
ಕತೆಗಾರಿಕೆಯ ಕೌಶಲವನ್ನು ಕತೆಗಾರನ ಆಳವಾದ ಸಂವೇದನಾಶೀಲತೆಯನ್ನು, ಸಮಾಜಮುಖಿಯಾದ ನೈಜ ಕಾಳಜಿಯನ್ನು ಹೊಂದಿರುವ ಗಟ್ಟಿಯಾದ ಕಥಾವಸ್ತುವುಳ್ಳ ಕತೆಗಳು ಸಂಕಲನದ ಮಹತ್ವವನ್ನು ಹೆಚ್ಚಿಸಿವೆ. ಪ್ರಕಾಶ ಅವರು ನೆಲಮೂಲದ ಸಂಸ್ಕೃತಿಯ ಸತ್ವದಿಂದ ವಿಶೇಷವಾಗಿ ಪುಷ್ಟಿಗೊಂಡವರು.
Category: | ಕನ್ನಡ |
Sub Category: | ಕಥಾ ಸಂಕಲನ |
Author: | ಪ್ರಕಾಶ್ ಪುಟ್ಟಪ್ಪ | Prakash Puttappa |
Publisher: | Amulya pustaka |
Language: | Kannada |
Number of pages : | |
Publication Year: | 2025 |
Weight | 300 |
ISBN | |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಪೊನ್ನಾಚಿ, ಮಲೆಮಹದೇಶ್ವರ ಬೆಟ್ಟದ ಪಕ್ಕದಲ್ಲಿರುವ ಪುಟ್ಟ ಹಳ್ಳಿ, ಸುತ್ತಲೂ ದಟ್ಟವಾದ ಕಾಡಿನಿಂದ ಆವರಿಸಿರುವ ಹಳ್ಳಿ, ಆ ಬಗ್ಗೆ ನಾವು ದೂರ ನಿಂತು ರೊಮ್ಯಾಂಟಿಕ್ ಆಗಿ ಮಾತನಾಡಬಹುದಾದರೂ ಅಲ್ಲಿಯ ಸುಖ ದಃಖಗಳು ಅಲ್ಲಿ ವಾಸಮಾಡುವವರಿಗೇ ಗೊತ್ತು. ಈ ಪ್ರದೇಶದ ಮಣ್ಣಿನ ಗುಣವೋ ಗಾಳಿಯ ಗುಣವೋ ಗೊತ್ತಿಲ್ಲ. ಇಲ್ಲಿ ಅನೇಕ ಪ್ರತಿಭಾವಂತರೂ ಸೃಜನಶೀಲರೂ ಹುಟ್ಟಿದ್ದಾರೆ. ಪ್ರಕಾಶ್ ಪುಟ್ಟಪ್ಪ ಅಂತಹವರಲ್ಲಿ ಒಬ್ಬರು. ಅವರ ಮೂಲ ಹೆಸರು ಜಯಪ್ರಕಾಶ್, ಚಾಮರಾಜನಗರ ಸಮೀಪದ ಗ್ರಾಮವೊಂದರಲ್ಲಿ ಪ್ರಾಥಮಿಕ ಶಾಲಾ ಉಪಾಧ್ಯಾಯರು, ತಮ್ಮ ವಿದ್ಯಾಭ್ಯಾಸ ಕಾಲದಲ್ಲಿ ಸಾಹಿತ್ಯವನ್ನು ಒಂದು ವಿಷಯವನ್ನಾಗಿ ಅಧ್ಯಯನ ಮಾಡಿದವರಲ್ಲ ಮತ್ತು ಬರವಣಿಗೆಗೂ ಮನಸ್ಸು ಕೊಟ್ಟಿರಲಿಲ್ಲ. ಮೊದಲು ಕವಿತೆಗಳ ಪುಸ್ತಕ 'ಮಣ್ಣಿಗೆ ಬಿದ್ದ ಮಳೆ' ಹೊರತಂದರು. ನಂತರ ಕತೆ ಬರೆಯಲು ಆರಂಭಿಸಿದರು.
ಇದೀಗ ಹದಿನಾಲ್ಕು ಕತೆಗಳ ಸಂಕಲನ ಹೊರತರುತ್ತಿದ್ದಾರೆ. ಇಲ್ಲಿಯ ಆನೇಕ ಕತೆಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡು ಓದುಗರನ್ನು ತಲುಪಿದೆ. ಕೆಲವು ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಮತ್ತು ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆಯನ್ನೂ ಗಳಿಸಿದೆ. ಪ್ರಕಾಶ್ ಪುಟ್ಟಪ್ಪ ಕವಿ ಮನಸ್ಸಿನ ಕತೆಗಾರ, ಇವರಿಗೆ ಈಸೂರು ಹೋರಾಟ ಒಂದು ಕತೆಗೆ ಪ್ರೇರಣೆ ನೀಡಿರುವುದು ಮತ್ತು ಅದನ್ನು ವಿಭಿನ್ನವಾಗಿ ನಿರ್ವಹಿಸಿರುವುದು ಅಚ್ಚರಿಯನ್ನು ತರುತ್ತದೆ. ತಮ್ಮ ಭಾಗದ ಧರ್ಮ ಸಂಬಂಧಿಯಾದ ಆಚರಣೆಗಳನ್ನೂ ಆಧರಿಸಿದ ಕತೆಯೂ ಇದೆ. ಭಾಷೆ, ನಿರ್ವಹಣೆ ಮತ್ತು ವಸ್ತುವಿನ ದೃಷ್ಟಿಯಿಂದ ನವೀನವೂ ಲವಲವಿಕೆಯದ್ದೂ ಆಗಿದೆ.
ಕೆ. ವೆಂಕಟರಾಜು
ಪ್ರಕಾಶ್ ಪುಟ್ಟಪ್ಪ | Prakash Puttappa |
0 average based on 0 reviews.