ಸೋಲೆಂಬುದು ಅಲ್ಪವಿರಾಮ, ಬದುಕು ಬದಲಿಸಬಹುದು ಭಾಗ - 3 ಬದುಕು ಪ್ರೀತಿಯ ಈ ಸಂಕಲನ ಹೇಳುತ್ತದೆ: ಸೋಲೆಂಬುದು ಏನಿದ್ದರೂ ಅಲ್ಪವಿರಾಮವಷ್ಟೆ. ಬದುಕು ಕಾದಿದೆ ಸೋಲಿನಾಚೆಗೂ, ನೂರು ಬಣ್ಣಗಳಲ್ಲಿ. ನಮ್ಮ ಬದುಕಿನ ನಿಘಟಿನಿಂದ `ಸೋಲು` ಪದವನ್ನು ಹೊರಗೆ ಎಸೆಯೋಣ. ಯಾವುದೂ ಸೋಲಿಲ್ಲ. ಎಲ್ಲವೂ ಸವಾಲು.
nil
#
Sunstar Publisher
ಮಂಜುನಾಥ್ ಆರ್
ನಾಗರಾಜರಾವ್ ಎಂ ವಿ
ಎಸ್ ವಿ ವೆಂಕಟರಮಣಸ್ವಾಮಿ
ಗೋಪಾಲ್ ಟಿ ಎಸ್
ಬದುಕಿನ ಪ್ರತಿ ಕ್ಷಣವೂ ಸಿಹಿಯಾಗಿಯೇ ಇರುವುದಿಲ್ಲ. ಆದರೆ ಕಹಿಯಲ್ಲೂ ಸಿಹಿಯನ್ನು ಹುಡುಕುವುದರಲ್ಲೇ ಜೀವವೂ, ಜೀವನವೂ ಆಡಗಿದೆ. ಪ್ರತಿ ಸೂರ್ಯೋದಯಕ್ಕೂ ಹೊಸ ಬದುಕಿನ ಉದಯವಾಗುತ್ತದೆ. ಆ ಒಂದು ದಿನದ ಪ್ರತಿ ಕ್ಷಣವನ್ನು ನವೋಲ್ಲಾಸದಿಂದ ಕಳೆಯಬೇಕು ಅಂದರೆ ಸೂರ್ತಿ ಎಲ್ಲಿಂದ ಬರುತ್ತದೆ? ಯಾರು ಚೈತನ್ಯ ಕೊಡುತ್ತಾರೆ ಅಂತಲ್ಲ ಹುಡುಕಿದರೆ ಸಿಗುವುದಿಲ್ಲ. ನಮ್ಮೊಳಗೆ ಇರುವ ಧನಾತ್ಮಕ ಶಕ್ತಿಯನ್ನು ಪ್ರಚೋದಿಸಿಕೊಳ್ಳಬೇಕಷ್ಟೆ. ಸಣ್ಣ ಸಣ್ಣ ಸಂಭ್ರಮವೇ ಇಡೀ ದಿನವನ್ನು ನಿರಾಳವಾಗಿಸುತ್ತದೆ. ಮುಂಜಾವಿಗೆ ಅರಳಿದ ಹೂವಿನಲ್ಲೋ, ಪಕ್ಷಿಯ ಕೂಗಿನಲ್ಲೋ ಅಥವಾ ಇನ್ಯಾರದ್ದೋ ಮಾತು, ನಗುವಿಗೂ ನಿಮ್ಮನ್ನು ಖುಷಿಯಾಗಿ ಇಡುವ ಶಕ್ತಿ ಇದೆ ಅಂತಾದರೆ ಎದುರಾಗುವ ಯಾವ ಕ್ಷಣವನ್ನು ನಿರ್ಲಕ್ಷಿಸಬೇಡಿ, ಆಸ್ವಾದಿಸಿ ಎನ್ನುತ್ತವೆ ಹಲವರ ಬದುಕಿನಲ್ಲಿ ನಡೆದು ಹೋದ ದುರಂತ, ಯಾರದ್ದೋ ಹೋರಾಟ, ಮತ್ತೆಮತ್ತೆ ಸೋತು ಗೆದ್ದವರ ಈ ಕಥೆಗಳು. 'ಬರೆದು ಬದುಕು ಬದಲಿಸಿ' ಶೀರ್ಷಿಕೆಯಡಿ ವಿಜಯ ಕರ್ನಾಟಕ - ಸ್ನೇಹ ಬುಕ್ ಹೌಸ್ ಆಯೋಜಿಸಿದ್ದ ಯುಗಾದಿ ಲೇಖನ ಸ್ಪರ್ಧೆಗೆ ಬಂದ ಲೇಖನಗಳಲ್ಲಿ ಆಯ್ದ 25 ಲೇಖನಗಳ ಈ ಸಂಕಲನ ಓದಿದಾಕ್ಷಣ ನಿಮ್ಮ ಮನವೂ ಸಕಾರಾತ್ಮಕ ಭಾವದಿಂದ ಹೊಳಪುಗೊಳ್ಳದಿದ್ದರೆ ಹೇಳಿ...
Showing 4891 to 4920 of 5217 results