• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
back

Publishers

Categories

Sub Categories

Authors

Languages

Book Type

Clear All
Filter
ಬೆಳಕಿನ ಹೊಳೆ | Belakina Hole

ನಾಡಿನ ಹೆಸರಾಂತ ಸಾಹಿತಿಗಳು, ತತ್ತ್ವ ದರ್ಶನಗಳ ರಸಮಯ ವ್ಯಾಖ್ಯಾನಕಾರರೂ ಆಗಿರುವ ಜಿ. ಬಿ. ಹರೀಶರು ಬರೆದಿರುವ ಸಾ.ಕೃ. ರಾಮಚಂದ್ರ ರಾಯರ ಜೀವನ ಚರಿತ್ರೆಯನ್ನು ಓದುವಾಗ ರೋಮಾಂಚನವಾಗುವ ಜೊತೆ ಜೊತೆಗೇ ದುಃಖವೂ ಆಗುತ್ತದೆ. ಬಹುಶ: ಅವರು ಅಮೆರಿಕದಲ್ಲೋ, ಜರ್ಮನಿಯಲ್ಲೋ ಹುಟ್ಟಿ ಆ ದೇಶಗಳ ಇತಿಹಾಸ ಇಂಡಿಕ್, ಅಧ್ಯಯನ ವಿಭಾಗಗಳಲ್ಲಿ ದುಡಿದಿದ್ದರೆ ಈಗಿಗಿಂತ ಹೆಚ್ಚಿನ ಜಗದ್ವಿಖ್ಯಾತಿ, ಧನ ಸಂಪಾದನೆ ಮಾಡಿ ಮೇಲೇರಬಹುದಿತ್ತು. ಆಸ್ತಿಕ ಸಮಾಜವೇನೋ ಅವರನ್ನು ಗೌರವಿಸಿತ್ತು. ಆದರೆ ಇದ್ದಷ್ಟು ದಿನ ಅವರಿಗೆ ಒಂದು ಪದ್ಮಪ್ರಶಸ್ತಿಯೂ ಬರಲಿಲ್ಲ ಎಂಬುದೇ ನಮ್ಮ ಕಾಲದ ಮಹಿಮೆಯನ್ನು ಹೇಳುತ್ತದೆ. ರಾಯರು ತುಂಬು ಜೀವನ ನಡೆಸಿ ಕನ್ನಡ, ಇಂಗ್ಲಿಷ್, ಸಂಸ್ಕೃತ, ಪ್ರಾಕೃತ ಪಾಳಿ ಭಾಷೆಗಳ ಕಣಜವನ್ನು ತಿಳಿವಿನಿಂದ ತುಂಬಿದರು. ಸಾವಿರದ ಹೊಳೆಯುವ ಈ ಸಾಲಿಗ್ರಾಮಕ್ಕೆ ಇದು ನಮಸ್ಕಾರ ಪೂರ್ವಕ ನುಡಿ ನಮನ.

₹120   ₹107

ಯಂತ್ರ ಕಥೆ | Yantra Kathe

ಯಂತ್ರ ಕಥೆ ಯಂತ್ರ ಸಾಧನಗಳ ಉಗಮ, ಇತಿಹಾಸ ಹಾಗೂ ದೈನಂದಿನ ಬದುಕಿನಲ್ಲಿ ಅವುಗಳ ಪಾತ್ರವನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಒಂದು ಪ್ರಯತ್ನ. ವಿಜ್ಞಾನದ ಪ್ರಗತಿಯಲ್ಲಿ ಯಂತ್ರಗಳ ಪಾತ್ರ ಮಹತ್ತರ. ಪ್ರತಿಯೊಂದು ಯಂತ್ರವೂ ವಿಕಾಸದ ಹಾದಿಯಲ್ಲಿ ತನ್ನ ವಿಶಿಷ್ಟ ಕೊಡುಗೆ ನೀಡಿದೆ. ಯಂತ್ರೋಪಜೀವಿ ಮಾನವನಿಗೆ ಈ ಪರಂಪರೆಯ ಅಧ್ಯಯನ ಅನಿವಾರ್ಯ, ಲಾಭದಾಯಕ. ಈ ಪುಸ್ತಕದ ಲೇಖಕರಾದ ಶ್ರೀ ಎಂ. ಶಿವಕುಮಾರ್ ಸ್ವತಃ ಯಂತ್ರ ವಿಜ್ಞಾನದಲ್ಲಿ ವಿಶೇಷ ಪರಿಣತಿ ಹೊಂದಿರುವವರು, ಹಲವು ಯಂತ್ರ ಹತಾರಗಳ ವಿನ್ಯಾಸಕ್ಕೆ, ನಿರ್ಮಾಣಕ್ಕೆ ಕಾರಣ ಪುರುಷರು. ವೃತ್ತಿಯಲ್ಲಿ ಇಂಜಿನಿಯರ್, ಪ್ರವೃತ್ತಿಯಲ್ಲಿ ಸಾಹಿತಿಯಾಗಿರುವ ಲೇಖಕರ ಈ ಕೃತಿ ವಿಜ್ಞಾನ ವಿಷಯಕ್ಕೆ ಸಾಹಿತ್ಯದ ಮೆರುಗನ್ನು ಪಡೆದಿದ್ದು, ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಪ್ರಥಮ ಪ್ರಶಸ್ತಿ ಪಡೆದ ಪುಸ್ತಕವಾಗಿದೆ.

₹145   ₹129

ಯಶೋವಣಿ|Yashovaani

nil

₹230   ₹205