ಹೃದಯದ ಮಾತು

 136

Buy E_Book

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .2 kg
Author
Page Nos
Publications

SYNOPSIS

ಅಸಲಿಗೆ ಹೃದಯವೆಂದರೆ ಏನು? ಪ್ರೀತಿ, ದ್ವೇಷ, ಕೋಪ-ತಾಪ, ಆಘಾತ ಎಲ್ಲವನ್ನೂ ಯಾಕೆ ಹೃದಯಕ್ಕೆ ಸಮೀಕರಿಸುತ್ತೇವೆ? ‘ಅವನು ಬಹಳ ಹೃದಯವಂತ ಬಿಡಲೇ’ ಎಂದು ಮೆಚ್ಚುಗೆಯಿಂದ ಮಾತನಾಡುವ ನಾವು ‘ತೀರಾ ನೊಂದ ಹೃದಯ ಕಣೋ ಅವಳದ್ದು!’ ಎಂದೂ ಉದ್ಗಾರ ತೆಗೆಯುತ್ತೇವೆ. ಅಂದರೆ ಒಂದು ಮುಟಿಗೆಯಷ್ಟಿರುವ ಅದು ಕೇವಲ ರಕ್ತ-ಮಾಂಸದ ಮುದ್ದೆ ಅಲ್ಲ. ನಾವು ಎದುರಿಸುವ ಎಲ್ಲ ಆಘಾತಗಳ ‘ಶಾಕ್ ಅಬ್ಬರ್ವರ್’ ಅದು. ಹೃದಯವೆಂದರೆ ಮನಸ್ಸು ಕೂಡ ಹೌದು. ನಮ್ಮ ಇಡೀ ದೇಹದ ‘ಜೀವ’ ಭದ್ರವಾಗಿರುವುದು ಈ ಕವಾಟದಲ್ಲಿ. ಮನಸ್ಸು ಮತ್ತು ಹೃದಯ ಒಂದೇ ದೇಹದ ಎರಡು ಮುಖಗಳು. ಮನಸ್ಸು ಕುದ್ದು ಹೋದರೆ ಹೃದಯವೆಂದೂ ಹಿರಿಹಿರಿ ಹಿಗ್ಗುವುದಿಲ್ಲ. ನಮ್ಮ ಭಾವಕ್ಕೆ ಧಕ್ಕೆಯಾದರೆ ಅದರ ನೇರ ಪರಿಣಾಮ ಬೀರುವುದು ಹೃದಯದ ಮೇಲೆ, ಒಬ್ಬ ಕವಿ ಹೃದಯಕ್ಕೆ ರಮ್ಯತೆಯ ಪ್ರಭಾವಳಿಯನ್ನು ತೊಡಿಸುತ್ತಾನೆ. ಅದು ಸದಾ ನೆಮ್ಮದಿಯ ಗೂಡಾಗಿರಲಿ ಎಂದು ಅದನ್ನು ಪ್ರೀತಿಯಿಂದ ಅದ್ದಿ ತೆಗೆಯುತ್ತಾನೆ. ಆದರೆ ಒಬ್ಬ ವೈದ್ಯ ಅದರ ಕವಾಟದಲ್ಲಿ ಸರಿಯಾಗಿ ರಕ್ತದ ಚಲನೆ ನಡೆಯುತ್ತಿದೆಯೇ ಎಂದು ನೋಡುತ್ತಾನೆ. ಅದಕ್ಕೆ ಯಾವುದೇ ರೀತಿಯಲ್ಲಿ ಆಘಾತವಾಗದಂತೆ ವಹಿಸಬೇಕಾದ ಎಚ್ಚರಿಕೆಗಳನ್ನು ಸೂಚಿಸುತ್ತಾನೆ. ಹಾಗೆ ನೋಡಿದರೆ ಇಬ್ಬರದ್ದೂ ಚಿಕಿತ್ಸಕ ದೃಷ್ಟಿಕೋನವೇ ಆಗಿದೆ.
“This heart will also drown in someone’s sea…!” ನಮ್ಮ ಹೃದಯ ಸಂಕುಚಿತಗೊಳ್ಳಲು ನಾವೊಬ್ಬರೇ ಕಾರಣವಲ್ಲ. ಇತ್ತೀಚಿನ ದಿನಗಳಲ್ಲಿ ಅಧಿಕವಾಗಿರುವ ಹೃದಯಾಘಾತದ ಪ್ರಕರಣಗಳಿಗೆ ಕಾರಣಗಳನ್ನು ಕಂಡುಕೊಳ್ಳುವ ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಲಾಗಿದೆ. ಇದರ ಜೊತೆಗೆ ಮನುಷ್ಯನ ‘ಹೃದಯ ಶೂನ್ಯತೆ’ಗೆ ಮೊದಲು ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂಬುದು ‘ಹೃದಯ ತಜ್ಞ ಡಾ.ಸಿ.ಎನ್. ಮಂಜುನಾಥ್ ಅವರ ಅಭಿಮತ. ಅವರ ಮಾತುಗಳನ್ನು ಕೇಳುತ್ತಿದ್ದರೆ ನಾವು ನಿಜಕ್ಕೂ ಎಲ್ಲಿ ಎಡವುತ್ತಿದ್ದೇವೆ ಎಂಬುದು ವೇದ್ಯವಾಗುತ್ತದೆ. ಎಷ್ಟೋ ಬಾರಿ ‘ರವಷ್ಟು ಹೃದಯ ಹೇಳಿದ ಮಾತನ್ನು ಕೇಳಬೇಕಿತ್ತು ಕಲಾ’ ಅಂದುಕೊಳ್ಳುತ್ತೇವೆ. ಅಷ್ಟೊತ್ತಿಗೆ ಕಾಲ ಮಿಂಚಿರುತ್ತದೆ. ಹೃದಯದ ಮೇಲೆ ಹೆಚ್ಚು ಭಾರ ಬಿದ್ದಿರುತ್ತದೆ. ಹಾಗಾಗಿ ಮನಸ್ಸನ್ನು ಅವಳ ಹೆಗಲ ಮೇಲಿಟ್ಟು ಹೃದಯದ ಭಾರ ಇಳಿಸಿಕೊಳ್ಳಿ.

ABOUT AUTHOR

ಕಡಲತಡಿಯ ತಾಸಿ ಇವರ ಊರು, ಅದಿರುವುದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ, ತಂದೆ ರಂಗನಾಥ್ ಚಾಂದ್‌ ಮತ್ತು ತಾಯಿ ಸೀತಾ, ಪದವಿ ಪಡೆದಿದ್ದು ಕುಂದಾಪುರದ ಭಂಡಾರ್‌ಕಾರ್ಸ್‌ ಕಾಲೇಜಿನಲ್ಲಿ, ಸ್ನಾತಕೋತ್ತರ ಪದವಿ ಮೈಸೂರು ವಿವಿಯಲ್ಲಿ, ಪತ್ರಕರ್ತ ವೃತ್ತಿಗೆ, ಬರೆಯುವ ತುಡಿತಕ್ಕೆ ಮೊದಲು ನೀರೆರೆದಿದ್ದು ವಡ್ಡರ್ಸೆ ರಘುರಾಮ ಶೆಟ್ಟರ 'ಮುಂಗಾರು'. ಅಲ್ಲಿಂದ ಮುಂದೆ 'ಸಂಯುಕ್ತ ಕರ್ನಾಟಕ', 'ಕನ್ನಡಪ್ರಭ', 'ಉದಯ ಟಿವಿ', ಟೈಮ್ಸ್ ಆಫ್ ಇಂಡಿಯಾ ಕನ್ನಡ,    Read More...

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಹೃದಯದ ಮಾತು”

Your email address will not be published. Required fields are marked *