• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
back

Publishers

Categories

Sub Categories

Authors

Languages

Book Type

Clear All
Filter
ಹಾಣಾದಿ | Hanadhi

nil

₹110   ₹98

ಹಾಲಲ್ಲಿ ಕೆನೆಯಾಗಿ... | Haalalli Keneyaagi ...

ಜೀವನೋತ್ಸಾಹ ಮತ್ತು ವಿಷಾದ ಹಾಸುಹೊಕ್ಕಾಗಿರುವ ಸಂಗತಿಗಳನ್ನು ಬಿ.ಯು. ಗೀತಾ ಸೊಗಸಾಗಿ ಹಿಡಿದಿಡಬಲ್ಲ ಕಾದಂಬರಿಕಾರರು ಗೀತಾ ಸಂಭಾಷಣೆಯಲ್ಲೇ ಕತೆ ಕಟ್ಟುತ್ತಾ ಹೋಗುತ್ತಾರೆ. ಜೀವನಾನುಭವ, ಕಲ್ಪನೆ ಮತ್ತು ಬಾಲ್ಯದ ನೆನಪುಗಳೊಂದಿಗೆ ಬರೆಯುವ ಗೀತಾ ಸೃಷ್ಟಿಸುವ ಪಾತ್ರಗಳು ಕೂಡ ಬದುಕಿಗೆ ಅಂಟಿಕೊಂಡಂತೆ ಇರುತ್ತವೆ. ಹಾಲಲ್ಲಿ ಕೆನೆಯಾಗಿ ಕಾದಂಬರಿಯ ಶೀರ್ಷಿಕೆಯಲ್ಲೇ ಗೀತಾ ಅವರಿಗೆ ವಿಶಿಷ್ಟವಾದ ಸಂವೇದನೆ ಮತ್ತು ಕೌಟುಂಬಿಕ ಒಳನೋಟ ಕಾಣಿಸುತ್ತದೆ ಹಾಲಿನ ಕೆನೆಯಾಗಬೇಕಾದರೆ ಹಾಲು ಕುದಿಯಬೇಕು ನಂತರ ತಣಿಯಬೇಕು. ಹೆಣ್ಣಿನ ಬದುಕು ಕೂಡ ಇಂಥದ್ದೇ ಚಕ್ರದಲ್ಲಿ ಸಿಲುಕಿ ಅನುಭವಿಸುವ ಉದ್ದೇಗದ ಅಳಲು, ನಿರಾತಂಕದ ಹುಯಿಲು ಈ ಕತೆಯನ್ನು ಸುಪ್ತವಾಗಿ ಪೊರೆಯುತ್ತದೆ. ಕತೆ, ಕಾದಂಬರಿ, ಸಂಭಾಷಣೆ ಬರೆಯುತ್ತಾ ಬದುಕಿನ ರುಚಿ ಹೆಚ್ಚಿಸುವ ಸಂಗತಿಗಳ ಬಗ್ಗೆ ವಿಶೇಷ ಪ್ರೀತಿಯುಳ್ಳ ಗೀತಾ ಅವರ ಅನೇಕ ಕಾದಂಬರಿಗಳನ್ನು ನಾನು ಸ್ವಯಿಚ್ಛೆಯಿಂದ ಓದಿದ್ದೇವೆ. ಅವರು ಬರೆದ ಧಾರಾವಾಹಿಗಳನ್ನು ನೋಡಿದ್ದೇನೆ. ಅವರು ಅಭಿನಯ ಚತುರರೂ ಹೌದು. ಅವರ ಬಳಗ ಕೂಡ ದೊಡ್ಡದು. ಅವರ ಜೀವನಪ್ರೀತಿ, ಹುರುಪು ಮತ್ತು ಇಂಗಿತಜ್ಞತೆ ಅವರೊಳಗಿರುವ ಕಾದಂಬರಿಕಾರ್ತಿಯ ನೆರವಿಗೆ ಬಂದಿದೆ. ಹೀಗಾಗಿಯೇ ಸರಳವಾಗಿ ಸಾಗುವ ಕಾದಂಬರಿಗಳಲ್ಲೂ ಜೀವಕ್ಕೆ ಹತ್ತಿರವೆನಿಸುವ ಸನ್ನಿವೇಶ, ಮಾತು, ಅಂತರಾರ್ಥಗಳು ಮಿಂಚುವಂತೆ ಗೀತಾ ಬರೆಯುತ್ತಾರೆ. ಈ ಕಾದಂಬರಿಯಲ್ಲಿ ಅವರ ಬಾಲ್ಯ, ತಾರುಣ್ಯ ಮತ್ತು ನಡುವಯಸ್ಸಿನ ವಿವೇಕ ಬೆರೆತಿದೆ. ಹೀಗಾಗಿ ಇದು ಕೆನೆಗಟ್ಟಿದೆ. ಜೋಗಿ

₹240   ₹204

ಹಾವು ಏಣಿ ಆಟ | haavu Eni Aata

ಹಾವು ಏಣಿ ಆಟ ಒಂದು ವಿಶಿಷ್ಟ ಕಥಾವಸ್ತು ಹೊಂದಿರುವ ಕಾದಂಬರಿ. ಕನ್ನಡ ಕಾದಂಬರಿ ಲೋಕದಲ್ಲಿ ಒಂದು ಹೊಸ ಪ್ರಯತ್ನ. ಇದೊಂದು "ಮೆಡಿಕೋ ಲೀಗಲ್ ಡ್ರಿಲ್ಲರ್" ಔಷಧ ವಿಜ್ಞಾನದ ಪರ ಮತ್ತು ವಿರುದ್ಧದ ಕಾನೂನಿನ ಹೋರಾಟದ ಕಥೆ. ಈ ಕಾದಂಬರಿಯಲ್ಲಿ ಒಂದು ಕೊಲೆಯ ತನಿಖೆಯಿದೆ. ಅದರ ಹಿಂದಿರುವ ಭಯಾನಕ ಸತ್ಯದ ಅನಾವರಣವಿದೆ. ನಮ್ಮ ನಿಮ್ಮೆಲ್ಲರ ಜೀವನದಲ್ಲಿ ಅವ್ಯಕ್ತವಾಗಿ ಪ್ರವೇಶಿಸಿ, ನಮ್ಮ ಜೀವದ ಜೀವದ ಜೊತೆ, ಜೀವನದ ಜೊತೆ ಆಟವಾಡುವ ಫಾರ್ಮಾ ಲಾಬಿಯ ದುರಾಸೆಯಿದೆ. ಇದರ ಮಧ್ಯೆ ಅರಿತೊ ಅರಿಯದೆಯೋ ನಲುಗುವ ಜನರ ನೋವಿದೆ. ಆ ನೋವನ್ನೇ ಬಂಡವಾಳ ಮಾಡಿಕೊಳ್ಳುವ ಸ್ವಾರ್ಥವಿದೆ. ಇವೆಲ್ಲದರ ವಿರುದ್ಧ ಕೋರ್ಟ್‌ನಲ್ಲಿ ನಡೆಸುವ ಹೋರಾಟವಿದೆ. ಸತ್ಯ ಅನ್ನುವುದು ನಮ್ಮ ನಮ್ಮ ದೃಷ್ಟಿಕೋನವಷ್ಟೇ. ನಮ್ಮ ಕಣ್ಣಿಗೆ ಕಂಡಿದ್ದು, ನಾವು ತಿಳಿದಿರುವುದು ಅಥವಾ ನಾವು ತಿಳಿಯಲೆಂದೇ ಕೊಡುವ ಮಾಹಿತಿಗಳು ಮಾತ್ರವೇ ಸತ್ಯವಲ್ಲ. ಒಮ್ಮೆ ಶೋಧಿಸಲು ಮುಂದಾದಾಗ ಆ ಸತ್ಯದ ಪರದೆಯ ಹಿಂದೆ ಅಡಗಿರುವ ಇನ್ನೊಂದು ಸತ್ಯ ನಮ್ಮ ಮುಂದೆ ಧುತ್ತನೆ ಬಂದು ನಿಂತಾಗ ಅದು ನಮ್ಮ ನಂಬಿಕೆಯ ಬುನಾದಿಯನ್ನೇ ಅಲುಗಾಡಿಸಿ ಯಾರು ಸರಿ ಯಾರು ತಪ್ಪು ಎನ್ನುವ ಪ್ರಶ್ನೆ ಹುಟ್ಟಿಹಾಕುತ್ತದೆ.

₹300   ₹267

ಹಾಸ್ಯ ಚಟಾಕಿ | Hasya chataki

ಸಂಪಟೂರು ವಿಶ್ವನಾಥ್

₹25   ₹22

ಹಿಜಾಬ್ | Hijab

nil

₹295   ₹263

ಹಿಂದೂ ರಾಷ್ಟ್ರದಲ್ಲಿ ಹಿಂದೂಗಳು | Hindu Rashtradalli Hindugalu

ಎಂಟನೇ ದರ್ಜೆಯ ನಾಗರಿಕರಾಗಿಯೇ ಮುಂದುವರಿಯುತ್ತಾರೆ ಎಂಬುದನ್ನು ಪ್ರಬಲವಾಗಿ ತೋರಿಸಿದ್ದಾರೆ; ಓದುಗರ ಹೃದಯ ಮತ್ತು ಮನಸ್ಸನ್ನು ಜಾಗೃತಗೊಳಿಸುವ ಭರವಸೆ ಇದೆ. ಓದಲೇ ಬೇಕಾದ ಪುಸ್ತಕ. -ಜೆ. ಸಾಯಿ ದೀಪಕ್ ವಕೀಲರುHindu

₹299   ₹266

ಹಿನ್ನೀರ ದಂಡೆಯ ಸೀತಾಳೆದಂಡೆ | Hinnira dandeya seetaladande

ಸಣ್ಣ ಸಣ್ಣ ಸಂಗತಿಗಳನ್ನು ಸಾಂದ್ರವಾಗಿ ಭಾವಪೂರ್ಣವಾಗಿಸುವ ಇಲ್ಲಿನ ಕಥೆಗಳು; ಚಂದದ ಬದುಕೊಂದಕ್ಕಾಗಿ ಹಂಬಲಿಸಿದಂತಿವೆ. ಹಿನ್ನೀರದಂಡೆಯಿಂದ ಮಹಾನಗರದ ಮಧ್ಯಕ್ಕೆ ತಂದು ನಿಲ್ಲಿಸಿದ ಕಥೆಗಾರ್ತಿಯ ಜೀವನಾನುಭವಗಳೇ ಕಥೆೆಗಳ ಹೂರಣವೆನಿಸುತ್ತದೆ. ಸಮಕಾಲೀನ ಸಂದಿಗ್ಧತೆಗಳ ಸೂಕ್ಷö್ಮ ಪದರುಗಳನ್ನು ಸಾವಧಾನದಿಂದ ಕಂಡರಸುವ ಕತೆಗಳು; ವಾಸ್ತವವನ್ನು ತದೇಕಚಿತ್ತದಿಂದ ದಿಟ್ಟಿಸಿವೆ. ಹೆಣ್ಣಿನ ಒಳತೋಟಿಗಳು ಆಧುನಿಕ ಅವಸ್ಥಾಂತರದ ಗರಡಿಯಲ್ಲಿ ಪಳಗಿ ಗಟ್ಟಿಪಾತ್ರಗಳಾಗಿ ಅರಳಿ ಹೊರಳಿವೆ. ಕನ್ನಡ ಕಥಾಲೋಕಕ್ಕೆ ಸೇರ್ಪಡೆಯಾಗಲೇಬೇಕಾದ ಕಥೆಗಳಿವು ಎನಿಸುತ್ತದೆ. - ಡಾ. ರತ್ನಾಕರ ಸಿ.ಕುನುಗೋಡು ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಿಪ್ಪನಪೇಟೆ

₹130   ₹104