ಆತ್ಮೀಯರೆ, ನಾನು ತನಾಶಿ. ಜ್ಞಾನೇಶ್ವರನು ಪರಿಷ್ಕರಿಸಿದ 125 ಕಂದಪದ್ಯಗಳ ಚೂಡಾರತ್ನ ಶತಕವನ್ನು ನಿಮ್ಮ ಮುಂದೆ ತಂದಿದ್ದೇನೆ. ನಿತ್ಯವೂ ನೆನೆಯಬೇಕಾದ ನೀತಿಶತಕವಿದು.ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿರಬೇಕಾದ ಭಾವನೆಗಳ ಗೊಂಚಲು ಇಲ್ಲಿದೆ. ಸತ್ವದ ಝೇಂಕಾರವಿದೆ. ಸತ್ಯದ ಓಂಕಾರವಿದೆ. ನೀತಿಯ ಸಾಕಾರವಿದೆ. ಬದುಕಿನ ವೈವಿಧ್ಯಗಳ ಆಕಾರವಿದೆ. ಕಣ್ಣಿಗೊತ್ತಿಕೊಂಡು ಓದುವ, ಎದೆಯಲಿಟ್ಟು ಆಸ್ವಾದಿಸುವ ಸಾರಸತ್ವಗಳ ಹೂರಣವಿದೆ. ಸಹೃದಯ ಬಂಧುಗಳೇ ನೀವು ಸವಿದು ನಿಮ್ಮ ಅಮೃತವಾಣಿಗಳಿಂದ ಜಗವನ್ನೂ ತಣಿಸಿರಿ. ನಿಮ್ಮನ್ನೇ ನೀವು ಕಾಣುವ ಕನ್ನಡಿಯ ತೆರದಿ ಇದನ್ನೂ ಕಾಣಿರಿ. ಆಸ್ವಾದಿಸಿ ಹಾರೈಸಿರಿ. ನಿಮ್ಮವ ತನಾಶಿ
ಆತ್ಮೀಯರೆ, ನಾನು ನಿಮ್ಮ ತನಾಶಿ. ಟಿ.ಎನ್. ಶಿವಕುಮಾರ್, ಮಂಡ್ಯಕೊಪ್ಪಲು. ಇದೋ ಕನಕದಾಸರ ಹರಿಭಕ್ತಿಸಾರವನ್ನು ಅರ್ಥ ಮತ್ತು ವ್ಯಾಖ್ಯಾನ ಸಹಿತ ಕನ್ನಡಿಗರ ಮಡಿಲಿಗೆ ಇಡುತ್ತಿದ್ದೇನೆ. ಹರಿಯ ವರ್ಣನೆಯನ್ನೂ, ಲೀಲಾವಿಲಾಸಗಳನ್ನೂ, ಹಾಡಿ ತಣಿಯದ ದಾಸರ ಪದ ಸಾಮ್ರಾಜ್ಯವು ನನ್ನ ವ್ಯಾಖ್ಯಾನದ ಜೊತೆಗೆ ನಿಮ್ಮೊಡನಿದೆ. ಇದು ನಿಮ್ಮ ಮೈಮನಗಳನ್ನು ಪುಳಕಗೊಳಿಸಿದರೆ ನನ್ನ ಶ್ರಮ ಸಾರ್ಥಕ. ಹರಿ ನಾಮ ಸಂಕೀರ್ತನೆಯು ಕನ್ನಡನಾಡಿನ ಮನೆಮನಗಳಲ್ಲಿ ಮೊಳಗಲಿ, ತಾವು ಓದಿ ಹಾರೈಸಿ, ಹರಸಿ,