• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
  • ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ
  • Call Us: +91 7022122121 / +91 8861212172
  • Free shipping above ₹499
back

Publishers

Categories

Authors

Languages

Book Type

Clear All
Filter
ವಿದ್ಯಾರ್ಥಿಗಳಿಗೆ ಒಳ್ಳೆಯ ಅಧ್ಯಯನ ವಿಧಾನ ಉತ್ತಮ ನೆನಪಿನ ಶಕ್ತಿ | Vidyarthigalige olleya adhyayana vidhana uttama nenapina shakti

ವ್ಯಕ್ತಿಗತ ಬೆಳವಣಿಗೆಯ ಅತ್ಯಂತ ಪ್ರಮುಖ ಘಟ್ಟವಾದ 13-16ರ ವಯೋಮಾನದಲ್ಲಿರುವ ಪ್ರೌಢಶಾಲಾ ವಿದ್ಯಾರ್ಥಿಯ ವೈಯಕ್ತಿಕ ಆರೋಗ್ಯ, ಆಯ್ದುಕೊಳ್ಳುವ ಕೋರ್ಸ್, ಓದುವ ವಿಧಾನ, ಶಿಸ್ತುಬದ್ಧ ಅಧ್ಯಯನ, ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳುವ ಬಗೆ, ಮನೋಸ್ವಾಸ್ಥ್ಯ, ಮನೋವಿಶ್ವಾಸ ಹಾಗೂ ಪರೀಕ್ಷಾ ಸಿದ್ಧತೆ ಇತ್ಯಾದಿ ಅಂಶಗಳ ಕುರಿತಾಗಿ ಬೆಳಕು ಚೆಲ್ಲುವ ಇಂಥ ಮಹತ್ವದ ಪುಸ್ತಕವನ್ನು ರಚಿಸಿಕೊಟ್ಟಿರುವ ಡಾ| ಸಿ.ಆರ್. ಚಂದ್ರಶೇಖರ್ ಅವರಿಗೆ ಹಾರ್ದಿಕ ಅಭಿವಂದನೆಗಳು. ಪತ್ರ ರೂಪದಲ್ಲಿ ಓರ್ವ ಜವಾಬ್ದಾರಿಯುತ ತಂದೆ ಅಥವಾ ತಾಯಿ ಅಥವಾ ಭೋದಕ ಅತ್ಯಂತ ಆತ್ಮೀಯವಾಗಿ, ಆಪ್ತವಾಗಿ ತನ್ನ ಮಗ/ಮಗಳು/ ಶಿಷ್ಯನಿಗೆ ಓದಿನ ವಿಷಯವಾಗಿ ತಿಳಿ ಹೇಳುವ ರೀತಿಯಲ್ಲಿರುವ ಇಲ್ಲಿನ ಎಲ್ಲ ಚಿಂತನಗಳು ನಿಜಕ್ಕೂ ಸಕಾಲಿಕವೂ, ವೈಜ್ಞಾನಿಕವೂ, ಅರ್ಥಪೂರ್ಣವೂ ಆಗಿವೆ. – ಪ್ರಕಾಶಕ

₹100   ₹89

Buy Now
ಶಿಲ್ಪಕಲಾ ದೇವಾಲಯಕ್ಕೆ ದಾರಿ - ಸಂಪುಟ 7 | Shilpakalaa Devalayakke daari Samputa 7

ಭಾರತೀಯರಾದ ನಮ್ಮ ಪಾಲಿಗೆ ದೇವಾಲಯಗಳು ಜೀವನಮಾರ್ಗಕ್ಕೆ ಅವಶ್ಯಕವಾದ ಶ್ರದ್ಧಾಕೇಂದ್ರಗಳಾಗಿವೆ. ದೇವಾಲಯಗಳು ಸಮಾಜ-ಸಂಸ್ಕೃತಿ ಇತಿಹಾಸ-ಧರ್ಮ ಕ್ಷೇತ್ರಗಳಿಗೆ ಅಪಾರವಾದ ಕೊಡುಗೆಯನ್ನು ನೀಡುತ್ತಾ ನಮ್ಮೊಟ್ಟಿಗೆ ಸಾಗಿ ಬಂದಿವೆ. ಇವುಗಳ ಆಳ-ವೈಶಾಲ್ಯಗಳ ಬಗೆಗೆ ಚಿಂತನ-ಮಂಥನಗಳೂ ನಡೆದುಕೊಂಡು ಬಂದಿವೆ. ಆಲಯಗಳ ಬಗೆಗಿನ ನಮ್ಮ ಶ್ರವಣಾತ್ಮಕ ಅರಿವಿಗಿಂತ ಮಿಗಿಲಾಗಿ ಅವುಗಳನ್ನು ಕಣ್ಣುಂಬ ಕಂಡು ಮಾನಸಿಕ ಸಂತೋಷ-ಸಮಾಧಾನ-ಶಾಂತಿಗಳನ್ನು ಪಡೆಯಬೇಕೆಂದು ನಾವು ಸದಾ ಹಂಬಲಿಸುತ್ತೇವೆ.

₹220   ₹196

Buy Now
ಸಣ್ಣ ಕಥೆಗಳಲ್ಲಿ ಜೀವನ ತತ್ವ | Sanna kathegalalli Jeevana Tatva

ಈ ಪುಸ್ತಕವನ್ನು ಬರೆದ ಡಾ. ಸತ್ಯವತಿ ಮೂರ್ತಿಯವರ ಕನ್ನಡ ಪ್ರೇಮ ಮತ್ತು ಸಾಧನೆಯೂ ಗಮನಾರ್ಹ. ವಿವಿಧ ಪ್ರಕಾರಗಳ ಹಲವು ಪುಸ್ತಕಗಳನ್ನು ರಚಿಸಿರುವ ಇವರು, ಇಂಗ್ಲೆಂಡಿನ ಮ್ಯಾಂಚೆಸ್ಟರ್ ನಲ್ಲಿ (ರಾಯಲ್ ಕಾಲೇಜ್ ಆಫ್ ಮ್ಯೂಸಿಕ್) ನಡೆದ ಅಖಿಲ ಭಾರತೀಯ ಕವಿಗೋಷ್ಠಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಇಂಗ್ಲೆಂಡಿನಲ್ಲಿ ನೆಲೆಸಿ, ಸಾಹಿತ್ಯ ರಚನೆ, ಸಂಶೋಧನೆ ಮತ್ತು ಉಪನ್ಯಾಸಗಳನ್ನು ನೀಡುತ್ತಾ ಬಂದಿರುವ ಇಂಗ್ಲೆಂಡಿನ ಸರ್ಕಾರದ ವತಿಯಿಂದ 'ಪ್ರಿಸನ್ ಮಿನಿಸ್ಟರ್' ಆಗಿ ನೇಮಕಾತಿಯಾಗಿರುವುದು ಹೆಮ್ಮೆಯ ವಿಚಾರ. ವಿದೇಶದಲ್ಲಿ ನೆಲೆಸಿದ್ದು, ಇಷ್ಟೆಲ್ಲಾ ಬಿಡುವಿಲ್ಲದ ಕೆಲಸದ ನಡುವೆಯೂ, ಕನ್ನಡದ ಕುರಿತು, ಕನ್ನಡದ ಸಣ್ಣ ಕಥೆಗಳ ಕುರಿತು ಅಪಾರ ಅಭಿಮಾನವಿಟ್ಟುಕೊಂಡು, ಈ ಕೃತಿಯನ್ನು ಬರೆದಿರುವುದು ಸಹ ಎಲ್ಲರೂ ಹೆಮ್ಮೆ ಪಡುವ ವಿಚಾರ. "ಸಣ್ಣ ಕಥೆಗಳಲ್ಲಿ ಜೀವನ ತತ್ವ"ದಂತಹ ಅಪರೂಪದ ಕೃತಿಯನ್ನು ಕನ್ನಡದ ಓದುಗರಿಗೆ ನೀಡಿರುವ ಡಾ. ಸತ್ಯವತಿ ಮೂರ್ತಿಯವರನ್ನು ಮನಸಾರೆ ಅಭಿನಂದಿಸುತ್ತೇನೆ. -ಶಶಿಧರ ಹಾಲಾಡಿ

₹170   ₹151

Buy Now
ಹರಿಭಕ್ತಿ ಸಾರ | Haribhakti saara

ಆತ್ಮೀಯರೆ, ನಾನು ನಿಮ್ಮ ತನಾಶಿ. ಟಿ.ಎನ್. ಶಿವಕುಮಾರ್, ಮಂಡ್ಯಕೊಪ್ಪಲು. ಇದೋ ಕನಕದಾಸರ ಹರಿಭಕ್ತಿಸಾರವನ್ನು ಅರ್ಥ ಮತ್ತು ವ್ಯಾಖ್ಯಾನ ಸಹಿತ ಕನ್ನಡಿಗರ ಮಡಿಲಿಗೆ ಇಡುತ್ತಿದ್ದೇನೆ. ಹರಿಯ ವರ್ಣನೆಯನ್ನೂ, ಲೀಲಾವಿಲಾಸಗಳನ್ನೂ, ಹಾಡಿ ತಣಿಯದ ದಾಸರ ಪದ ಸಾಮ್ರಾಜ್ಯವು ನನ್ನ ವ್ಯಾಖ್ಯಾನದ ಜೊತೆಗೆ ನಿಮ್ಮೊಡನಿದೆ. ಇದು ನಿಮ್ಮ ಮೈಮನಗಳನ್ನು ಪುಳಕಗೊಳಿಸಿದರೆ ನನ್ನ ಶ್ರಮ ಸಾರ್ಥಕ. ಹರಿ ನಾಮ ಸಂಕೀರ್ತನೆಯು ಕನ್ನಡನಾಡಿನ ಮನೆಮನಗಳಲ್ಲಿ ಮೊಳಗಲಿ, ತಾವು ಓದಿ ಹಾರೈಸಿ, ಹರಸಿ,

₹120   ₹107

Buy Now
ಹರಿವು | Harivu

ಚಲನಶೀಲತೆ ಈ ಕಾದಂಬರಿಯ ಮುಖ್ಯವಾದ ಪ್ರತಿಮೆ ಎಂದು ನನ್ನ ಭಾವನೆ. ಚಲನೆ ಎಡೆಬಿಡದೆ ನಿರ್ಮಲಾಳನ್ನು ಭಾವಲೋಕದಿಂದ ಭಾವನೆಗಳ ಲೋಕಕ್ಕೆ, ವಾಸ್ತವ ಲೋಕದಿಂದ ಯಥಾರ್ಥವಾದ ಆತ್ಮ ಶುದ್ಧಿಯ ಮತ್ತು ಮುಂದುವರಿದು ಆತ್ಮ ಬೋಧೆಯ ಪ್ರಪಂಚಕ್ಕೆ ತೆಗೆದುಕೊಂಡು ಹೋಗುತ್ತದೆ. ಹೀಗೆ ಎಲ್ಲೆಲ್ಲಿ ನೋಡಿದರೂ ಬದುಕಿನ ಚಲನಶೀಲತೆಯನ್ನು ಬರವಣಿಗೆಯ ಮೂಲಕ ಸೆರೆ ಹಿಡಿಯಲು ಕಿರಣ್ ಅವರು ಪ್ರಯತ್ನಿಸಿದ್ದಾರೆ. ಡಾ. ಜಿ.ಬಿ. ಹರೀಶ (ಮುನ್ನುಡಿಯಿಂದ)

₹150   ₹134

Buy Now