ಅಂಗಿಯ ಗುಂಡಿ, ಚಪ್ಪಲಿಗಂಟಿದ ಕೆಸರು, ಮೇಜನ್ನು ತಯಾರಿಸಲು ಬಳಸಿದ ಮರ, ವ್ಯಕ್ತಿಯೊಬ್ಬ ಪೆನ್ನನ್ನು ಹಿಡಿಯುವ ರೀತಿ, ನಡಿಗೆಯಲ್ಲಿರುವ ಚೂರೇ ಚೂರು ವಕ್ರತೆ, ಕೋಣೆಯಲ್ಲಿನ ಪರಿಮಳ, ಕರವಸ್ತ್ರಕ್ಕಂಟಿದ ಕಣ್ಣೀರು- ನಾವೆಲ್ಲ ನಿರ್ಲಕ್ಷಿಸಿ ಮುನ್ನಡೆಯಬಹುದಾದ ಇಂಥ ಸಣ್ಣ ವಿಷಯಗಳೇ ಷರ್ಲಾಕ್ ಹೋಮ್ಸ್ನನ್ನು ಹಿಡಿದು ನಿಲ್ಲಿಸುತ್ತಿದ್ದವು. ಅಪರಾಧದ ಸ್ಥಳದಲ್ಲಿ ಕಂಡ ನಗಣ್ಯವೆನ್ನುವಂತೆ ತೋರುವ ಸುಳಿವುಗಳನ್ನು ಹಿಂಬಾಲಿಸಿ, ಅವಕ್ಕೆ ತನ್ನ ಸರಿಸಾಟಿಯಿಲ್ಲದ ತರ್ಕಸರಣಿಯನ್ನು ಹೊಂದಿಸಿ, ಅಚ್ಚರಿಯೆನಿಸುವಂತೆ ಕೊಲೆಗಾರನನ್ನು ಪತ್ತೆ ಮಾಡುವ ವಿಶಿಷ್ಟ ದಾರಿಯೊಂದು ಅವನಿಗೆ ಗೊತ್ತಿತ್ತು. ಟೋಪಿ, ಸಿಗಾರ್ ಹಾಗೂ ಸಣ್ಣದೊಂದು ಭೂತಗನ್ನಡಿಯ ಜೊತೆ ಜಗತ್ತಿನ ಓದುಗರೆಲ್ಲರ ಮನಸ್ಸಿನಲ್ಲಿ ಅಷ್ಟೊತ್ತಿದಂತೆ ಉಳಿದಿರುವ ಪತ್ತೇದಾರ ಷರ್ಲಾಕ್ ಹೋಮ್ಸ್. ಈ ಕಾಲ್ಪನಿಕ ಪಾತ್ರದ ಸೃಷ್ಟಿಕರ್ತ ಅರ್ಥರ್ ಕಾನನ್ ಡಾಯ್ಸ್, ಹೋಮ್ಸ್ ಇರುವವರೆಗೆ ತಾನು ಬೇರೇನೂ ಬರೆಯಲಾರೆ ಎಂದೆನಿಸಿ ಒಂದು ಕತೆಯಲ್ಲಿ ಅವನನ್ನು ಸಾಯಿಸಿಬಿಟ್ಟನಂತೆ. ಆದರೆ ಅದಕ್ಕೆ ಓದುಗರ ಪ್ರತಿಕ್ರಿಯೆ ಹೇಗಿತ್ತೆಂದರೆ, ವಿಧಿಯಿಲ್ಲದೆ ಕೆಲ ವರ್ಷಗಳ ನಂತರ ಡಾಯ್ಸ್ ಇನ್ನೊಂದು ಕತೆ ಬರೆದು ಹೋಮ್ಸ್ನನ್ನು ಬದುಕಿಸಬೇಕಾಯ್ತು! ಅದ್ಭುತ ಪಾತ್ರಗಳೇ ಹಾಗೆ ಅಜರಾಮರ- ಸೃಷ್ಟಿಕರ್ತನೇ ಬಯಸಿದರೂ ಅವು ಸಾಯುವುದಿಲ್ಲ!
ಪರ್ವತವಾಡಿ...ಅಲ್ಲ..ಅಲ್ಲ.ಪರ್ವತವಾಣಿ ಅದು ನಾನೇ
ಪರ್ವತವಾಡಿ...ಅಲ್ಲ ಅಲ್ಲ..ಪರ್ವತವಾಣಿ ಅದು ನಾನೇ
ಕಾಡುವ ಕಥೆ ಥಟ್ಟನೆ ಬರೆಯಿಸಿಕೊಳ್ಳುವುದಿಲ್ಲ. ಅದು ಒಳಗೊಳಗೆ ವಿಸ್ತಾರಗೊಳ್ಳುತ್ತದೆ. ಅಲ್ಲಿ ವಿಷಾದ ಮಡುಗಟ್ಟಿದಂತೆ ಮಾತು ಮೌನವಾಗುತ್ತದೆ, ಪ್ರೇಮ್ ಚಂದ್, ಅಲೆಕಾಂಡರ್ ಪುಕ್ರೀನ್, ಕಾಮುಗಳ ಕಾದಂಬರಿಗಳು ಘಟಿಸಿದ್ದೇ ಹೀಗೆ ಘನ ಗಂಭೀರ ಕಾರ್ಮೋಡಗಳು ಆಕಾಶ ತುಂಬಿದಂತೆ ತಟ್ಟನೆ ಮಳೆ ಸುರಿಯುವುದಿಲ್ಲ. ಓಡಾಡುತ್ತವೆ, ಕಾಡುತ್ತವೆ ಕೊನೆಗೊಮ್ಮೆ ಸುರಿದುಬಿಟ್ಟರೆ ನಿಂತ ನೆಲದ ಗತಿ ಏನಾದೀತು ಎನ್ನುವ ಭಯ ಹುಟ್ಟಿಸುತ್ತವೆ. ಎಲ್ಲ ತಿಳಿದೂ ಈ ತಿಳುವಳಿಕೆಯನ್ನು ತೆಗೆದುಕೊಂಡು ಏನು ಮಾಡುವುದು ಎನ್ನುವ ಹತಾಶದ ಮುಂದೆ ನಮ್ಮನ್ನು ನಿಲ್ಲಿಸುತ್ತವೆ. ಬಹುತೇಕ ಈ ಕಾದಂಬರಿಯ ಕಥಾವಸ್ತು ಹಾಗೆಯೇ. ಇಲ್ಲಿ ಪಾತ್ರಗಳು ನೆಪ ಮಾತ್ರ ಸಂಬಂಧಗಳ ತಾತ್ವಿಕತೆಯೇ ಕಾದಂಬರಿ ನಮಗೆ ಒಡ್ಡುವ ಪ್ರಶ್ನೆ. ಕಾದಂಬರಿಕಾರ್ತಿ ಸುಶೀಲಾ ಡೋಣೂರ ಕಣ್ಣಿಗೆ ಕಂಡರೂ ಎಂಬ ಮಾತ್ರಕ್ಕೆ ಮನುಷ್ಯರನ್ನು ನೋಡಲಿಲ್ಲ. ಬದಲಾಗಿ ಓದುವ ಗಂಭೀರ ಯತ್ನವನ್ನು ಮಾಡಿದ್ದಾರೆ. ನಮ್ಮ ಸಂದರ್ಭದ ಅತಿ ದೊಡ್ಡ ದುರಂತದ ಮುನ್ನುಡಿಯ ಸಾಲುಗಳನ್ನ ಪ್ಲೇ ಅವರು ಇಲ್ಲಿ ಇಟ್ಟಿರುವುದು. ಕಾದಂಬರಿ ಇನ್ನೂ ಬರಬೇಕಾಗಿದೆ. ಆಗ ಅದು ಮತ್ತೊಂದು ರಿಸರಕ್ಷನ್ ಆಗಲು ಸಾಧ್ಯವಿದೆ. 'ಬದುಕೆನ್ನುವ ವಿಕಾರದ ಅರ್ಥವನ್ನು ಹುಡುಕುತ್ತಾ ಹೋದಷ್ಟು ಅದು ಬದಲಾಗುತ್ತಾ ಹೋಗುತ್ತದೆ. ಅದು ಒಂದು ರೀತಿ ಕೈಯೊಳಗೆ ಸಿಕ್ಕೂ ಹಾರಿ ಹೋಗುವ ಚಿಟ್ಟೆಯಂತೆ' ಇವು ಬೇರುಗಡಿತವಾಗಿ ಬದುಕುವ ನಗರದ ಮನಸ್ಸಿನಲ್ಲಿ ನಿತ್ಯ ಸಾವಿರ ಬಾರಿ ಹುಟ್ಟಿ ಸಾಯುವ ಸಹಾಯವಿಲ್ಲದ ವಾಸ್ತವದ ಸಾಲುಗಳು, ಕಾದಂಬರಿಯ ವಸ್ತು ಹೊಸದು, ಅಷ್ಟೇ ಸಂಕಟದ ಭಾಷೆ, ಲೇಖಕಿಯನ್ನು ಕುತೂಹಲ ಕೆರಳಿಸುವ ಅಭಿವ್ಯಕ್ತಿ, ಈ ಕಾರಣ ಅಭಿನಂದಿಸದೆ ಇರಲಾಗದು - ರಾಗಂ
nil
#
ಜಯಪ್ರಕಾಶ ಮಾವಿನಕುಳಿಯವರು ಸ್ವತಂತ್ರ ಭಾರತದಲ್ಲಿ ಚಡಪಡಿಸುತ್ತಿರುವ ಸೂಕ್ಷ ಸಂವೇದನೆಯ ವ್ಯಕ್ತಿಗಳ ಅಪಾರ ಸಂಕಷ್ಟಗಳನ್ನು ಸೃಜನಶೀಲತೆಯ ಧ್ವನಿಪೂರ್ಣವಾಗಿ ತಮ್ಮ ಅತ್ಯಂತ ಕಥೆಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಮಾನವೀಯ ಮೌಲ್ಯಗಳು ಸಮಾಜದಲ್ಲಿ ಅಧೋಗತಿಗೆ ಹೋಗುತ್ತಿರುವ ಬಗ್ಗೆ ಅಪಾರ ಸಿಟ್ಟು ಅವರ ಕಥೆಗಳಲ್ಲಿ ಹಾಸುಹೊಕ್ಕಿವೆ. ಅವರು ವರ್ತಮಾನದ ಸಂಗತಿಗಳನ್ನು ಹೇಳುತ್ತಲೇ ಭವಿಷ್ಯದ ಬೆಳಕಿನ ಬಗ್ಗೆ ಬರೆಯುತ್ತಾರೆ. ತಮ್ಮ ಪ್ರತಿಭಾ ಶೈಲಿಯ ಮೂಲಕ ಅವರು ತಮ್ಮ ಕಥೆಗಳಿಗೆ ಸ್ನಾಯುಶಕ್ತಿಯನ್ನು ತುಂಬಿದ್ದಾರೆ.
ನಮಗೆ ಜನ್ಮ ಕೊಟ್ಟ ತಾಯಿ ತಂದೆಯ ಋಣ ತೀರಿಸಲು ಸಾಧ್ಯವಿಲ್ಲ; ಭಾಮಳಿಗೆ ತನ್ನ ಅಪ್ಪನ ಸಂಧ್ಯಾಕಾಲದಲ್ಲಿನ ಜೀವನ ಚೇತೋಹಾರಿಯಾಗಿಡಲು ಹಾಗೂ ನೆಮ್ಮದಿಗೆ ಎಡೆ ಮಾಡಿಕೊಡಲು ಋಣ 'ಪ್ರಾಪ್ತಿ' ಆಗಿದ್ದು ಸಂತೋಷವೆನಿಸಿತು. ಈ ಧಾರಾವಾಹಿಯಲ್ಲಿನ ಪ್ರತಿಯೊಂದು ಪಾತ್ರವೂ ವಾಸ್ತವಿಕತೆಗೆ ಹತ್ತಿರವಾಗಿದೆ. ಟಿ.ಎಸ್. ಪ್ರತಿಭಾ, ಚಿತ್ರದುರ್ಗ ಮನೋಜ್ಞವಾಗಿ ಓದಿಸಿಕೊಂಡು ಹೋದ ಧಾರಾವಾಹಿ ಇಷ್ಟು ಬೇಗ ಮುಗಿಯಿತೇ ಅಂತ ಅನ್ನಿಸಿತು. ಕಾದಂಬರಿಯಲ್ಲಿ ಬರುವ ಚಿದಾನಂದ, ಸತ್ಯಭಾಮ, ಭಾರ್ಗವ. ಶೀಲಾ ಈ ಪಾತ್ರಗಳ ವ್ಯಕ್ತಿತ್ವ ನಿರೂಪಣೆ ಸಹಜವಾಗಿದೆ. ಜೀವನದಿಂದ ಆರಿಸಿ ತೆಗೆದಂತೆ ಇದೆ. ಸತ್ಯಭಾಮ ಅಪ್ಪನನ್ನು ಅನುಮಾನಿಸುವ ವಯಸ್ಸಿನಿಂದ ಮೊದಲ್ಗೊಂಡು, ಜೀವನದ ಅನುಭವಗಳಿಂದ ಮಾಗಿ, ಕೊನೆಗೆ ಅಪ್ಪನನ್ನು ಒಪ್ಪಿಕೊಳ್ಳುವ, ತನ್ನ ಬಳಿಯೇ ಇರಿಸಿಕೊಳ್ಳುವ ಪರಿ ಅನನ್ಯವಾಗಿದೆ. - ಬಿ.ವಿ. ರಾಜಲಕ್ಷ್ಮಿ, ಬೆಂಗಳೂರು ಧಾರಾವಾಹಿ ಮನಮುಟ್ಟುವಂತಿತ್ತು. ತನ್ನ ಅಪ್ಪನನ್ನು ಧಿಕ್ಕರಿಸಿ ಅಂತರ್ಜಾತಿ ವಿವಾಹವಾಗಿ ಮಾನಸಿಕ ಯಾತನೆ ಅನುಭವಿಸಿ, ಸುಗಮ ಬದುಕು ಕಂಡುಕೊಂಡ ಭಾಮ, ತನ್ನ ಅಪ್ಪನನ್ನು ಕರೆತರಲು ವೆಂಕಟೇಶನೊಂದಿಗೆ ಚರ್ಚಿಸಿದಾಗ, ನಾಳೆ ನಮಗೂ ಇಂತಹ ಸ್ಥಿತಿ ಬರಬಹುದು. ನಾಳೆ ನಮ್ಮ ಮಗಳು ನಮ್ಮನ್ನು ನೋಡಿಕೊಳ್ಳಬೇಕು. ನಾವು ಅವರಿಗೆ ಮೇಲ್ಪಂಕ್ತಿ ಆಗಬೇಕೆ ಹೊರತು ತಪ್ಪು ಮಾದರಿ ಆಗಬಾರದು ಎಂಬ ವೆಂಕಟೇಶನ ಉದಾತ್ತ ಮಾತುಗಳಿಂದ ಭಾಮಾಳ ಹೃದಯ ತುಂಬಿ ಬಂದು ತನ್ನ ತಂದೆಯನ್ನು ಕರೆತರುವ ನಿರ್ಧಾರ ಮಾಡಿದ್ದು ಶ್ಲಾಘನೀಯ. ಎಂ. ಟಿ. ರಮಾನಂದ ರೆಡ್ಡಿ, ಚಿತ್ರದುರ್ಗ ಧಾರಾವಾಹಿ ಕೊನೆಯ ಕಂತಿನಲ್ಲಿ ಗಳಗಳನೆ ಅಳುವಂತೆ ಮಾಡಿಬಿಟ್ಟಿತು. ಮನುಷ್ಯ ಸಂಬಂಧಗಳ ಅನಾವರಣ ಎಷ್ಟು ಚೆನ್ನಾಗಿತ್ತೆಂದರೆ ವಸುಮತಿ ಉಡುಪರಿಗೆ ಮಾತ್ರ ಸಾಧ್ಯವೇನೋ ಇಂತಹ ಬರವಣಿಗೆ ಎನಿಸಿತು.
NA
ಬೇಲೂರು ರಾಮಮೂರ್ತಿ ಸಾಹಿತಿ ಬೇಲೂರು ರಾಮಮೂರ್ತಿ ಅವರು ಮೂಲತಃ ಮೈಸೂರಿನವರು. ತಮ್ಮ ಹಾಸ್ಯ ಲೇಖನಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು. ಅವರು 1950 ಜೂನ್ 30ರಲ್ಲಿ ಜನಿಸಿದರು. ‘ಕಥಾ ಕುಸುಮ, ಕಥಾ ಕನ್ನಡಿ, ಕಥಾ ಬಿಂಬ, ಆಕಾಶದಿಂದ ಧರೆಗೆ’ ಅವರ ಕತಾ ಸಂಕಲನಗಳು. ‘ಪ್ರಬಂಧ, ನಾಟಕ, ಕಾದಂಬರಿ, ಹಾಸ್ಯ’ ಪ್ರಕಾರಗಳಲ್ಲಿ ಕೃಷಿ ಸಾಧಿಸಿದ್ದಾರೆ.
ಅಪರಂಜಿ ಶಿವು
Showing 151 to 180 of 270 results