೀಳಿಗೆಯ ಮೇಲೆ ಪ್ರಭಾವ ಬೀರುತ್ತಾರೆ. ಅವರ ಬರಹಗಳಲ್ಲಿ ಅವರು ಬಡತನ, ಪೂರ್ವಾಗ್ರಹಗಳು ಮತ್ತು ಮೂಢನಂಬಿಕೆಗಳಂತಹ ಭಾರತದಲ್ಲಿನ ಅನೇಕ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುತ್ತಾರೆ ಮತ್ತು ಸಾಮಾಜಿಕವಾಗಿ ಜವಾಬ್ದಾರಿಯುತವಾಗಿರಲು ಜನರನ್ನು ಪ್ರೋತ್ಸಾಹಿಸುತ್ತಾರೆ. ಅವರು ಸಾಹಿತ್ಯದ ಆದರ್ಶವಾದಿ ಮತ್ತು Read More...
ದೂರದ ಬಾಂಬೆಯಲ್ಲಿ ದೀರ್ಘಕಾಲದಿಂದ ನೆಲೆಸಿದ್ದರೂ ಮಿತ್ರಾ ವೆಂಕಟರಾಜ ಅವರ ಭಾಷೆ ಒಂದಿಷ್ಟೂ ಬದಲಾಗಿಲ್ಲ. ಆಕರ್ಷಕ ಕಥನಶೈಲಿ ಅವರದು. ಬಿಟ್ಟು ಹೋಗಿರುವ ನೆಲದ ಬೇರುಗಳು ಇನ್ನೂ ಆಳಕ್ಕಿಳಿದಿವೆ. 'ಕುಂದಾಪ್ರ ಕನ್ನಡ'ದ ಕೆಲವು ಕಥೆಗಳೂ ಇಲ್ಲಿವೆ. ಇದು ಅವರ ನಾಲ್ಕನೆಯ ಕಥಾ ಸಂಕಲನ, ಮಿತ್ರಾರವರು ತಮ್ಮ ಕತೆಗಳಲ್ಲಿ ಅನ್ವೇಷಿಸುವ ವಿಷಯಗಳು, ಪಾತ್ರಗಳ ಸಾಮಾಜಿಕ ಕೌಟುಂಬಿಕ ನೆಲೆಗಳು ಮತ್ತು ಬದಲಾಗುವ ಸಾಮಾಜಿಕ ಪರಿವರ್ತನೆಯ ಪ್ರಭಾವಗಳು ಬೆರಗುಗೊಳಿಸುವಷ್ಟು ವೈವಿಧ್ಯಮಯ. ಸ್ತ್ರೀ ಪ್ರಧಾನ ಕಥೆಗಳು ಇಲ್ಲಿಯ ವಿಶೇಷ. ಕಥೆಗಳು ಮುಗಿದರೂ ಕಥಾವಸ್ತು ಮನಸ್ಸಿನಿಂದ ಮಾಸುವುದೇ ಇಲ್ಲ. ಅವರ ಕಥನಗಾರಿಕೆಯ ಶಕ್ತಿಯೇ ಅದು. ಹೊರ ರಾಜ್ಯದಲ್ಲಿ ನೆಲಸಿದ್ದರೂ ಕನ್ನಡ ಕಥಾಪ್ರಪಂಚವನ್ನು ವಿಸ್ತರಿಸುತ್ತಿರುವ ಕೆಲವೇ ಲೇಖಕಿಯರಲ್ಲಿ ಒಬ್ಬರು ಮಿತ್ರಾ ವೆಂಕಟರಾಜ ಅವರು
ಎರಡು ಗಂಟೆ ಕೆಲಸ ಮಾಡುವ ವೇಳೆಗೆ ಅವನ ಮನಸ್ಸಿಗೆ ಜೋರಾಗಿ ಕಿರುಚ ಬೇಕೆನ್ನಿಸಿತು. ಉಸಿರಾಡಲು ಕಷ್ಟವಾಗಿ ಹೊರಗೆದ್ದುಬಂದ
ತೀ ನಂ ಶ್ರೀಕಂಠಯ್ಯ (ತೀ ನಂ ಶ್ರೀ)
`ನಮ್ಮ ದೇಹದ ವಿಜ್ಞಾನ` ಎಂಬುದೇ ವಿಸ್ಮಯಕಾರಿ ಪರಿಕಲ್ಪನೆ, ಮಾನವನ ದೇಹವನ್ನು ಬಿಡಿ ಬಿಡಿಯಾಗಿ ಈ ಕೃಷಿಯಲ್ಲಿ ಪರಿಚಯ ಮಾಡಿಕೊಡಲಾಗಿದೆ. ನಮ್ಮ ದೇಹದ ಬಗ್ಗೆ ಹಾಗೂ ಅದರಲ್ಲಿ ಹೊಂದಾಣಿಕೆಯಿಂದಿರುವ ವಿವಿಧ ಅಂಗಾಂಗಗಳ ರಚನೆ ಮತ್ತು ಕಾರ್ಯ ವಿಧಾನಗಳ ಬಗ್ಗೆ ಅನೇಕ ಪುಸ್ತಕಗಳು ಲಭ್ಯವಿದೆ. ಆದರೆ ನಮ್ಮ ದೇಹದಲ್ಲಿ ಅಡಕವಾಗಿರುವ ಭೌತವಿಜ್ಞಾನ, ರಸಾಯನವಿಜ್ಞಾನ, ಗಣಿತ ಹಾಗೂ ಎಂಜಿನಿಯರಿಂಗ್ ಅಂಶಗಳನ್ನು ಇಲ್ಲಿ ಹಕ್ಕಿ ಹೆಕ್ಕಿ ತೆಗೆದು ಪರಿಚಯಿಸಿರುವ ಪರಿ ಅನನ್ಯ; ಕನ್ನಡದಲ್ಲಿ ಇದು ಒಂದು ಹೊಸ ಪ್ರಯೋಗ, ಇಲ್ಲಿ ನಿರೂಪಿಸಿರುವ ದಾಟಿ ವಿದ್ಯಾರ್ಥಿ ಮತ್ತು ಅಧ್ಯಾಪಕರನ್ನಷ್ಟೇ ಅಲ್ಲ, ಜನ ಸಾಮಾನ್ಯರನ್ನೂ ಓದಲು ಪ್ರೇರೇಪಿಸುತ್ತದೆ. ಇದೊಂದು `ದೇಹದ ಜ್ಞಾನಕೋಶ`. ಇಲ್ಲಿನ ಭಾಷೆ ಸರಳ, ಓದು ಸರಾಗ ಬಹುವರ್ಣದಲ್ಲಿ ಪ್ರಕಟವಾಗಿರುವುದು ಸಂಪುಟದ ಆಕರ್ಷಣೆಯನ್ನು ಹೆಚ್ಚಿಸಿದೆ. ನಮ್ಮ ದೇಹವು ಹೋಲಿಕೆಯಲ್ಲಿ ಮಾನವನಿರ್ಮಿತ ಯಾವುದೇ ಯಂತ್ರಕ್ಕೆ ಸೆಡ್ಡು ಹೊಡೆಯಬಲ್ಲದು ಎಂಬ ವಾಸ್ತವಾಂಶವನ್ನು ಸಂಪುಟದುದ್ದಕ್ಕೂ ನಿದರ್ಶನಗಳೊಡನೆ ವಿವರಿಸಲಾಗಿದೆ. ಪ್ರಥಮಾರ್ಧದಲ್ಲಿ ನಮ್ಮ ದೇಹದ ವಿವಿಧ ಅಂಗಗಳ ಸಮಗ್ರ ಪರಿಚಯವನ್ನು ಎಳೆಎಳೆಯಾಗಿ ದಾಖಲಿಸಲಾಗಿದೆ. ಅಂಗಾಂಗಗಳ ರಚನೆ, ಅವುಗಳ ಕ್ರಿಯಾಶೀಲತೆ ಹಾಗೂ ದೇಹದಲ್ಲಿ ಅವುಗಳ ಪಾತ್ರವನ್ನು ಅಚ್ಚುಕಟ್ಟಾಗಿ ಚಿತ್ರಿಸಲಾಗಿದೆ. ಈ ವಿಭಾಗ ಸಂಪೂರ್ಣವಾಗಿ ವೈದ್ಯರ ಲೇಖನಿಯಿಂದಲೇ ಮೂಡಿಬಂದಿರುವುದು ವಿಶೇಷ. ದ್ವಿತೀಯಾರ್ಧದಲ್ಲಿ ವಿವಿಧ ಅಂಗಾಂಗಗಳ ಕಾರ್ಯಾಚರಣೆಯಲ್ಲಿ ಅಡಗಿರುವ ವಿಜ್ಞಾನದ ಬೇರೆ ಬೇರೆ ತತ್ತ್ವಗಳನ್ನು ಮನಮುಟ್ಟುವ ಹಾಗೆ ಮತ್ತು ಸುಲಭವಾಗಿ ಗ್ರಹಿಸಲು ಅನುವಾಗುವಂತೆ ಬಿಂಬಿಸಲಾಗಿದೆ. ದೇಹದ ಸಮತೋಲವನ್ನು ಕಾಪಾಡುವ ಗುರುತ್ವ, ಚಲನೆ ಹಾಗೂ ನಡೆದಾಡುವುದನ್ನು ಭೌತವಿಜ್ಞಾನದ ಹಿನ್ನೆಲೆಯಲ್ಲೂ, ರಕ್ತಪರಿಚಲನೆಯನ್ನು ನಗರ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಗೂ ಹೋಲಿಸಿರುವುದು ನಿರೂಪಣೆಗೊಂದು ಉದಾಹರಣೆ. ಕೃತಿಯ ಸರಳ ಕಿವಿಯಲ್ಲಿ ಶಬ್ದವಿಜ್ಞಾನವೂ ಇದೆ. ಮೆಕ್ಯಾನಿಕ್ಸ್ ಕೂಡ ಇದೆ. ಕಣ್ಣನ್ನು ಕ್ಯಾಮೆರಾಕ್ಕೆ ಹೋಲಿಸಿರುವುದರಲ್ಲಿ ಅರ್ಥವಿದೆ, ಇಡೀ ದೇಹವೇ ಒಂದು ರಾಸಾಯನಿಕ ಕಾರ್ಖಾನೆ. ಕ್ಷಣಕ್ಷಣಕ್ಕೂ ಸಹಸ್ರಾರು ರಾಸಾಯನಿಕ ಕ್ರಿಯೆಗಳು ಜರಗುತ್ತಿದ್ದರೂ ಅವು ನಮ್ಮ ಅರಿವಿಗೆ ಬರುವುದಿಲ್ಲ. ಜೀನ್ಸ್ಗಳಲ್ಲಿ ಅಡಕವಾಗಿರುವ ಗುಪ್ತ ಕೋಡುಗಳು ಮತ್ತು ಡಿಕೋಡಿಂಗ್ ಕಗ್ಗಂಟು ಬಿಡಿಸುವ ಇಲ್ಲಿನ ವಿವರಣೆ ಓದುಗರಿಗೆ ಅದ್ಭುತ ಲೋಕವನ್ನೇ ಅನಾವರಣ ಮಾಡುತ್ತದೆ. ಮಿದುಳನ್ನು ಯಾವ ಗಣಕಯಂತ್ರಕ್ಕೂ ಹೋಲಿಸಲಾಗದು. ಅದೇ ಒಂದು ಸೂಪರ್ ಕಂಪ್ಯೂಟರ್, ಮುಖದಲ್ಲಿ ಸ್ವರ್ಣಾನುಪಾತದ ಸೂತ್ರವಿದೆ. ಎಲ್ಲವೂ ಗಣಿತದ ಲೆಕ್ಕಾಚಾರದಂತೆಯೇ ಇದೆ.
ನಮ್ಮವರ VRS ಮತ್ತು ಇತರ ಹಾಸ್ಯ ಲೇಖನಗಳು
Showing 1411 to 1440 of 3322 results