nil
ಗ್ರೀಕ್ ಇತಿಹಾಸದಲ್ಲೇ ಒಮ್ಮೆ ಕಾಲ್ಪನಿಕ… ಒಮ್ಮೆ ಪೌರಾಣಿಕ… ಮತ್ತೊಮ್ಮೆ ಜನಪದ ಕಥೆ ಎನ್ನುವ ವಿವಾದದೊಂದಿಗೇ ಅತ್ಯಂತ ಹೆಸರುವಾಸಿಯಾದ… ಅತ್ಯಂತ ಭೀಕರ ಯುದ್ಧವೊಂದಕ್ಕೆ ನಾಂದಿಯಾದ ಒಂದು ಅಮರ ಪ್ರೇಮಕಥೆ ಈ ” ಟ್ರಾಯ್” .
@#
#
ಈ ಐದೂ ರುಪಕಗಳಲ್ಲಿ ನಾನು ಕಂಡ ಕಾಣೆ ಶಾಂತಿಯ ಸಂವೇದನೆ. ಮೊದಲ ರಂಗರೂಪ ಮಾನವತೆಯ ಕವಿ ಪುತಿನ ಅವರ ಜೀವನವ ಆಧರಿಸಿದ್ದು. ಅಲ್ಲಿ ಫಲಾಪೇಕ್ಷೆಗಳಿಲ್ಲದ ಸ್ವೀಕೃತಿ ಮತ್ತು ಜೀವನ ರಾಗದೊಳು ಭವದ ಮಾಯೆ ಇಲ್ಲದಂತ ನಾದದ ಬೇಡಿಕೆ, ಇದು ಕೂಡಾ ಶಾಂತಿಯ ಬಯಕೆ. ಅದನು ಕವಿ ಕಾಣುವುದು, ಆತನ ಕೃತಿಯ ಉಳಿಯುವಿಕೆಯಲ್ಲಿ. ಇದೇ ಭಾವದೊಳಿದೆ ಜಿ ಎಸ್ ಎಸ್ ಅವರ ಕುರಿತ ಕಾವ್ಯ ರೂಪಕ. ಕವಿ ಅದೃಶ್ಯನಾದರೂ ಆತನ ಕಾವ್ಯ ಜನಸಮುದಾಯದಲ್ಲಿ ಕಾಣಿಕೆಯಾಗಿರುತ್ತದೆ. ಗೀತನಾಟಕವಾಗಿರುವ "ಧ್ರುವನ ದಾರಿ", ಸಾಧಿಸುವ ಛಲವಿದ್ದಾಗ, ಗುರಿಯ ದಾರಿ ಸ್ಪಷ್ಟ ಗೋಚರ. ಹಾಗೇನೇ "ಗಂಗಾತರಂಗವು" ಹೇಗೆ ನೆಲವ ಮುಟ್ಟಿದ ಗಂಗೆ ಜೀವ ಜಂತುಗಳಿಗೆ ಜೀವ ಸೆಲೆಯಾಗಿ, ಲೋಕ ಪಾಲಿನಿಯಾಗಿ, ಶುಭದಾಯಿನಿ ಎಂಬದನ್ನು ಕಾಣಿಸಲಾಗಿದೆ. ಕೊನೆಯದು ಭೀಮ ದುರ್ಯೋಧನರ ನಡುವಿನ ಅಂತಿಮ ಸಂಗ್ರಾಮದ ಗಧಾಯುದ್ಧದ ಚಿತ್ರಣ. ಯುದ್ಧದಲ್ಲಿನ ಸೋಲು ಗೆಲುವಿಗೆ ಅರ್ಥವಿಲ್ಲ, ಆಸನ ಇರುವವರೆಗೆ ಯುದ್ಧ ನಿಲ್ಲದು, ಅದಕ್ಕೆ ಶೂನ್ಯ ಸಿಂಹಾಸನವೊಂದೇ ಉಳಿಯುವುದು, ಅದೂ ಅಲ್ಲಮನ ಶೂನ್ಯ ಸಿಂಹಾಸನ ಮಾತ್ರ ಎಂಬ ಚಿತ್ರಣ ಕಾಣುತ್ತೇವೆ. ಒಟ್ಟಿನಲ್ಲಿ ಇವೆಲ್ಲವೂ ರ೦ಗದ ಮೇಲೆ ರೂಪುಗೊಂಡಾಗ ಸಾರ್ಥಕತೆಯ ಭಾವ. ಹಾಗೇನೆ ರಂಗಕರ್ಮಿಗಳಿಗೊಂದು ಆಹ್ವಾನ. ಅದು ಸಾಧ್ಯವಾಗಲಿ. ಶ್ರೀಪತಿ ಮಂಜನಬೈಲು ನಟ, ರಂಗ ನಿರ್ದೇಶಕ
ಡಾ ಎಂ ಎಸ್ ಆಶಾದೇವಿ
ಶತಾವಧಾನಿ ಡಾ. ಆರ್. ಗಣೇಶ್
ಎನ್ ರಾಮನಾಥ್
Showing 2011 to 2040 of 5492 results