| Category: | ಕನ್ನಡ |
| Sub Category: | ಲೇಖನಗಳು, ಪ್ರಬಂಧಗಳು |
| Author: | ಡಾ. ಜಿ. ಕೃಷ್ಣಪ್ಪ | Krishnappa G |
| Publisher: | Amulya pustaka |
| Language: | Kannada |
| Number of pages : | |
| Publication Year: | 2025 |
| Weight | 300 |
| ISBN | 97 8 8 199 060289 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಕೃಷ್ಣಪ್ಪನವರು ಕುವೆಂಪುರವರ ವಿವಿಧ ಕಾವ್ಯಗಳನ್ನು ಅಧ್ಯಯನ ಮಾಡಿ, ಅವುಗಳಲ್ಲಿ ಆ ರಸಋಷಿ ನಿರ್ಮಿಸಿರುವ ಹೊಸ ಹೊಸ ಶಬ್ದಗಳನ್ನು ಹುಡುಕಿ ತೆಗೆದು, ಅವುಗಳನ್ನು ಅರ್ಥಸಹಿತವಾಗಿ, ಸಂದರ್ಭಸಹಿತವಾಗಿ ಸಹೃದಯರ ಮುಂದೆ ಮಂಡಿಸಿದ್ದಾರೆ. ಆ ನೂತನ ಶಬ್ದಗಳು ಬಳಕೆಯಾಗಿರುವ ಕಾವ್ಯಭಾಗಗಳನ್ನು ಉದ್ಧರಿಸಿ, ತಮ್ಮ ಕಾರ್ಯಕ್ಕೆ ಹೆಚ್ಚಿನ ಅಧಿಕೃತತೆಯನ್ನು ತಂದುಕೊಟ್ಟಿದ್ದಾರೆ. ಕೆಲವೆಡೆ ಆ ನೂತನ ಪದಗಳ ಸಾರ್ಥಕತೆಯನ್ನು ತಮ್ಮದೇ ಪ್ರತಿಭಾ ವಿಲಾಸದ ಹಿನ್ನೆಲೆಯಲ್ಲಿ ಮನಮುಟ್ಟುವಂತೆ ತಿಳಿಸಿಕೊಟ್ಟಿದ್ದಾರೆ.
- ಡಾ. ಕೆ. ಅನಂತರಾಮು, ನಿವೃತ್ತ ಕನ್ನಡ ಪ್ರಾಧ್ಯಾಪಕರು, ಮೈಸೂರು ವಿಶ್ವವಿದ್ಯಾನಿಲಯ
ನಾನೇನು ಸಾಹಿತಿಯಲ್ಲ. ನಾನೊಬ್ಬ ಸಾಮಾನ್ಯ ಓದುಗ. ಆದರೂ ಸಾಕಷ್ಟು ಓದಿಕೊಂಡಿದ್ದೇನೆ. ಇಲ್ಲಿ ಅರ್ಥೈಸಿರುವ ಎಲ್ಲ ಪದಗಳನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇನೆ. ಪ್ರಾಮಾಣಿಕವಾಗಿ ಹೇಳುವುದಾದರೆ, ನನಗೆ ಇಲ್ಲಿನ ೨೨೪ ಪದಗಳ ಪೈಕಿ ೨೦೦ ಪದಗಳ ಅರ್ಥ ತಿಳಿಯದು. ಆದುದರಿಂದ ಈ ಪುಸ್ತಕ ಕುವೆಂಪು ಕಾವ್ಯಗಳನ್ನು ಓದಬೇಕೆನ್ನುವ ನನ್ನಂಥವರಿಗೆ ಬಹಳ ಉಪಯುಕ್ತವಾದುದು.
- ಡಾ. ಎಂ. ಬಸವಣ್ಣ, ಮನಃಶಾಸ್ತ್ರ ಪ್ರಾಧ್ಯಾಪಕರು
ನಿಘಂಟಿನಲ್ಲಿ ಪ್ರಧಾನವಾಗಿ ಎರಡು ಬಗೆಗಳಿವೆ. ಒಂದು ನಿಘಂಟುಶಾಸ್ತ್ರ (ಲೆಕ್ಸಿಕಾಲಜಿ) ಮತ್ತೊಂದು ನಿಘಂಟು ರಚನಾಶಾಸ್ತ್ರ (ಲೆಕ್ಸಿಕಾಗ್ರಫಿ). ಮೊದಲನೆಯದು ನಿಘಂಟಿಗೆ ಸಂಬಂಧಿಸಿದ ಮೂಲ ತತ್ವಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿದರೆ ಎರಡನೆಯದು ನಿಘಂಟು ರಚನೆಯ ಕ್ರಮವನ್ನು ಪ್ರಾಯೋಗಿಕವಾಗಿ ತೋರಿಸಿಕೊಡುತ್ತದೆ. 'ಕುವೆಂಪು ಪದಸೃಷ್ಟಿ' ಕುವೆಂಪು ಸಾಹಿತ್ಯದ ಓದುಗರ ಪಾಲಿಗೆ ಒಂದು ಮಾರ್ಗಸೂಚೀ ನಿಘಂಟಾಗಿದೆ ಮತ್ತು ಇಂತಹ ನಿಘಂಟನ್ನು ರಚಿಸಲು ಬಯಸುವ ವಿದ್ಯಾರ್ಥಿಗಳಿಗೆ ಇದೊಂದು ಅಪ್ರೈಡ್ ಲೆಕ್ಸಿಕಾಗ್ರಫಿಯ ಪಠ್ಯವಾಗಿಯೂ ಒದಗಿ ಬರುತ್ತದೆ.
-ಟಿ. ಎನ್. ವಾಸುದೇವಮೂರ್ತಿ, ಸಹಪ್ರಾಧ್ಯಾಪಕ, ಆದಿಚುಂಚನಗಿರಿ ವಿಶ್ವವಿದ್ಯಾಲಯ
ಡಾ. ಜಿ. ಕೃಷ್ಣಪ್ಪ | Krishnappa G |
|
ಕೃಷ್ಣಪ್ಪ ಜಿ |
0 average based on 0 reviews.