• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
  • ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
back

Publishers

Categories

Authors

Languages

Book Type

Clear All
Filter
ಉತ್ಸವ | Uthsava

ಗುಣವಂತ ಮಂಜು

₹130   ₹116

ಜಮಲಾಪುರದ ಜಡೆಮುನಿ ಕೇಸು | Jamalapurada Jademuni Kesu

"ಆ ಜಡೆಮುನಿ ಇದ್ಯಲ್ಲ, ಅದು ರಾತ್ರಿಹೊತ್ತು ಮಾತ್ರ ಓಡಾಡೋ ಪಿಶಾಚಿ. ಮಧ್ಯರಾತ್ರಿ ಕಾಡುದಾರಿಯಲ್ಲಿ ಜಡೆಮುನಿಯು ಮುಂದೆ ನಡೆದು ಹೋಗ್ತಿದ್ರೆ ಅದರ ಹಿಂದೆ ಕೊಳ್ಳಿದೆವ್ವಗಳು ಆ ಜಡೆಮುನಿಯ ಕಿಲೋಮೀಟರಿನಷ್ಟು ಉದ್ದದ ಜಡೆಯನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಹೋಗ್ತಿದ್ವು ಅಂತ ನಮ್ಮ ಅಜ್ಜಂದಿರು ಹೇಳ್ತಿದ್ರು. ಹಾಗೇ ನಾವು ಆ ಜಡೆಮುನಿದೇನಾದ್ರೂ ಒಂದು ಕೂದಲು ಕಿತ್ಕೋಂಡ್ರು ಸಾಕು, ಕೇಳಿದ್ದನ್ನೇಲ್ಲಾ ಅದು ಕೊಡುತ್ತಂತೆ. ಅಕಸ್ಮಾತ್ ಹೀಗೆ ಕೂದ್ಲು ಕೀಳೇಕಾದ್ರೇ ಏನಾದ್ರೂ ಅದರ ಕಣ್ಣಿಗೆ ಬಿದ್ವಿ ಅನ್ಕೋ, ಮುಗಿತು ಅವರ ಕತೆ. ಅವರುಗಳು ಅಲ್ಲೇ ರಕ್ತ ಕಾರ್ಕೊಂಡು ಸಾಯ್ತಿದ್ರಂತೆ. ಹೀಗೆ ಸತ್ತವರ ಹಸಿ ಮಾಂಸವೇ ಅದರ ಶಿಷ್ಯಂದಿರಾದ ಕೊಳ್ಳದೆವ್ವಗಳಿಗೆ ಊಟವಂತೆ! ಹೀಗೆ ಪ್ರತಿರಾತ್ರಿ ಊರನ್ನ ಸುತ್ತುಹಾಕಿ ನಂತರ ಅಲ್ಲಿನ ಕೆರೆಯಲ್ಲಿ ಸ್ನಾನ ಮಾಡಿ ಹೋಗುವ ಜಡೆಮುನಿಯನ್ನ ನಾವು ನೋಡ್ಬೋದು ಆದ್ರೆ ಅದು ನೋಡುವ ಹಾಗಿಲ್ಲ. ಹಾಗೆ ಅದರ ಕಣ್ಣಿಗೆ ಸಿಕ್ಕಿ ಸತ್ತವರಿಗೆ ಲೆಕ್ಕಾನೇ ಇಲ್ಲಂತೆ. ರಾತ್ರಿ ಹೊತ್ತು ಏನೋ ಭಯಂಕರ ಸದ್ದಾಗಿ, ಬೆಳಗೆದ್ದು ನೋಡಿದಾಗ ಮನೆಯೆದುರು ಒಣಗಿ ಹಾಕಿದ್ದ ಕಾಫಿ ಬೀಜಗಳ ರಾಶಿಯ ಮೇಲೆ ಅದರ ಜಡೆಯಿಂದಾದ ಗುರುತುಗಳಿರುತ್ತಿತ್ತು ಅಂತ ಊರೋರು ಹೇಳ್ತಿದ್ರು. ಹಾಗೇ ರಾತ್ರಿ ಹೊತ್ತು ಶಿಕಾರಿಗೆಂದು ಹೋದವರಿಗೆ ಆ ಜಡೆಮುನಿ ದೈಯ್ಯವು ಮೈಗತ್ತಿ ನಂತರ ಅವರುಗಳು ಸುಮಾರು ದಿನಗಳ ಕಾಲ ಊಟ - ನಿದ್ರೆ ಇಲ್ದೆ ಬದುಕಿ ನಂತರ ಅದು ಮೈಯಿಂದ ಬಿಟ್ಟೋದ್ಮೇಲೆ ರಕ್ತ ಕಾರ್ಕೊಂಡು ಸತ್ತೋಗ್ತಿದ್ರಂತೆ!!" ಎಂದು ಶೇಷಜ್ಜನು ತಾನು ಚಿಕ್ಕಂದಿನಲ್ಲಿ ಕೇಳಿದ್ದ ಕತೆಯನ್ನು ರೋಚಕವಾಗಿ ಹೇಳಿ ಮುಗಿಸುತ್ತಲೇ ಇತ್ತ ತದೇಕಚಿತ್ತದಿಂದ ಕತೆಯನ್ನು ಆಲಿಸುತ್ತಿದ್ದ ಗೌಡರ ಮಗಳಾದ ನಯನಳ ತಲೆತುಂಬಾ ಜಡೆಮುನಿಯೇ ತುಂಬಿತ್ತು. ಜೊತೆಗೆ ಇತ್ತ 'ಜಡೆಮುನಿ'' ಕಾಟದಿಂದ ಬೇಸತ್ತಿದ್ದ ಜಮಲಾಪುರದ ಜನರ ತಲೆಯಲ್ಲೂ ಕೂಡ!

₹275   ₹245

ದಿ ಕ್ಯೂರಿಯಸ್ ಕೇಸ್ ಆಫ್‌ ತಾರಾಗುಪ್ತ | The Curious Case Of Taragupta

ಡಿಯರ್ ಡಿಟೆಕ್ಟಿವ್ ಹಿಮವಂತ್, ನಾನು ಈ ಡೆತ್ ನೋಟನ್ನು ನಿನಗೆ ಕಳಿಸುತ್ತಿರುವ ಹಿಂದೆ ಒಂದು ಪ್ರಮುಖ ಕಾರಣವಿದೆ. ಇತ್ತೀಚಿನ ದಿನಗಳಲ್ಲಿ ನನ್ನ ಬದುಕು ದುಸ್ತರವಾದಂತೆ ನನಗನಿಸುತ್ತಿದೆ. ಜೊತೆಗೆ ನನ್ನ ವೈಯಕ್ತಿಕ ಜೀವನವು ತೀರ ಹದಗೆಟ್ಟು ಹೋಗಿರುವುದರಿಂದ ನನಗೆ ಬದುಕುವ ಆಸಕ್ತಿಯು ಹೊರಟುಹೋಗಿದೆ. ಒಂದಿಷ್ಟು ತಿಂಗಳಿನಿಂದ ಸೀವಿಯರ್ ಡಿಪ್ರೆಶನ್ ನಿಂದ ಬಳಲುತ್ತಿದ್ದೇನೆ. ಹಾಗೇಯೇ ಮೂರ್ನಾಲ್ಕು ತಿಂಗಳಿಂದ ಒಂದಕ್ಷರವನ್ನು ಬರೆಯಲಾಗುತ್ತಿಲ್ಲ ಎಂಬ ಕೊರಗು ನನ್ನನ್ನು ಸದಾ ಕಾಡುತ್ತಿದೆ. “ಫಿಲ್ಲರ್ ಕಾದಂಬರಿಗಾರ್ತಿ ಯಾಗಿ ಸಿಕ್ಕ ಖ್ಯಾತಿಯೆಲ್ಲವೂ ಶೂನ್ಯವೆಂದು ನನಗೀಗ ಅರಿವಾಗುತ್ತಿದೆ. ಒಂದು ವೇಳೆ ನಾನು ಸತ್ತು ಹೋದರೆ, ಅದಕ್ಕೆ ನನ್ನ ಗಂಡ ಮತ್ತು ಅವನೊಟ್ಟಿಗೆ ಅಕ್ರಮ ಸಂಬಂಧವನ್ನು ಹೊಂದಿರುವ “ಚರ್ಚ್ ಸ್ಪೀಟ್ ನ ಹುಡುಗಿಯು ಕಾರಣವಾಗಿರುತ್ತಾರೆ. ಇದಲ್ಲದೆ ಸಾಯುವ ಮುನ್ನ ಸಾಕಷ್ಟು ರಹಸ್ಯಗಳನ್ನು ನಿನ್ನೊಂದಿಗೆ ತೆರದಿಡಬೇಕಿದೆ. ಆದ್ದರಿಂದ ಮಧ್ಯರಾತ್ರಿ ಒಂದರ ವೇಳೆಗೆ ನೀನು ನನ್ನನ್ನು ಭೇಟಿಯಾಗಬೇಕು. ಭೇಟಿಯು ರಹಸ್ಯವಾಗಿರುವುದರಿಂದ ಸ್ಥಳವನ್ನು ಕೂಡ ರಹಸ್ಯವಾಗಿರಿಸಿದ್ದೇನೆ. ನೆನಪಿರಲಿ, ಇದೊಂದು ಸೀಕ್ರೆಟ್ ಡೆತ್ ನೋಟ್ !! ನೋವಿನಿಂದ ತಾರಾಗುಪ್ತ…

₹225   ₹200

ಮೌಲ್ಯಗಳ ಸರದಾರ ಡಾ. ರಾಜ್ ಕುಮಾರ್ | Moulyagala Saradara Dr. Raj Kumar

ಮೌಲ್ಯಗಳ ಸರದಾರ ಡಾ. ರಾಜ್ ಕುಮಾರ್.

₹995   ₹886

ಸಿರಿವಂತಿಕೆಗೆ 100% ಸೂತ್ರಗಳು! | Sirivantikege 100% Sutragalu

ಮದುವೆಗೆ ಮುನ್ನ ವಧುವಿನ ಪೋಷಕರು, ಕಡೆಯವರು ವರನ ವರಮಾನ ಎಷ್ಟಿದೆ ಎಂಬುದನ್ನು ಆದ್ಯತೆಯ ಮೇರೆಗೆ ಪರಿಗಣಿಸದೆ ಇರುವುದಿಲ್ಲ. ನಾಲ್ಕು ಪುರುಷಾರ್ಥಗಳಲ್ಲಿ ಅರ್ಥಕ್ಕೆ ಎರಡನೇ ಸ್ಥಾನವಿದೆ. ಕ್ರಿಸ್ತಪೂರ್ವ ಕಾಲದಲ್ಲೇ ಭಾರತದಲ್ಲಿ ಚಾಣಕ್ಯ, ಅರ್ಥಶಾಸ್ತ್ರವನ್ನು ಬರೆದಿದ್ದ! ಈ ಮೂಲಕ ಹಣದ ಸಂಪಾದನೆಯನ್ನು ವಿಜ್ಞಾನಕ್ಕೆ ಸಮವೆಂದು ಪ್ರಾಚೀನ ಭಾರತ ಪುರಸ್ಕರಿಸಿತ್ತು. ಅಂಥ ದೇಶದಲ್ಲಿ ಹಣಕಾಸು ಸಾಕ್ಷರತೆ ಎಷ್ಟು ಕಡಿಮೆ ಎಂದರೆ ದಿಗ್ಧಮೆಯಾಗುತ್ತದೆ. ಹಣದ ಬಗ್ಗೆ ಬಹಿರಂಗವಾಗಿ ಮಾತನಾಡುವುದೇ ಪಾಪ ಎಂಬ ನಿಷೇಧಾತ್ಮಕ ಮನಸ್ಥಿತಿಯಿಂದ ಕುಟುಂಬ, ಸಮಾಜ, ದೇಶಕ್ಕೆ ಉಂಟಾಗಿರುವ ನಷ್ಟದ ಲೆಕ್ಕ ಇಟ್ಟವರಿಲ್ಲ. ವಿಶ್ವದಲ್ಲೇ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಭಾರತದ ಆರ್ಥಿಕ ಬೆಳವಣಿಗೆ ಪ್ರತಿಯೊಬ್ಬನ ವೈಯಕ್ತಿಕ ಸಂಪತ್ತಿನ ಹೆಚ್ಚಳಕ್ಕೂ ಕಾರಣವಾಗಬೇಕಿದ್ದರೆ, ಸಿರಿವಂತಿಕೆಯ ಸೂತ್ರಗಳನ್ನು 100% ತಿಳಿಯಬೇಕು. ಈ ನಿಟ್ಟಿನಲ್ಲಿ ಈ ಪುಸ್ತಕವನ್ನು ನಯ ಓದುಗರ ಮಡಿಲಿಗೆ ಇಡುತ್ತಿದ್ದೇವೆ.

₹180   ₹160

ಸ್ಫೂರ್ತಿ 25 ಜೀವನ ಪ್ರೀತಿಯ ಕಥೆಗಳು | Spoorthy 25 Jeevana Preethiya Kathegalu

ಬದುಕಿನ ಪ್ರತಿ ಕ್ಷಣವೂ ಸಿಹಿಯಾಗಿಯೇ ಇರುವುದಿಲ್ಲ. ಆದರೆ ಕಹಿಯಲ್ಲೂ ಸಿಹಿಯನ್ನು ಹುಡುಕುವುದರಲ್ಲೇ ಜೀವವೂ, ಜೀವನವೂ ಆಡಗಿದೆ. ಪ್ರತಿ ಸೂರ್ಯೋದಯಕ್ಕೂ ಹೊಸ ಬದುಕಿನ ಉದಯವಾಗುತ್ತದೆ. ಆ ಒಂದು ದಿನದ ಪ್ರತಿ ಕ್ಷಣವನ್ನು ನವೋಲ್ಲಾಸದಿಂದ ಕಳೆಯಬೇಕು ಅಂದರೆ ಸೂರ್ತಿ ಎಲ್ಲಿಂದ ಬರುತ್ತದೆ? ಯಾರು ಚೈತನ್ಯ ಕೊಡುತ್ತಾರೆ ಅಂತಲ್ಲ ಹುಡುಕಿದರೆ ಸಿಗುವುದಿಲ್ಲ. ನಮ್ಮೊಳಗೆ ಇರುವ ಧನಾತ್ಮಕ ಶಕ್ತಿಯನ್ನು ಪ್ರಚೋದಿಸಿಕೊಳ್ಳಬೇಕಷ್ಟೆ. ಸಣ್ಣ ಸಣ್ಣ ಸಂಭ್ರಮವೇ ಇಡೀ ದಿನವನ್ನು ನಿರಾಳವಾಗಿಸುತ್ತದೆ. ಮುಂಜಾವಿಗೆ ಅರಳಿದ ಹೂವಿನಲ್ಲೋ, ಪಕ್ಷಿಯ ಕೂಗಿನಲ್ಲೋ ಅಥವಾ ಇನ್ಯಾರದ್ದೋ ಮಾತು, ನಗುವಿಗೂ ನಿಮ್ಮನ್ನು ಖುಷಿಯಾಗಿ ಇಡುವ ಶಕ್ತಿ ಇದೆ ಅಂತಾದರೆ ಎದುರಾಗುವ ಯಾವ ಕ್ಷಣವನ್ನು ನಿರ್ಲಕ್ಷಿಸಬೇಡಿ, ಆಸ್ವಾದಿಸಿ ಎನ್ನುತ್ತವೆ ಹಲವರ ಬದುಕಿನಲ್ಲಿ ನಡೆದು ಹೋದ ದುರಂತ, ಯಾರದ್ದೋ ಹೋರಾಟ, ಮತ್ತೆಮತ್ತೆ ಸೋತು ಗೆದ್ದವರ ಈ ಕಥೆಗಳು. 'ಬರೆದು ಬದುಕು ಬದಲಿಸಿ' ಶೀರ್ಷಿಕೆಯಡಿ ವಿಜಯ ಕರ್ನಾಟಕ - ಸ್ನೇಹ ಬುಕ್ ಹೌಸ್ ಆಯೋಜಿಸಿದ್ದ ಯುಗಾದಿ ಲೇಖನ ಸ್ಪರ್ಧೆಗೆ ಬಂದ ಲೇಖನಗಳಲ್ಲಿ ಆಯ್ದ 25 ಲೇಖನಗಳ ಈ ಸಂಕಲನ ಓದಿದಾಕ್ಷಣ ನಿಮ್ಮ ಮನವೂ ಸಕಾರಾತ್ಮಕ ಭಾವದಿಂದ ಹೊಳಪುಗೊಳ್ಳದಿದ್ದರೆ ಹೇಳಿ...

₹200   ₹178

ಹಿಂದೂ ರಾಷ್ಟ್ರದಲ್ಲಿ ಹಿಂದೂಗಳು | Hindu Rashtradalli Hindugalu

ಎಂಟನೇ ದರ್ಜೆಯ ನಾಗರಿಕರಾಗಿಯೇ ಮುಂದುವರಿಯುತ್ತಾರೆ ಎಂಬುದನ್ನು ಪ್ರಬಲವಾಗಿ ತೋರಿಸಿದ್ದಾರೆ; ಓದುಗರ ಹೃದಯ ಮತ್ತು ಮನಸ್ಸನ್ನು ಜಾಗೃತಗೊಳಿಸುವ ಭರವಸೆ ಇದೆ. ಓದಲೇ ಬೇಕಾದ ಪುಸ್ತಕ. -ಜೆ. ಸಾಯಿ ದೀಪಕ್ ವಕೀಲರುHindu

₹299   ₹266