ಪ್ರತಿಭಾನ್ವಿತ ವಿಶ್ರಾಂತ ಶಿಕ್ಷಕಿಯಾಗಿರುವ ಶ್ರೀಮತಿ ಪುಷ್ಪಾ ಜೋಗಿಯವರು, ತಮ್ಮ ನಿವೃತ್ತಿಯ ನಂತರ, ತಾವು ಹಸ್ತ ಪ್ರತಿಯಲ್ಲಿ ಜೋಡಿಸಿಟ್ಟ ಬರಹಗಳನ್ನೆಲ್ಲಾ ಕೃತಿ ರೂಪದಲ್ಲಿ ಪ್ರಕಟಿಸಲಾರಂಭಿಸಿದ್ದಾರೆ. ಈಗಾಗಲೇ ಅವರು ಭಾವ ಲಹರಿ, ನಮ್ಮೂರ ಬೈಲಗುತ್ತು, ಐಸಿರದ ಬೂಡು, ಪಂಚ ಪುರ್ಪಗಳೆಂಬ ನಾಲ್ಕು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿ ಸಾಹಿತ್ಯ ಪ್ರಿಯರ ನಡುವೆ ಜನಾನುರಾಗಿಯಾಗಿದ್ದಾರೆ. ಸಂತೃಪ್ತಿ ನಾಟಕ ಕೃತಿಯು ಅವರ ಐದನೇ ಕೃತಿಯಾಗಿದೆ ಸಾಹಿತ್ಯ ಪ್ರಕಾರಗಳಲ್ಲಿ ನಾಟಕಕ್ಕೆ ಅದರದ್ದೇ ಆದ ಮಹತ್ವವಿದೆ. ಅವುಗಳು ರಂಗದಲ್ಲಿ ಅಭಿನಯಿಸಲ್ಪಟ್ಟಾಗ ಜನ ಮಾನಸದಲ್ಲಿ ಭದ್ರವಾಗಿ ನೆಲೆಯೂರುತ್ತದೆ.