![](https://veeralokabooks.com/wp-content/uploads/2023/07/md_5551234110363_041120201037420.jpg)
![](https://veeralokabooks.com/wp-content/uploads/2023/07/md_5551234109809_140720201046168.jpg)
ಶೂನ್ಯ
![](https://veeralokabooks.com/wp-content/uploads/2023/07/517FgC19TkL-150x238.jpg)
![](https://veeralokabooks.com/wp-content/uploads/2023/07/517FgC19TkL-150x238.jpg)
₹ 299 Original price was: ₹ 299.₹ 266Current price is: ₹ 266.
Secure Payments
Your payments are 100% secure
Pan India Shipping
Delivery between 2-8 Days
Return Policy
No returns accepted. Please refer our full policy
SYNOPSIS
ಸತ್ಯ ಮತ್ತು ನಂಬಿಕೊಂಡ ಸತ್ಯ, ಅನಂತ ಮತ್ತು ಸೀಮಿತದ ನಡುವಿನ ತಡೆಗೋಡೆಯನ್ನು ಒಡೆಯುವಂತಹಾ ಮಹಾನಿರ್ವಾಣದ ಮೇಲಿನ ಧ್ಯಾನವೇ ಶ್ರೀ ಎಂ ರವರ ಈ ಮೊದಲನೆಯ ಕಾದಂಬರಿ. ಇದು ಸಣ್ಣಸಣ್ಣ ಕಥೆಗಳಿಂದ ಮತ್ತು ಉತ್ಕೃಷ್ಟ ಜ್ಞಾನದಿಂದ ನಮ್ಮನ್ನು ಶೂನ್ಯದ ಆಯಾಮಕ್ಕೆ; ಅತ್ಯಂತ ದೃಢವಾದ ಮತ್ತು ಕೊನೆಗಾಣದ ಪ್ರಶಾಂತತೆಯ ಏನೂ ಅಲ್ಲದ ಸ್ಥಿತಿಗೆ – ಸಕಲ ಚರಾಚರಗಳ ಆದಿ ಅಂತ್ಯಕ್ಕೆ ಕರೆದುಕೊಂಡು ಹೋಗುತ್ತದೆ. ಅದು ಕೇರಳದ ಚಿಕ್ಕನಗರ; ಸಮೀಪವೇ ಇರುವ ಜಂಜಾಟವಿಲ್ಲದ ಒಂದು ಚಿಕ್ಕ ಕೇರಿಯಲ್ಲಿ ಅವನು ಎಲ್ಲಿಂದಲೋ ಪ್ರತ್ಯಕ್ಷನಾದ. ಅವನು ತನ್ನನ್ನು ತಾನು `ಶೂನ್ಯ’; `ಮಹಾ ಸೊನ್ನೆ’ ಎಂದು ಕರೆದುಕೊಂಡ. ಯಾರಿವನು? ಹುಚ್ಚನೇ? ಮಾಟಗಾರನೇ? ವಂಚಕನೇ? ಅಥವಾ ಅವಧೂತ; ಸಾಕ್ಷಾತ್ಕಾರ ಹೊಂದಿದವನೇ? ಸ್ವಾಮಿ – ಅವನನ್ನು ಎಲ್ಲರೂ ಕರೆಯುತ್ತಿದ್ದುದು ಹಾಗೆಯೇ. ಅಲ್ಲಿಯ ಸ್ಥಳೀಯ ಕಳ್ಳಿನಂಗಡಿಯ ಹಿತ್ತಲಲ್ಲಿದ್ದ ಒಂದು ಚಿಕ್ಕ ಕಾಟೇಜಿನಲ್ಲಿ ನೆಲೆಯೂರಿದ್ದ. ಅಲ್ಲಿ ನೀತಿಕಥೆಗಳ ಸುರಿಮಳೆಗೈಯುತ್ತಿದ್ದ, ಆಶೀರ್ವದಿಸುತ್ತಿದ್ದ, ಶಪಿಸುತ್ತಿದ್ದ, ಕಪ್ಪುಚಹಾವನ್ನು ಕೊನೆಯೇ ಇಲ್ಲವೆಂಬಂತೆ ಹೀರುತ್ತಾ ಸಂಪೂರ್ಣ ಸ್ವತಂತ್ರತೆಯಲ್ಲಿ ಸ್ವಚ್ಛಂದವಾಗಿ. ಕೆಲವು ಅಪರೂಪದ ಸನ್ನಿವೇಶಗಳಲ್ಲಿ ತನ್ನ ಹಳೆಯ ಬಿದಿರಿನ ಕೊಳಲಿನಿಂದ ಮನಮಿಡಿಯುವ ಮಧುರ ನಾದಗಳನ್ನು ನುಡಿಸುತ್ತಿದ್ದ. ಒಂದು ಹೊಸಾ ಯುಗಕ್ಕೆ ಒಬ್ಬ ಹೊಸಾ ಅವಧೂತನಿಗೆ ಮಾರ್ಗವನ್ನು ಅಣಿಗೊಳಿಸಿದ ಶೂನ್ಯ ತಾನು ಬಂದಷ್ಟೇ ನಿಗೂಢವಾಗಿ ಕಣ್ಮರೆಯೂ ಆದ.
ABOUT AUTHOR
Opinion of Others
There are no others opinion yet.
Reviews
There are no reviews yet.