ಡಾ ಸಿ ಆರ್ ಚಂದ್ರಶೇಖರ್
Category: | ಕನ್ನಡ |
Sub Category: | ಸೃಜನಶೀಲ ಸಾಹಿತ್ಯ |
Author: | Chandrashekar C R |
Publisher: | ವಸಂತ ಪ್ರಕಾಶನ |
Language: | Kannada |
Number of pages : | |
Publication Year: | |
Weight | |
ISBN | |
Book type | Paperback |
Delivery between 2-8 Days
No returns accepted. Please refer our full policy
Your payments are 100% secure
ನಮ್ಮ ದೇಶವನ್ನು ದೊಡ್ಡ ಮಟ್ಟದಲ್ಲಿ ಪೀಡಿಸುವ ಪಿಡುಗುಗಳೆಂದರೆ ಅನಕ್ಷರತೆ, ಅಜ್ಞಾನ. ಇದರ ಪರಿಣಾಮದಿಂದ ಜನತೆ ಹಲವು ಬಗೆಯ ದೈಹಿಕ, ಮಾನಸಿಕ ರೋಗಗಳಿಗೆ ಬಹುಬೇಗ ಬಲಿಯಾಗುವುದು ಕಂಡುಬರುತ್ತದೆ. ಇತ್ತೀಚಿನ ದಿನಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ ಕೆಲವು ವಿಶೇಷ ಕಾಯಿಲೆಗಳ ಜೊತೆಗೆ ಸಾಮಾನ್ಯವಾಗಿ ಎಲ್ಲರಿಗೂ ಬರಬಹುದಾದ ಕೆಲವು ರೋಗಗಳು ಸಮುದಾಯಗಳನ್ನು ಕಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇವುಗಳನ್ನು ಸಂಪೂರ್ಣ ತೊಡೆದುಹಾಕಲು ಸಾಧ್ಯವಾಗದಿದ್ದರೂ ನಿಯಂತ್ರಣದಲ್ಲಿಟ್ಟುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಲು ನಮ್ಮ ಜೀವನವನ್ನು ಕೆಲವು ಬಗೆಯ ಶಿಸ್ತುಗಳಿಗೆ ಒಳಗುಮಾಡಿಕೊಳ್ಳಬೇಕಾಗುತ್ತದೆ. ಆಹಾರ, ವ್ಯಾಯಾಮ, ಮಾನಸಿಕ ಒತ್ತಡ ಇವುಗಳನ್ನು ಸರಿಯಾದ ಕ್ರಮದಲ್ಲಿ ಪರಿಪಾಲಿಸಿದರೆ ಇದು ಕಾಡುವ ಕಾಯಿಲೆಯಾಗದೇ ತಡೆಗಟ್ಟಬಹುದಾದ ಜೀವನ ವಿನ್ಯಾಸವಾಗುತ್ತದೆ. ಇದಕ್ಕೆ ಅಗತ್ಯವಾದ ತಿಳಿವಳಿಕೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವಂತಹ ಕಾರ್ಯವನ್ನು ‘ಆರೋಗ್ಯ ಚಿಂತನ ಮಾಲಿಕೆ’ಯ ಕೃತಿಗಳು ಮಾಡುತ್ತವೆ. ಪ್ರತಿಯೊಬ್ಬರಿಗೂ ಹೆಚ್ಚು ಕಾಲ ಬದುಕುವ ಇಚ್ಛೆ ಬಲವಾಗಿರುತ್ತದೆ. ಇವತ್ತು ವೈದ್ಯಕ್ಷೇತ್ರದಲ್ಲಿ ಆಕರಕೋಶಗಳ ಚಿಕಿತ್ಸೆಯ ಬೆಳವಣಿಗೆಯನ್ನು ಗಮನಿಸಿದರೆ ಚಿರಂಜೀವಿಯಾಗಬೇಕೆಂಬ ಬಯಕೆ ಎಲ್ಲರಲ್ಲೂ ಎದ್ದುಕಾಣುತ್ತಿದೆ. ಅಲ್ಲದೆ ಜೀವನಾವಧಿಯೂ ಹೆಚ್ಚಾಗಿದೆ. ಆದ್ದರಿಂದ ಜೀವನಾವಧಿಯಲ್ಲಿ ಆರೋಗ್ಯವಾಗಿ, ಇತರರ ಮೇಲೆ ಅವಲಂಬಿತರಾಗದಂತೆ ಬದುಕಬೇಕೆಂಬುದು ಎಲ್ಲರ ಆಶಯವಾಗಿದೆ. ಮರಣವನ್ನು ಮುಂದೂಡಬೇಕೆಂಬ ಬಯಕೆಯೂ ಸಹಜ. ಆ ನಿಟ್ಟಿನಲ್ಲಿ ಪ್ರಖ್ಯಾತ ಮನೋವೈದ್ಯ, ರಾಷ್ಟ್ರೀಯ ವಿಜ್ಞಾನ ಪ್ರಶಸ್ತಿ ಪುರಸ್ಕೃತ ಹಾಗೂ ವೈದ್ಯ ಸಾಹಿತ್ಯದ ದಿಗ್ಗಜರೆನಿಸಿರುವ ಡಾ. ಸಿ. ಆರ್. ಚಂದ್ರಶೇಖರ್ರವರು ಒಂದು ಆಮೂಲಾಗ್ರವಾದ ಮತ್ತು ಅಗತ್ಯವಿರುವ ಎಲ್ಲ ವಿವರಣೆಯನ್ನು ‘ಮುಪ್ಪು ಮತ್ತು ಮರಣ ಮುಂದೂಡುವುದು ಹೇಗೆ?’ ಕೃತಿಯಲ್ಲಿ ನೀಡಿದ್ದಾರೆ. ?
Chandrashekar C R |
ಡಾ ಸಿ ಆರ್ ಚಂದ್ರಶೇಖರ್ |
0 average based on 0 reviews.