nil
#
ಹೇಳವ್ವ ಚಾಮುಂಡಾ ಯಾರು ನೀನು ? / Helavva Chamunda ...Yaru Neenu
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಸಹಾಯಕ ದಾಖಲೀಕರಣ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಸುಮಂಗಲಾ ಅತ್ತಿಗೇರಿ ಅವರ 'ಹೊಸ ಹೆಜ್ಜೆ ಹಾಕೋಣ : ಸಾರ್ಥಕ ಬದುಕಿನತ್ತ' ಕೃತಿಯನ್ನು ಎತ್ತಿಕೊಂಡಾಗ, ತಂಗಾಳಿಗೆ ಮುಖ ಮಾಡಿದ ಅನುಭವ, ಆರಂಭದಿಂದ ಕೊನೆಯ ಅಧ್ಯಾಯದ ತನಕ, ಒಂದು ನಿರಾತಂಕ, ಸರಾಗ ಓದಿನ ಸಾರ್ಥಕ ಓದಿನ ಪಯಣದಲ್ಲಿ ಸಹಪಥಿಕನಾದ ಅನುಭವ ನನ್ನದಾಗಿತ್ತು. ಡಾ. ಸುಮಂಗಲಾ ತೀರಾ ಸಹಜವಾಗಿ, ಸರಳವಾಗಿ ತಮ್ಮ ಅನಿಸಿಕೆಗಳನ್ನು ಹೇಳುತ್ತಾ, ಒಂದು ಅನೂಹ್ಯ ಅನುಭವದ ಬದುವಿನೆಡೆಗೆ ನಮ್ಮನ್ನು ತಂದು ನಿಲ್ಲಿಸುತ್ತಾರೆ. ಈ ಕೃತಿಯ ಹೆಚ್ಚುಗಾರಿಕೆಯಿರುವುದೇ ಇಲ್ಲಿ. ಈ ಕೃತಿಯಲ್ಲಿನ ಬರಹಗಳೆಲ್ಲವೂ ಒಂದು ನಿರ್ದಿಷ್ಟ ಆಶಯ, ಉದ್ದೇಶಗಳನ್ನು ಹೊಂದಿವೆ. ಪ್ರತಿಯೊಂದೂ ವಿಷಯ ವಸ್ತುವೈವಿಧ್ಯತೆಯಿಂದ ಕೂಡಿದೆ. ಪ್ರತಿ ಅಧ್ಯಾಯದಲ್ಲಿ ಲೇಖಕಿ ಪ್ರಸ್ತಾಪಿಸಿದ ವಿಚಾರಗಳು ಚಿಂತನೆಗೆ ಹಚ್ಚುತ್ತವೆ. ನಾವೂ ಸಾರ್ಥಕ ಬದುಕಿನತ್ತ ಹೆಜ್ಜೆ ಹಾಕಬೇಕು ಎಂಬ ಉತ್ಕಟ ತುಡಿತವನ್ನು ಉಂಟು ಮಾಡುತ್ತವೆ. ನಮ್ಮ ವ್ಯಕ್ತಿತ್ವ ವಿಕಸನಕ್ಕೆ ದಾರಿದೀವಿಗೆಯಾಗುವ ಪ್ರೇರಣೆಯನ್ನು ನಮ್ಮಲ್ಲಿ ಮೂಡಿಸುತ್ತದೆ. ಡಾ. ಸುಮಂಗಲಾ ಅವರ ಬರಹ ನಿರ್ಮಲ ಚಿಂತನೆಯ, ಸಾರ್ಥಕ ಬದುಕನ್ನು ಹೊಂದುವ ಗುರಿ ಹೊಂದಿದ್ದು, ಆ ದಿಕ್ಕಿನಲ್ಲಿ ಓದುಗರನ್ನು ಕರೆದೊಯ್ಯುವ ಸಮಷ್ಟಿ ಪ್ರಜ್ಞೆ ಜಾಗೃತಗೊಳಿಸುವ ಹಂಬಲ ಹೊಂದಿದೆ.
Showing 3511 to 3540 of 3541 results