
ಒಂದು ಕಾಲಕ್ಕೆ ಸಾಹಿತ್ಯಲೋಕದಲ್ಲಿ ಶಿಕ್ಷಕರದ್ದೇ ಸಿಂಹಪಾಲು. ಆದರೆ ಈಗ ಕಾಲ ಬದಲಾಗಿದೆ. ನಮ್ಮ ಶಿಕ್ಷಕರಿಗೆ ಬರೆಯುವಷ್ಟು ಸಮಯ ಪಕ್ಕಕ್ಕಿಡಿ, ಓದಲೂ ಸಮಯವಿಲ್ಲದಂತಾಗಿದೆ ಶಿಕ್ಷಕವರ್ಗವೇ ಓದಿನಿಂದ ವಿಮುಖರಾಗಿರುವ ವ್ಯವಸ್ಥೆಯಲ್ಲಿ ನಾವಿದ್ದೇವೆ. ಈ ನಡುವೆ ಓದು ಅಂಕಗಳಿಕೆಗೆ ಮಾತ್ರ ಬಳಕೆಯಾಗುತ್ತಿರುವುದು ಹೊಸ ಸಂಗತಿ ಏನಲ್ಲ. ದೇಶದ ಪಿತಾಮಹರಂತಹ ದೊಡ್ಡ ಪ್ರಶ್ನೆಗಳನ್ನು ಬಿಡಿ, ದೇಶದ ರಾಷ್ಟ್ರಪತಿ, ರಾಜ್ಯಪಾಲರು ಯಾರೆಂಬುದು ಗೊತ್ತಾಗದಂತಹ ಶಿಕ್ಷಣವನ್ನು ನಾವು ಮಕ್ಕಳಿಗೆ ನೀಡುತ್ತಿದ್ದೇವೆ. ಇಂತಹ ಸ್ಥಿತಿಯಲ್ಲಿ ಇಲ್ಲೊಂದು ಶಾಲೆ, ಶಿಕ್ಷಕಿ ಮತ್ತವರ ದಿನಚರಿ ತುಸು ವಿಭಿನ್ನ ಮತ್ತು ಮಾದರಿಯಂತಿದೆ. ಚೂರು ಹೊಸ ಭರವಸೆಯನ್ನು ಮೂಡಿಸುತ್ತಿದೆ.
Category: | ವೀರಲೋಕ ಪುಸ್ತಕಗಳು |
Sub Category: | |
Author: | ಮೇದಿನಿ ಕೆಸವಿನಮನೆ|Medini Kesavinamane |
Publisher: | ವೀರಲೋಕ |
Language: | Kannada |
Number of pages : | 148 |
Publication Year: | 2024 |
Weight | 200 |
ISBN | 9788197200618 |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಬದುಕು ಹಕ್ಕಲ್ಲ; ಕೃತಜ್ಞತೆ. ಹಕ್ಕು ಋಣ, ಕೃತಜ್ಞತೆ ಶಾ೦ತಿ ಮತ್ತು ನೆಮ್ಮದಿ. ಹಕ್ಕಲ್ಲಿ ಹಸಿವು, ಬರ. ಕೃತಜ್ಞತೆಯಲ್ಲಿ ತೃಪ್ತಿ. ಯಾವುದೂ ಹಕ್ಕಾಗದೇ ಎಲ್ಲವನ್ನೂ ಕೃತಜ್ಞತಾ ಭಾವದಲ್ಲಿ ಸ್ವೀಕರಿಸಿರುವ ಈ ಲೇಖಕಿಯ ಮನಸ್ಥಿತಿ ಪ್ರಬುದ್ಧವಾದರೂ ಜೀವರಸ ಬಾಲ್ಯದ ಮುಗ್ಧತೆಯೇ..
ಹಾಗಾಗಿ ಒಂದು ಪ್ರೈಮರಿ ಶಾಲೆಯ ಹತ್ತು ಮತ್ತಷ್ಟು ವರ್ಷಗಳ ಬಾಲಿಶವಾಗಿ ಕಳೆದುಹೋಗಬಲ್ಲಂತಹ ಅನುಭವಗಳು ಪ್ರಬುದ್ಧವಾಗಿ ದಾಖಲಾಗಿವೆ. ಮಕ್ಕಳೊಟ್ಟಿಗೆ ಮಕ್ಕಳಾಗುವುದು ಸುಲಭ. ಘಟನೆಗಳನ್ನು ಮಕ್ಕಳ ಆಟಿಕೆಯೆನಿಸದೇ ಪ್ರಬುದ್ಧವಾಗಿ ಓದುಗರಿಗೆ ತಲುಪಿಸುವುದು ಕಷ್ಟ. ಮೇದಿನಿ ಕೆಸವಿನಮನೆಯವರು ಈ ನಾಡಿನ ಒಂದು ಗ್ರಾಮೀಣ ಪ್ರದೇಶದ ದೈನಂದಿನ ಬದುಕಿನ ಸ್ಥಿತಿಗತಿಗಳನ್ನು ಪ್ರೈಮರಿ ಶಾಲೆಯ ಮಕ್ಕಳ ದೃಷ್ಟಿಕೋನದಲ್ಲಿ ಪ್ರಬುದ್ಧವಾಗಿ ಬಿ೦ಬಿಸಿದ್ದಾರೆ. ಭಾಷೆ ಇಷ್ಟವಾಗತ್ತೆ, ಭಾವ ಮನಸ್ಸು ಮುಟ್ಟುತ್ತೆ.
ಅವರದ್ದೇ ಮಾತು; "ಬಾಲ್ಯವೆ೦ಬುದು ಸಮೃದ್ಧವಾಗಿದ್ದರೆ ಬದುಕಿನಲ್ಲಿ ಭಾವ ಎ೦ದೂ ಬತ್ತುವುದಿಲ್ಲ" - ಬಡತನದ ಮನೆಗಳಲ್ಲಿ ಹಸಿವಿನದ್ದೇ ತಾಂಡವ. ಅದು ಲಯಬದ್ಧವಾದಾಗ ಭಾವದ ಚಿಲುಮೆ. ಮುಳುಗಡೆಯ ಭೀತಿ, ಕೈಚಾಚಲಾಗದ ಮನಸ್ಥಿತಿ. ಇಲ್ಲಿ ಒಡಲ ಹಸಿವನ್ನು ತಣಿಸಿ, ಭಾವ ಸಮೃದ್ಧಿಯನ್ನು ಜಿನುಗಿಸಿದ ಅದೊಂದು ತಲೆಮಾರಿಗೆ ಶರಣು.
ಕೊನೆಯ ಮಾತಲ್ಲಿ ಮಂಗಳ ಹಾಡಿದ್ದೀರಿ? ಇದು ನಾಂದಿ; ಮಂಗಳಕ್ಕಿನ್ನೂ ಸಮಯವಿದೆ!
-ಸೇತುರಾಮ್ ಎಸ್ ಎನ್
ಮೇದಿನಿ ಕೆಸವಿನಮನೆ|Medini Kesavinamane |
0 average based on 0 reviews.