#
nil
Nil
ಪ್ರೊಫೆಸರ್ ಅಕ್ಕಿಹೆಬ್ಬಾಳು ನರಸಿಂಹಮೂರ್ತಿ ರಾವ್ ಅವರು ಪರಿಪಕ್ವತೆಗೆ, ಸುಸಂಸ್ಕೃತ ಅಭಿರುಚಿಗೆ ಮತ್ತೊಂದು ಹೆಸರು. ಅವರದು ವಿಸ್ತಾರವಾದ, ಆಳವಾದ ಪುಸ್ತಕಜ್ಞಾನ; ಮೂರು ಖಂಡಗಳಲ್ಲಿ ಬದುಕನ್ನು ಕಂಡಿರುವ ವೈವಿಧ್ಯಮಯವಾದ ಲೋಕಾನುಭವ ಅವರದು. ಡಾಕ್ಟರ್ ಮೂರ್ತಿರಾಯರು ತಮ್ಮ ವಿದ್ವತ್ತು, ತಿಳಿಹಾಸ್ಯ, ಸರಳತೆ ಮತ್ತು ತೆರೆದ ಮನಸ್ಸಿನಿಂದ ಎಲ್ಲ ಪೀಳಿಗೆಗಳ ಪ್ರೀತಿ, ಗೌರವಗಳನ್ನು ಗೆದ್ದುಕೊಂಡ ಹಿರಿಯರಾಗಿದ್ದಾರೆ. ಕನ್ನಡದಲ್ಲಿ ಲಲಿತಪ್ರಬಂಧಕ್ಕೆ ವಿಶಿಷ್ಟ ರೂಪ ಕೊಟ್ಟು, ಅದರ ಸಾಧ್ಯತೆಗಳನ್ನು ತೋರಿಸಿಕೊಟ್ಟ ಅವರು ಲಲಿತ ಪ್ರಬಂಧದ ಸಾಮ್ರಾಟರಾಗಿದ್ದಾರೆ.
ಟಿ ನಿರಂಜನ ಮೂರ್ತಿ
ಸಾಹಿತಿ ಬೇಲೂರು ರಾಮಮೂರ್ತಿ ಅವರು ಮೂಲತಃ ಮೈಸೂರಿನವರು. ತಮ್ಮ ಹಾಸ್ಯ ಲೇಖನಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು. ಅವರು 1950 ಜೂನ್ 30ರಲ್ಲಿ ಜನಿಸಿದರು. ‘ಕಥಾ ಕುಸುಮ, ಕಥಾ ಕನ್ನಡಿ, ಕಥಾ ಬಿಂಬ, ಆಕಾಶದಿಂದ ಧರೆಗೆ’ ಅವರ ಕತಾ ಸಂಕಲನಗಳು. ‘ಪ್ರಬಂಧ, ನಾಟಕ, ಕಾದಂಬರಿ, ಹಾಸ್ಯ’ ಪ್ರಕಾರಗಳಲ್ಲಿ ಕೃಷಿ ಸಾಧಿಸಿದ್ದಾರೆ.
Showing 4831 to 4860 of 5492 results