
ನಾಡಿನ ಹೆಸರಾಂತ ಸಾಹಿತಿಗಳು, ತತ್ತ್ವ ದರ್ಶನಗಳ ರಸಮಯ ವ್ಯಾಖ್ಯಾನಕಾರರೂ ಆಗಿರುವ ಜಿ. ಬಿ. ಹರೀಶರು ಬರೆದಿರುವ ಸಾ.ಕೃ. ರಾಮಚಂದ್ರ ರಾಯರ ಜೀವನ ಚರಿತ್ರೆಯನ್ನು ಓದುವಾಗ ರೋಮಾಂಚನವಾಗುವ ಜೊತೆ ಜೊತೆಗೇ ದುಃಖವೂ ಆಗುತ್ತದೆ. ಬಹುಶ: ಅವರು ಅಮೆರಿಕದಲ್ಲೋ, ಜರ್ಮನಿಯಲ್ಲೋ ಹುಟ್ಟಿ ಆ ದೇಶಗಳ ಇತಿಹಾಸ ಇಂಡಿಕ್, ಅಧ್ಯಯನ ವಿಭಾಗಗಳಲ್ಲಿ ದುಡಿದಿದ್ದರೆ ಈಗಿಗಿಂತ ಹೆಚ್ಚಿನ ಜಗದ್ವಿಖ್ಯಾತಿ, ಧನ ಸಂಪಾದನೆ ಮಾಡಿ ಮೇಲೇರಬಹುದಿತ್ತು. ಆಸ್ತಿಕ ಸಮಾಜವೇನೋ ಅವರನ್ನು ಗೌರವಿಸಿತ್ತು. ಆದರೆ ಇದ್ದಷ್ಟು ದಿನ ಅವರಿಗೆ ಒಂದು ಪದ್ಮಪ್ರಶಸ್ತಿಯೂ ಬರಲಿಲ್ಲ ಎಂಬುದೇ ನಮ್ಮ ಕಾಲದ ಮಹಿಮೆಯನ್ನು ಹೇಳುತ್ತದೆ. ರಾಯರು ತುಂಬು ಜೀವನ ನಡೆಸಿ ಕನ್ನಡ, ಇಂಗ್ಲಿಷ್, ಸಂಸ್ಕೃತ, ಪ್ರಾಕೃತ ಪಾಳಿ ಭಾಷೆಗಳ ಕಣಜವನ್ನು ತಿಳಿವಿನಿಂದ ತುಂಬಿದರು. ಸಾವಿರದ ಹೊಳೆಯುವ ಈ ಸಾಲಿಗ್ರಾಮಕ್ಕೆ ಇದು ನಮಸ್ಕಾರ ಪೂರ್ವಕ ನುಡಿ ನಮನ.
Category: | ಕನ್ನಡ |
Sub Category: | ಅಂಕಣ ಬರಹಗಳು |
Author: | ಡಾ. ಜಿ ಬಿ ಹರೀಶ | Dr. G B Harisha |
Publisher: | ಸಮೃದ್ಧ ಸಾಹಿತ್ಯ | Samrudda Saahitya |
Language: | Kannada |
Number of pages : | |
Publication Year: | 2025 |
Weight | 300 |
ISBN | |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಡಾ. ಜಿ ಬಿ ಹರೀಶ | Dr. G B Harisha |
ಡಾ. ಜಿ. ಬಿ. ಹರೀಶ ಹುಟ್ಟಿದ್ದು 1975ರಲ್ಲಿ, ಹಾಸನದಲ್ಲಿ ಎಂಎ, ಎಂಬಿಎ ಮತ್ತು ಪಿಎಚ್ಡಿ ಪದವೀಧರರು. ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಕನ್ನಡಅಧ್ಯಾಪಕರಾಗಿ, ಕರ್ನಾಟಕ ಜ್ಞಾನ ಆಯೋಗದ ಕಣಜದ ಸಂಶೋಧನಾಧಿಕಾರಿಯಾಗಿ, ತುಮಕೂರು ವಿವಿಯ ಡಿ. ವಿ. ಗುಂಡಪ್ಪ ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ, “ಪ್ರಜಾವಾಣಿ”ಯ ಮುಖ್ಯ ಉಪಸಂಪಾದಕರಾಗಿ, “ವಿಜಯವಾಣಿ”ಯ ಸಂಪಾದಕೀಯ ಸಲಹೆಗಾರರಾಗಿ ಸೇವೆ. ಮೂರು ವರ್ಷ ವಿಯೆಟ್ನಾಂನ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕರ ಜವಾಬ್ದಾರಿ, ಭಾರತೀಯ ರಾಜದೂತವಾಸದಲ್ಲಿ ಸೇವಾನುಭವ. ಡಾ. ಜಿ. ಬಿ. ಹರೀಶ, ದಿ ಮಿಥಿಕ್ ಸೊಸೈಟಿಯಿಂದ ‘ಶತಮಾನದ ಕಿರಿಯ ಸಂಶೋಧಕ” ಗೌರವಕ್ಕೆ ಪಾತ್ರರಾಗಿದ್ದಾರೆ. “ಆನಂದ ಕುಮಾರಸ್ವಾಮಿ” ಗ್ರಂಥಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ “ಪುಸ್ತಕ ಬಹುಮಾನ ಪಡೆದಿದ್ದಾರೆ. ರಾಷ್ಟ್ರಾಧ್ಯಕ್ಷರು ಕೊಡಮಾಡುವ ಬಾದರಾಯಣ ವ್ಯಾಸಸಮ್ಮಾನ್ ಎಂಬ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರು (2018). ಎನ್ನಂತರಂಗದ ಆತುಮ, ಸೂಜಿಮೊನೆ, ಆಕಾಶಕ್ಕೆ ಆಶ್ಚರ್ಯ, ಸ್ವಾಮಿ ವಿವೇಕಾನಂದ, ಟಿ. ವಿ. ಕಪಾಲಿಶಾಸ್ತ್ರೀ, ದೇವಚಂದ್ರನ ಭಾಷೆ-ಸಂಸ್ಕೃತಿ, ವಿಶ್ವಸಂಸ್ಕೃತಿಯ ಹರಿಕಾರ ಆನಂದ ಕುಮಾರಸ್ವಾಮಿ, ಎಸ್. ಕೆ. ರಾಮಚಂದ್ರ ರಾವ್ ಮೊದಲಾದ ಹಲವು ಕೃತಿಗಳ ಕರ್ತೃ. ಡಾ. ಶಂಕರ ಮೊಕಾಶಿ ಪುಣೇಕರ ಹಾಗೂ ಪಂಡಿತ ದೀನದಯಾಳ್ ಉಪಾಧ್ಯಾಯರ ಸಮಗ್ರ ಸಾಹಿತ್ಯದ ಸಂಪಾದಕರು. ವೀರ್ ಸಾವರ್ಕರ್ ರಚಿತ “ಹಿಂದುತ್ವ’ದ ಅನುವಾದಕರು. ಕನ್ನಡದ ಪ್ರಸಕ್ತ ಬೌದ್ಧಿಕ ವಲಯದಲ್ಲಿ ಅತ್ಯಂತ ಪ್ರಖರ ಚಿಂತಕರೆಂದು ಗುರುತಿಸಿಕೊಂಡಿರುವ ಡಾ. ಹರೀಶರ ವಾಗಿತೆಯನ್ನು ಯೂಟ್ಯೂಬ್ನ ಹಲವು ವಿಡಿಯೋಗಳಲ್ಲಿ ನೋಡಬಹುದು. |
0 average based on 0 reviews.