'ರಾಜೀ'-ನಾಟಕವು ದಾಂಪತ್ಯದಲ್ಲಿ ಇರಬೇಕಾದ ನಿಷ್ಠೆಯನ್ನು ಪ್ರಶ್ನಿಸುವ ನಾಟಕ, ಸಂಭಾಷಣೆಗಳ ಸರಣಿಯಿಂದಲೇ ಗಟ್ಟಿತನವನ್ನು ಕಾಯ್ದುಕೊಂಡು ಬಂದಿದೆ. ರಾಜಿ ನೀಡುವ ಉತ್ತರಗಳು, ಒಟ್ಟು ಅವಳದ್ದಾಗದೆ ಒಟ್ಟು ಇಂತಹ ಸ್ತ್ರೀ ಜಗತ್ತಿನ ಪ್ರಾತಿನಿಧಿಕ ಮಾತಾಗುವಂತೆ ಅಕ್ಷತಾ ಎಚ್ಚರವಹಿಸಿದ್ದಾರೆ. ಇದಂತೂ ಭಾವದೊಂದಿಗೆ ಬುದ್ಧಿಯನ್ನು ಬೆಸೆಯುವ ಅಪೂರ್ವ ಪ್ರತಿಭೆ. 'ರಾಜೀ' ಪ್ರಕೃತಿ-ಪುರುಷ ಇಬ್ಬರನ್ನೂ ಚಿಂತನೆಗೆ ಹಚ್ಚುವ ಆಟ. (ನಾಟಕಕ್ಕೆ ಕನ್ನಡದಲ್ಲಿ 'ಆಟ' ಎನ್ನುತ್ತಾರೆ). ಅಕ್ಷತಾ ಈ 'ಆಟ'ವನ್ನು ಆರೋಗ್ಯಕರ ಮನಸ್ಸಿನಿಂದ ಆಡಿದ್ದಾರೆ. -ಡಾ. ಆನಂದ್ ಗೋಪಾಲ್ ಕತೆಗಾರರು ಹಾಗೂ ಕನ್ನಡ ಸಹಾಯಕ ಪ್ರಾಧ್ಯಾಪಕರು, ಮೈಸೂರು