nil
ಅಹಿಂಸೆ, ಅಪರಿಗ್ರಹ ಮತ್ತು ಅನೇಕಾಂತವಾದದಂಥ ಅನನ್ಯ ಬೋಧನೆಗಳ ಮೂಲಕ ಇಡೀ ಜಗತ್ತಿಗೆ ಶಾಂತಿಯ ದಾರಿ ತೋರಿಸಿದ ಜೈನ ಧರ್ಮವು ಭಾರತದ ಪುರಾತನ ಧರ್ಮಗಳಲ್ಲಿ ಒಂದು. ಭಾರತದ ಇತರ ಮತ್ತು ಪಾಶ್ಚಾತ್ಯ ಧರ್ಮಗಳ ತುಲನೆಯಲ್ಲಿ ಜೈನ ಧರ್ಮದ ಉನ್ನತ ಸ್ಥಾನಮಾನ ಗುರುತಿಸುವ ಈ ಪುಸ್ತಕ ಕನ್ನಡದ ಓದುಗರಿಗೆ ಒಂದು ಅಪೂರ್ವ ಕೊಡುಗೆ. ಜೈನ ಧರ್ಮದಲ್ಲಿ ೬೩ ಜನ ಶಲಾಕಾ ಪುರುಷರಿದ್ದಾರೆ. ಅದಕ್ಕಾಗಿಯೇ ಈ ಕೃತಿ ೬೩ ಅಧ್ಯಾಯಗಳಲ್ಲಿ ವಿಸ್ತರಿಸಿದೆ. ಜೈನ ಧರ್ಮದಲ್ಲಿ ಮತ್ತು ಧರ್ಮಗಳಲ್ಲಿ ಆಸಕ್ತಿ ಇರುವ ಯಾರೇ ಆದರೂ ಈ ಕೃತಿಯನ್ನು ಓದಬೇಕು. ದೇವದತ್ತ ಪಟ್ಟನಾಯಕರ ಈ ಅದ್ಭುತ ಕೃತಿಯನ್ನು ಪದ್ಮರಾಜ ದಂಡಾವತಿಯವರು ಅಷ್ಟೇ ಅನುಪಮವಾಗಿ ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ
ಭಾರತದ ಮಾತ್ರವಲ್ಲ ಜಗತ್ತಿನ ಎರಡು ಶ್ರೇಷ್ಠ ಮಹಾಕಾವ್ಯಗಳು ಎಂದರೆ ಅವು ʻರಾಮಾಯಣʼ ಮತ್ತು ʻಮಹಾಭಾರತʼ. ಈ ಎರಡೂ ಕಾವ್ಯಗಳನ್ನು ಮುಖಾಮುಖಿಯಾಗಿಸಿ ಅವುಗಳಲ್ಲಿನ ಸಮಾನ ಅಂಶಗಳನ್ನು ಕುರಿತು ಬರೆದ ಏಕೈಕ ಕೃತಿ ಇದು. ಆಸೆಯ ಕೇಡನ್ನು ಶೋಧಿಸುವ ʻರಾಮಾಯಣʼ ಮತ್ತು ಸೇಡಿನ ಅಥವಾ ದ್ವೇಷದ ಕೇಡನ್ನು ತೆರೆದು ಇಡುವ ʻಮಹಾಭಾರತʼ ಕೃತಿಗಳನ್ನು ದೇವದತ್ತ ಪಟ್ಟನಾಯಕರು ಅರ್ಥೈಸಿದ ರೀತಿ ಗಹನವಾಗಿದೆ, ಅನ್ಯಾದೃಶವಾಗಿದೆ. ಈ ಮಹತ್ವದ ಕೃತಿಯನ್ನು ಪದ್ಮರಾಜ ದಂಡಾವತಿಯವರು ಅಷ್ಟೇ ತನ್ಮಯತೆಯಿಂದ ಕನ್ನಡಕ್ಕೆ ತಂದಿದ್ದಾರೆ.