• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    

  • ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    

ಕಾಡು ಪ್ರತಿಭೆ ಮಾರಪ್ಪ | Kaadu Prathibhe Maarappa

Book short description

ಸದಾ ನಿಸರ್ಗದ ನಿಯಂತ್ರಣಕ್ಕೆ ಒಳಪಟ್ಟ ಕಾಡೊಂದರ ಅಭಿವೃದ್ಧಿಯ ಹಿಂದಿನ ರೂವಾರಿಗಳ ಶ್ರಮ, ಪ್ರತಿಭೆಗಳು ಸಾಮಾನ್ಯವಾಗಿ ಕಾಡಿನ ಗರ್ಭದಲ್ಲೇ ಕಣ್ಮರೆಯಾಗುವುದುಂಟು. ಇಡೀ ಜೀವನವನ್ನು ಅರಣ್ಯಗಳ ಏಳಿಗೆಗಾಗಿಯೇ ಮೀಸಲಿರಿಸಿ ಎಲೆಮರೆಯಲ್ಲೇ ಕಾಯಾಗಿ ನೇಪಥ್ಯಕ್ಕೆ ಸರಿದ ಮಹನೀಯರೆಷ್ಟೋ ಮಂದಿ ನಮ್ಮಲ್ಲಿದ್ದಾರೆ. ಇಂಥ ಕೆಲವೇ ವ್ಯಕ್ತಿತ್ವಗಳಲ್ಲಿ ಅರಣ್ಯಾಧಿಕಾರಿ ಮಾರಪ್ಪನವರೂ ಒಬ್ಬರು. ಅರಣ್ಯದ ಕಿರು ಉತ್ಪನ್ನವೆಂದೇ ಪರಿಗಣಿಸಲಾದ ಹುಣಸೆ ಮೂಲಕವೇ ಬರಡು ಜಿಲ್ಲೆಯೊಂದರ ಜನಸಮುದಾಯದ ಆರ್ಥಿಕ ಉನ್ನತಿ ಸಾಧಿಸುವ ಕನಸು ಕಂಡ ಮಾರಪ್ಪನವರ ದೂರದೃಷ್ಟಿ, ಆಶಯಗಳನ್ನು ಈ ಪುಸ್ತಕದಲ್ಲಿ ಪರಿಚಯಿಸಲು ಯತ್ನಿಸಲಾಗಿದೆ. ಅಧಿಕಾರದ ನಡುವೆಯೂ ಜನಸಮುದಾಯದ ಬಗ್ಗೆ ಸಹಜಪ್ರೀತಿ, ಅರಣ್ಯ, ಪರಿಸರಗಳ ಬಗ್ಗೆ ಸಾಮಾಜಿಕ ಎಚ್ಚರ ಎರಡನ್ನು ಹೊಂದಿದ್ದ ಮಾರಪ್ಪನವರಂಥ ವ್ಯಕ್ತಿಯೊಬ್ಬರನ್ನು ಇಂದಿನ ಪೀಳಿಗೆಯವರಿಗೆ ಪರಿಚಯಿಸುವುದೇ ಒಂದು ಸಾಮಾಜಿಕ ಜವಾಬ್ದಾರಿ. ಈ ಕಾರ್ಯವನ್ನು ಈ ಕೃತಿಯಲ್ಲಿ ಎಚ್.ಎ. ಪುರುಷೋತ್ತಮರಾವ್ ಪ್ರೀತಿಯಿಂದ ನಿರ್ವಹಿಸಿದ್ದಾರೆ. ವೃತ್ತಿಯಿಂದ ಅರಣ್ಯ ಇಲಾಖೆಯ ಉದ್ಯೋಗಿಯಾಗಿ ನಿವೃತ್ತರಾಗಿರುವ ಎಚ್.ಎ. ಪುರುಷೋತ್ತಮರಾವ್ ಪ್ರವೃತ್ತಿಯಿಂದ ಲೇಖಕರು. ಸಾಹಿತ್ಯಾಭಿರುಚಿಯುಳ್ಳ ಇವರು ನಮ್ಮ ನಿತ್ಯಬದುಕಿಗೆ ಸಂಬಂಧಿಸಿದಂತೆ ಹಲವಾರು ವಿಜ್ಞಾನ ಬರಹಗಳನ್ನು ಬರೆದಿದ್ದಾರೆ. 'ಕಿವುಡನಮಾಡಯ್ಯ ತಂದೆ', 'ಭೂರಮೆಗೆ ಸೈಥೋಸ್ಕೋಪ್', 'ಗಾಳಿ ಬೇರುಗಳು', 'ಪೆದ್ದನ್ನನ ಇಕಾಲಜಿ ಮತ್ತು ಪರಿಸರ ಲೇಖನಗಳು' ಇನ್ನೂ ಮುಂತಾದ ಕೃತಿಗಳನ್ನು ಈಗಾಗಲೆ ಪ್ರಕಟಿಸಿದ್ದಾರೆ. ನಾಡು ಮರೆತ ಕಾಡು ಪ್ರತಿಭೆ ಮಾರಪ್ಪನವರ ಜೀವನ, ಸಾಧನೆ ಕುರಿತಂತೆ ಇಂಥದ್ದೊಂದು ವಿಶಿಷ್ಟ ಕೃತಿಯನ್ನು ರಚಿಸಿರುವ ಪುರುಷೋತ್ತಮರಾವ್ ಅಭಿನಂದನಾರ್ಹರು. -ಪ್ರಕಾಶಕ

Category: ಕನ್ನಡ
Sub Category: ಅನುಭವ ಕಥನ
Author: ಎಚ್ಎ ಪುರುಷೋತ್ತಮರಾವ್ | H A Purushottamarao
Publisher: ಕದಂಬ ಪ್ರಕಾಶನ | Kadamba Prakashana
Language: Kannada
Number of pages :
Publication Year: 2025
Weight
ISBN 9789395129527
Book type Paperback
share it
100% SECURE PAYMENT

₹170 11% off

₹151

quantity

Pan India Shipping

Delivery between 2-6 Days

Return Policy

No returns accepted. Please refer our full policy

Secure Payments

Your payments are 100% secure

ಕಾಡು ಪ್ರತಿಭೆ ಮಾರಪ್ಪ | Kaadu Prathibhe Maarappa
₹170   ₹151  11% off