nil
#
ತನ್ನ ಕಛೇರಿಯ ಸಮಯದ ನಂತರವೂ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಸಿದ್ಧತೆ ಮಾಡುವ ವೃತ್ತಿ ಯಾವುದಾದರೂ ಇದ್ದರೇ ಅದು ಶಿಕ್ಷಕ ವೃತ್ತಿ ಮಾತ್ರ. ಆ ಕಾರ್ಯತತ್ಪರತೆಯ ಗೌರವ ನಮಗಿರಬೇಕು. ತಮ್ಮ ಸ್ವಂತ ಮಕ್ಕಳೊಡನೆ ಸಮಯ ಕೊಡಲಾಗದಿದ್ದರೂ ವಿದ್ಯಾರ್ಥಿಗಳೆಲ್ಲರನ್ನು ಮಕ್ಕಳಂತೆ ಪ್ರೀತಿಸಿ, ಪೋಷಿಸುವ ನಿಸ್ವಾರ್ಥ ಸೇವೆಯ ಅರಿವು ನಮಗಿರಬೇಕು. ನೂರಾರು ಕಣ್ಣುಗಳ ನಡುವೆ ನೊಂದು ತೇವವಾದ, ಸೋತು ಸೊರಗಿ ಹೋದ, ಆತ್ಮ ವಿಶ್ವಾಸ ಕಳೆದುಕೊಂಡು ಕುಗ್ಗಿ ಕಮರಿದ ಮನಸ್ಸುಗಳನ್ನು ಸದಾ ಹುರಿದುಂಬಿಸಿ, ಗೆಲುವಾಗುವ ದಾರಿ ತೋರಿಸಿ, ಕೈ ಹಿಡಿದು ಮುನ್ನಡೆಸಿ, ಭವ್ಯ ಭವಿಷ್ಯದ ಕನಸನ್ನು ಕಲ್ಪಿಸಿ ಬದುಕು ಬೆಳಗಿಸುವ ದಿವ್ಯ ದೃಷ್ಟಿಯನ್ನು ಸೃಷ್ಟಿಸುವ ಶಿಕ್ಷಕರ ಪಾತ್ರದ ಮಹತ್ವ ನಮಗೆ ತಿಳಿದಿರಬೇಕು. ಒಬ್ಬ ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣದಲ್ಲಿ ಇಂತಹ ನಮ್ರತೆ, ಸದ್ಗುಣಗಳ ವಿವೇಕವನ್ನು ಜ್ಞಾನದ ಜೊತೆಗೆ ಕಲಿಸುವ ಮಹಾಗುರುವನ್ನು, ಸದಾ ಪೂಜ್ಯನೀಯ ಸ್ಥಾನದಲ್ಲಿ ನೋಡುವ ಹಾಗೂ ಸದ್ವಿಚಾರವನ್ನು ಕಲಿಸುವ ಜ್ಞಾನ ದೇಗುಲವೆಂಬ ಶಾಲೆಯನ್ನು ಕೈ ಮುಗಿದು ಗೌರವಿಸುವ ಮನವೆಂದೂ ಪ್ರಶ್ನಿಸುವ, ಅಪಮಾನಿಸುವ, ಅಣಕಿಸುವ, ಅಪಹಾಸ್ಯ ಮಾಡುವ ಕುತ್ಸಿತ ಸ್ಥಿತಿಗೆ ರೂಪಾಂತರವಾಗದಿರಲಿ.
Nil
ಜೆ ರಂಜಾನ್ , ವಿ ಸಿ ರುದ್ರಾಣಿ
ತೃತೀಯ ಅಂಗಿಗಳ ಒಳತೋಟಿ, ಹಣ್ಣಿನ ಬೇಗುದಿ, ಎಳೆಮನದ ತೊಳಲಾಟ, ಮನೋವೈದ್ಯಕೀಯ ಒಳನೋಟ…
ಕಳೆದ 30 ವರ್ಷದಿಂದ ಬರೆವಣಿಗೆಯಲ್ಲಿ ತೊಡಗಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಪಾವೂರು ಗ್ರಾಮದ ಅರಸ್ತಾನ ಎಂಬಲ್ಲಿನ ಹಂಝ ಮಲಾರ್ ವೃತ್ತಿಯಲ್ಲಿ ಪತ್ರಕರ್ತ. ತನ್ನ ವೃತ್ತಿಯ ಸಂದರ್ಭ ನಾನಾ ವಿಧದ ಜನರೊಂದಿಗೆ ನೇರ ಸಂಪರ್ಕ ಸಾಧಿಸುವ ಮೂಲಕ ಜೀವನಾನುಭವ ಪಡೆಯುತ್ತಿರುವ ಹಂಝ ಮಲಾರ್ ಅವುಗಳನ್ನೆಲ್ಲಾ ಕಥೆಗಳಿಗೆ ಬಳಸಿಕೊಳ್ಳುತ್ತಿರುವುದು ವಿಶೇಷ. ಕಥನ ಕಲೆಯಲ್ಲಿ ಸಾಕಷ್ಟು ಹಿಡಿತ ಸಾಧಿಸಿರುವ ಹಂಝ ಮಲಾರ್ ಈವರೆಗೆ 230 ಕಥೆಗಳನ್ನು ಬರೆದಿದ್ದಾರೆ. ಈ ಸಂಕಲನದಲ್ಲಿ ಕಳೆದ ಐದು ವರ್ಷದ ಅವಧಿಯಲ್ಲಿ ಬರೆದ 10 ಕಥೆಗಳಿವೆ. "ಅರ್ಧ ಹಿಂದೂ-ಅರ್ಧ ಮುಸ್ಲಿಂ" ಜಾತ್ಯತೀತ ವ್ಯಕ್ತಿಯ ಒಳನೋಟದ ಬಗ್ಗೆ ಬೆಳಕು ಚೆಲ್ಲಿದೆ. ಪ್ರೇಮಿಗಳು ಹುಟ್ಟೂರು ಬಿಟ್ಟು ಬೇರೊಂದು ಊರಲ್ಲಿ ನೆಲೆ ನಿಲ್ಲಲು ಪ್ರಯತ್ನಿಸುವಾಗ ಪ್ರಿಯತಮೆಯನ್ನು ಮಾತ್ರ ಕೇಂದ್ರೀಕರಿಸುವುದರ ಬಗ್ಗೆ "ಓಡಿ ಬಂದವಳು" ಕಥೆಯಲ್ಲಿ ಚಿತ್ರಿಸಲಾಗಿದೆ. "ಉಮ್ಮಾ..." ಕಥೆಯು ಪ್ರತಿಷ್ಠಿತ ಕುಟುಂಬದ ಹಿರಿಯ ಮಹಿಳೆಯೊಬ್ಬರು ಆಧುನಿಕ ಬದುಕಿಗೆ ಒಗ್ಗಿಕೊಳ್ಳುವುದರ ಬಗ್ಗೆ ತಿಳಿಸುತ್ತದೆ. ಉಳಿದಂತೆ ಎಲ್ಲಾ ಕಥೆಗಳು ಒಂದನ್ನೊಂದು ಬಿಟ್ಟುಕೊಡದಷ್ಟು ವಸ್ತುವಿನಲ್ಲಿ ಪೈಪೋಟಿ ಮಾಡುತ್ತದೆ.
Showing 301 to 330 of 5421 results