nil
#
ತನ್ನ ತಾಯ್ತಂದೆಯರೊಂದಿಗೆ ದುಷ್ಟ ಕೆಲಸಗಳಲ್ಲಿ ಪಾಲ್ಗೊಂಡ ಹದಿನೆಂಟರ ಕೃಷ್ಣಮುರಳಿಯು ಕೊಲೆಯ ಪ್ರಯತ್ನಕ್ಕೆ ಒಳಗಾಗಿ, ವಿದ್ಯಾಧಾಮವನ್ನು ನಡೆಸುತ್ತಿದ್ದ ಗುಣಶೇಖರಂ ಮಡಿಲಿಗೆ ಬಂದು ಬೀಳುತ್ತಾನೆ. ಆದರೆ ಈಗ ಸಂತರಂತಿರುವ ಗುಣಶೇಖರರ ಗತವು ಎಷ್ಟ ಭಯಾನಕವಾದದ್ದು!
ಪ್ರತಿಭಾನ್ವಿತ ವಿಶ್ರಾಂತ ಶಿಕ್ಷಕಿಯಾಗಿರುವ ಶ್ರೀಮತಿ ಪುಷ್ಪಾ ಜೋಗಿಯವರು, ತಮ್ಮ ನಿವೃತ್ತಿಯ ನಂತರ, ತಾವು ಹಸ್ತ ಪ್ರತಿಯಲ್ಲಿ ಜೋಡಿಸಿಟ್ಟ ಬರಹಗಳನ್ನೆಲ್ಲಾ ಕೃತಿ ರೂಪದಲ್ಲಿ ಪ್ರಕಟಿಸಲಾರಂಭಿಸಿದ್ದಾರೆ. ಈಗಾಗಲೇ ಅವರು ಭಾವ ಲಹರಿ, ನಮ್ಮೂರ ಬೈಲಗುತ್ತು, ಐಸಿರದ ಬೂಡು, ಪಂಚ ಪುರ್ಪಗಳೆಂಬ ನಾಲ್ಕು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿ ಸಾಹಿತ್ಯ ಪ್ರಿಯರ ನಡುವೆ ಜನಾನುರಾಗಿಯಾಗಿದ್ದಾರೆ. ಸಂತೃಪ್ತಿ ನಾಟಕ ಕೃತಿಯು ಅವರ ಐದನೇ ಕೃತಿಯಾಗಿದೆ ಸಾಹಿತ್ಯ ಪ್ರಕಾರಗಳಲ್ಲಿ ನಾಟಕಕ್ಕೆ ಅದರದ್ದೇ ಆದ ಮಹತ್ವವಿದೆ. ಅವುಗಳು ರಂಗದಲ್ಲಿ ಅಭಿನಯಿಸಲ್ಪಟ್ಟಾಗ ಜನ ಮಾನಸದಲ್ಲಿ ಭದ್ರವಾಗಿ ನೆಲೆಯೂರುತ್ತದೆ.
ಹೀಗೆ, ಹಲವು ಪದರಗಳಿರುವ ನಿರೂಪಣೆ, ಹಲವು ಕೋನಗಳಿಂದ ನಡೆಯುವ ನಿರೂಪಣೆ ಇರುವ ಕನ್ನಡ ಕಾದಂಬರಿ ಓದಿ ಬಹಳ ಬಹಳ ವರ್ಷಗಳೇ ಕಳೆದಿವೆ. ಒಂದು ಮಾತಲ್ಲಿ ಹೇಳಬೇಕು ಅಂದರೆ ಇದು ನಾವು" ಬದುಕುತ್ತಿರುವ ಈ ೨೦೨೪ರ ಬದುಕಿಗೆ ನನ್ನ ತಲೆಮಾರಿನವರೊಬ್ಬರು ಅಮೆರಿಕದಲ್ಲಿ ಕೂತು ಹಿಡಿದಿರುವ ಕನ್ನಡಿ. ಬೇರೆ ಬೇರೆ ಕಾಲಘಟ್ಟಗಳಲ್ಲಿಯೂ ಬದಲಾಗದ ಸಮಸ್ಯೆಯನ್ನು 'ಸತ್ಕುಲಪ್ರಸೂತರು' ಪರಿಶೀಲಿಸಿದೆ. ಕಾದಂಬರಿಯೊಂದು ಕಥೆಯ ಕಾಲವನ್ನು ಹೇಗೆ ನಿರ್ವಹಿಸುತ್ತದೆ ಎಂಬುದು ಮುಖ್ಯ ಸಂಗತಿಯಾಗುತ್ತದೆ. ಈ ಕಾದಂಬರಿಯು ನವೋದಯ, ನವ್ಯಗಳ ಮಾರ್ಗವನ್ನು ಬಿಟ್ಟು ಕಾಲವನ್ನು ಕೌದಿಯ ಹಾಗೆ ಹೆಣೆದಿದೆ. ಇದು ಆತ್ಮಕಥೆಯೋ, ಸಮುದಾಯವೊಂದರ ಆಚರಣೆಗಳ ದಾಖಲೆಯೋ, ಹುಟ್ಟಿದ ನೆಲ ಮತ್ತು ಸಾಕಿದ ಕುಟುಂಬ, ನಂಟಸ್ತನ, ಪರಿಚಿತ ಉದ್ಯೋಗಗಳಿಲ್ಲದರಿಂದ ದೂರವಾಗಿ ಬದುಕುವ ಜನಸಮೂಹದ ಸ್ವವಿಮರ್ಶೆಯೋ, ಬರೆಯಲಿರುವ ಕಾದಂಬರಿಯೊಂದರ ಟಿಪ್ಪಣಿಯೋ, ಇದೇ ಕಾದಂಬರಿಯೋ, ಇಲ್ಲಿರುವಂಥ ನಿರೂಪಣೆ ಕಾದಂಬರಿಯ ನಿರೂಪಕನ ಅಗತ್ಯ ಮತ್ತು ಕಾದಂಬರಿಯ ಪಾತ್ರವೊಂದರ ಒತ್ತಾಯದಿಂದ ರೂಪುಗೊಂಡದ್ದೋ ಎಂದು 'ಸತ್ಕುಲಪ್ರಸೂತ'ರನ್ನು ಹಲವು ಕೋನಗಳಿಂದ ನೋಡಲು ಸಾಧ್ಯವಿದೆ. -ಓ ಎಲ್ ನಾಗಭೂಷಣ ಸ್ವಾಮಿ
ಖಾದ್ರಿ ಎಸ್. ಅಚ್ಯುತನ್
Showing 4321 to 4350 of 4980 results