ಸಂಪಾದಕರ ಸದ್ಯಶೋಧನೆ ಭಾಗ 01
₹ 250 Original price was: ₹ 250.₹ 223Current price is: ₹ 223.
Secure Payments
Your payments are 100% secure
Pan India Shipping
Delivery between 2-8 Days
Return Policy
No returns accepted. Please refer our full policy
SYNOPSIS
ನನಗೆ ‘ವಿಶ್ವವಾಣಿ’ ಪತ್ರಿಕೆಯಲ್ಲಿ ಬರೆಯಲು ಆಗಲೇ ನಾಲೈದು ಅಂಕಣಗಳಿದ್ದವು. ಬೇರೆ ಕೆಲವು ಹೆಸರಿನಲ್ಲಿ ಬರೆಯುತ್ತೇನೆ ಎಂಬ ಆಪಾದನೆಗಳೂ ಇದ್ದವು. ಅವು ಸಾಲದು ಎಂಬಂತೆ, ಈ ‘ಸಂಪಾದಕರ ಸದ್ಯಶೋಧನೆ’ಯನ್ನು ನಾನು ಬೇಕೆಂದೇ ಮೈ ಮೇಲೆ ಎಳೆದುಕೊಂಡೆ. ನನ್ನ ಪಾಡಿಗೆ ನಾನಿದ್ದಿದ್ದರೆ ಯಾರೂ ಕೇಳುತ್ತಿರಲಿಲ್ಲ. ಅಷ್ಟಕ್ಕೂ, ನಾನು ಬರೆದಿದ್ದು ಕಮ್ಮಿಯಾಯಿತು ಎಂದು ಯಾವ ಓದುಗನೂ ದೂರು- ದುಮ್ಮಾನ ಹೇಳಿಕೊಂಡಿರಲಿಲ್ಲ. ಅಷ್ಟಾಗಿಯೂ ಸುಮ್ಮನಿರದೇ, ಉದ್ದೇಶಪೂರ್ವಕವಾಗಿ ಕೆಡವಿಕೊಂಡ ಬರಹಗಳಿವು. ಬರೆಯುವುದು ಕಷ್ಟ ಅದರಲ್ಲೂ ದಿನವೂ ಬರೆಯುವುದು ಇನ್ನೂ ಕಷ್ಟ. ಇದು ನಮಗೆ ನಾವು ವಿಧಿಸಿಕೊಳ್ಳಬಹುದಾದ ಹಿತವಾದ ಶಿಕ್ಷೆ, ಆದರೆ ಈ ಶಿಕ್ಷೆಯನ್ನು ಓದುಗರಿಗೆ ವರ್ಗಾಯಿಸಬಾರದಷ್ಟೇ, ಅದನ್ನು ಮಾಡಿಲ್ಲ ಎಂದು ಎಲ್ಲಿ ಬೇಕಾದರೂ ಪ್ರಮಾಣ ಮಾಡಿ ಹೇಳಬಲ್ಲೆ, ಈ ಪುಸ್ತಕವನ್ನು ಯಾವ ಪುಟದಿಂದ ಬೇಕಾದರೂ ಓದಬಹುದು. ಹಿಂದಿನದಕ್ಕೂ ಮುಂದಿನದಕ್ಕೂ ಸಂಬಂಧವಿಲ್ಲ, ಪ್ರತಿ ಬರಹವೂ ಏಕಾಂಗಿ, ಇವು ಯಾವ ಪಂಥ, ಪ್ರಕಾರ, ಎಡ-ಬಲದ ಹಂಗಿಲ್ಲದ, ವಿಮರ್ಶಕರ ತೆಕ್ಕೆಗೆ ಸಿಗದ, ನಿರುಪದ್ರವಿ, ನಿರ್ವಿಕಾರ ಗುಣ ಹೊಂದಿದವು. ಆ ಕ್ಷಣಕ್ಕೆ ಹೊಸ ವಿಷಯ ಶೋಧಿಸುವ, ಹೇಳುವ ಹಂಬಲವೇ ಈ ಬರಹದ ತೇಲು ಭಾವ,
ವಿಶ್ವೇಶ್ವರ ಭಟ್
ABOUT AUTHOR
Opinion of Others
There are no others opinion yet.
Reviews
There are no reviews yet.