ತಲ್ಲಣಿಸುವ ಮನ
Original price was: ₹ 105.₹ 93Current price is: ₹ 93.
SYNOPSIS
ನಮ್ಮ ದೇಶವನ್ನು ದೊಡ್ಡ ಮಟ್ಟದಲ್ಲಿ ಪೀಡಿಸುವ ಪಿಡುಗುಗಳೆಂದರೆ ಅನಕ್ಷರತೆ, ಅಜ್ಞಾನ. ಇದರ ಪರಿಣಾಮದಿಂದ ಜನತೆ ಹಲವು ಬಗೆಯ ದೈಹಿಕ, ಮಾನಸಿಕ ರೋಗಗಳಿಗೆ ಬಹುಬೇಗ ಬಲಿಯಾಗುವುದು ಕಂಡುಬರುತ್ತದೆ. ಇತ್ತೀಚಿನ ದಿನಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ ಕೆಲವು ವಿಶೇಷ ಕಾಯಿಲೆಗಳ ಜೊತೆಗೆ ಸಾಮಾನ್ಯವಾಗಿ ಎಲ್ಲರಿಗೂ ಬರಬಹುದಾದ ಕೆಲವು ರೋಗಗಳು ಸಮುದಾಯಗಳನ್ನು ಕಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇವುಗಳನ್ನು ಸಂಪೂರ್ಣ ತೊಡೆದುಹಾಕಲು ಸಾಧ್ಯವಾಗದಿದ್ದರೂ ನಿಯಂತ್ರಣದಲ್ಲಿಟ್ಟುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಲು ನಮ್ಮ ಜೀವನವನ್ನು ಕೆಲವು ಬಗೆಯ ಶಿಸ್ತುಗಳಿಗೆ ಒಳಗುಮಾಡಿಕೊಳ್ಳಬೇಕಾಗುತ್ತದೆ. ಆಹಾರ, ವ್ಯಾಯಾಮ, ಮಾನಸಿಕ ಒತ್ತಡ ಇವುಗಳನ್ನು ಸರಿಯಾದ ಕ್ರಮದಲ್ಲಿ ಪರಿಪಾಲಿಸಿದರೆ ಇದು ಕಾಡುವ ಕಾಯಿಲೆಯಾಗದೇ ತಡೆಗಟ್ಟಬಹುದಾದ ಜೀವನ ವಿನ್ಯಾಸವಾಗುತ್ತದೆ. ಇದಕ್ಕೆ ಅಗತ್ಯವಾದ ತಿಳಿವಳಿಕೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವಂತಹ ಕಾರ್ಯವನ್ನು ‘ಆರೋಗ್ಯ ಚಿಂತನ ಮಾಲಿಕೆ’ಯ ಕೃತಿಗಳು ಮಾಡುತ್ತವೆ. ಸಣ್ಣಪುಟ್ಟ ಸಂಗತಿಗಳಿಗೂ ಮನಸ್ಸು ಆತಂಕ ಪಡುವ ಬಗೆ ಮತ್ತು ಅದು ಹೇಗೆ ವಿವಿಧ ರೂಪದಲ್ಲಿ ಪ್ರಕಟವಾಗುತ್ತದೆಂಬುದನ್ನು ‘ತಲ್ಲಣಿಸುವ ಮನ’ ಕೃತಿ ಓದುಗರೆದುರು ಅನಾವರಣಗೊಳಿಸುತ್ತದೆ. ಸಣ್ಣ ಮಟ್ಟದ ಆತಂಕ ಬೆಳೆದು ಗೀಳಾದಾಗ ಹೇಗೆ ವ್ಯಕ್ತಿಯನ್ನು ಅನೇಕ ವಿಧದ ದೈಹಿಕ-ಮಾನಸಿಕ ತೊಂದರೆಗಳಿಂದ ಬಾಧಿಸುವಂತೆ ಮಾಡುತ್ತದೆ ಮತ್ತು ಅದರ ಪರಿಹಾರ ಹೇಗೆ ಎಂಬುದನ್ನು ಕುರಿತು ನಾಡಿನ ಪ್ರಸಿದ್ಧ ಮನೋವೈದ್ಯೆ, ಲೇಖಕಿ, ಭರತನಾಟ್ಯ ಕಲಾವಿದೆಯಾದ ಡಾ. ಕೆ.ಎಸ್. ಪವಿತ್ರ ಅವರು ‘ತಲ್ಲಣಿಸುವ ಮನ’ ಕೃತಿಯಲ್ಲಿ ವಿವರಿಸಿದ್ದಾರೆ. ಮನೋದೈಹಿಕ ಕಾಯಿಲೆಗೆ ಮೂಲ ಕಾರಣವಾದ ‘ಆತಂಕ’ದಿಂದ ದೂರಾಗಿ ನೆಮ್ಮದಿಯ ಬದುಕು ಬೇಕೆನ್ನುವ ಎಲ್ಲರಿಗೂ ಇಷ್ಟವಾಗುವ ಕೃತಿ.
ABOUT AUTHOR
Opinion of Others
There are no others opinion yet.
Reviews
There are no reviews yet.