• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
  • ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
back

Publishers

Categories

Authors

Languages

Book Type

Clear All
Filter
ಅಂಬಿಕಾತನಯದತ್ತನ ಹಾಡ ಬೆಳುದಿಂಗಳ ನೋಡs... | Beludingala Noda..

ದೊಡ್ಡ ಬೆರಗು. ಶಬ್ದ, ನಾದ, ಲಯ, ಛಂದ ಎಂಬ ನಾಲ್ಕು ತಂತ್ರ ಚತುರ್ಮುಖತೆಯಿಂದ ಕನ್ನಡ ಕಾವ್ಯವಾಹಿನಿಗೆ ಬೆಲೆಯುಳ್ಳ ಚಿರಕಾವ್ಯವನ್ನು ಕೊಟ್ಟ ಧೀಮಂತ ಕವಿ. ಇವರ ಕಾವ್ಯವನ್ನು ಓದಿ ನಾಡು ತಣಿದಿದೆ. ಕವಿಯ ಕಾವ್ಯ ವ್ಯಕ್ತಿತ್ವದ ಆಯಾಮ ಒಂದು ಮಜಲಾದರೆ, ಆತನ ಸಾಮಾಜಿಕ ವ್ಯಕ್ತಿತ್ವ ಮತ್ತೊಂದು ಮಜಲು. ವಿದ್ವತ್ತಿನ ಗತ್ತು, ಕಾವ್ಯಪ್ರತಿಭೆಯ ಮೇಲರಿಮೆ, ಸಿಟ್ಟು, ಸೆಡವು, ಜಗಳಗಂಟಿತನ, ವಾಗ್ವಿಲಾಸದ ವೈಖರಿ, ಬಹುಶ್ರುತ ಆಸಕ್ತಿ, ಅಪಾರವಾದ ಜ್ಞಾನಾಕಾಂಕ್ಷೆ, ಜಗದೆಲ್ಲ ಚಟುವಟಿಕೆಗಳನ್ನು ಕಾವ್ಯ ಪರಿಪ್ರೇಕ್ಷ್ಯದಲ್ಲಿ ಕಾಣುವ, ಕಾಣಿಸುವ ಬಗೆ, ಮಗು ಸಹಜ ಮುಗ್ಧತೆ ಈ ಎಲ್ಲ ಗುಣಗಳ ಸಮ್ಮಿಲನದ ಗಾರುಡಿಗ ವ್ಯಕ್ತಿತ್ವ ಬೇಂದ್ರೆಯವರದು. ಇವರ ಬಗೆಗೆ ಪ್ರಚಲಿತದಲ್ಲಿರುವ ಕತೆಗಳನ್ನು, ಸಂಗತಿಗಳನ್ನು, ಪ್ರಸಂಗಗಳನ್ನು ಒಂದೆಡೆ ಸಂಗ್ರಹಿಸಿ ಉಳಿಸುವ ಮತ್ತು ಮುಂದಿನ ತಲೆಮಾರಿಗೆ ಒದಗಿಸಿಕೊಡುವ ಜವಾಬ್ದಾರಿ ನಮ್ಮ ಮೇಲಿದೆ. ಈ ಕಾರಣದಿಂದ ಎಚ್. ಎಸ್. ಸತ್ಯನಾರಾಯಣ ಅವರ 'ಅಂಬಿಕಾತನಯದತ್ತನ ಹಾಡ ಬೆಳುದಿಂಗಳು ನೋಡಾ...' ಎಂಬ ಕೃತಿ ಮಹತ್ವದ್ದು.

₹150   ₹134

ಆಧುನಿಕ ಮನೋವಿಜ್ಞಾನದ ಪ್ರವರ್ತಕರು | Adhunika Manovijnanada pravartakaru

‘ಆಧುನಿಕ ಮನೋವಿಜ್ಞಾನದ ಪ್ರವರ್ತಕರು’ ಪುಸ್ತಕ ಮೇಲ್ನೋಟಕ್ಕೆ ನೂರೊಂದು ಜನ ಮನೋವಿಜ್ಞಾನಿಗಳ ಪರಿಚಯ ಮಾಡಿಕೊಡುವ ಸ್ವರೂಪದಲ್ಲಿದ್ದರೂ ವಾಸ್ತವವಾಗಿ ಇದು ಮನೋವಿಜ್ಞಾನದ ಇತಿಹಾಸವನ್ನು ಕನ್ನಡದಲ್ಲಿ ನಿರೂಪಿಸುವ ಅಪರೂಪದ ಪುಸ್ತಕ. ಯಾವ ವಿಷಯವನ್ನೇ ಆದರೂ ಐತಿಹಾಸಿಕ ದೃಷ್ಟಿಕೋನದಿಂದ ನೋಡುವುದು ಬಸವಣ್ಣನವರ ಅಧ್ಯಯನ ಕ್ರಮ. ಇದು ರೂಢಿಯ ಇತಿಹಾಸದ ಮಾದರಿಯಲ್ಲ, ನೂರೊಂದು ಮಂದಿ ಮನೋವಿಜ್ಞಾನಿಗಳ ಬದುಕು-ಸಾಧನೆ, ಅವರು ಮನೋವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆ, ಮನೋವಿಜ್ಞಾನವನ್ನು ಬೆಳೆಸಿದ ಬಗೆಯನ್ನು ಕಟ್ಟಿಕೊಡುತ್ತಲೇ ಬಸವಣ್ಣನವರು ಮನೋವಿಜ್ಞಾನದ ಇತಿಹಾಸವನ್ನು ನಮಗೆ ಪರಿಚಯ ಮಾಡಿಕೊಡುತ್ತಾರೆ. ಕಾಲಾನುಕ್ರಮದಲ್ಲಿ ಮನೋವಿಜ್ಞಾನಿಗಳ ಪರಿಚಯ ಮಾಡಿಕೊಟ್ಟಿರುವುದು ಈ ಆಶಯಕ್ಕೆ ಪೂರಕವಾಗಿದೆ. ವಿಲ್ ಹೆಲ್ತ್ ವೊಂಟ್‌ ನಿಂದ ಹಿಡಿದು ಇಂದಿನ ಸುಪರ್ಣಾ ರಾಜಾರಾಮ್ ವರೆಗೆ ಈ ಶತಮಾನದ ಎಲ್ಲ ಪ್ರಮುಖ ಮನೋವಿಜ್ಞಾನಿಗಳ ಬಗೆಗೆ ಇಲ್ಲಿ ಮಾಹಿತಿ ಇದೆ. ಇದನ್ನು ಓದುತ್ತಾ ಹೋದಂತೆ ಮನೋವಿಜ್ಞಾನ ಜಗತ್ತಿನ ಸಾಧಕರ ಸಾಧನೆಯ ಪಯಣದಲ್ಲಿ ಹಾದು ಬಂದ ಅನುಭವವಾಗುತ್ತದೆ. ಜಗತ್ತಿನ ಜ್ಞಾನ ಕನ್ನಡ ಮನಸ್ಸುಗಳಿಗೆ ಕನ್ನಡದಲ್ಲಿಯೇ ಸಿಗಬೇಕೆಂಬ ಹಿನ್ನೆಲೆಯಲ್ಲಿ ಬಸವಣ್ಣನವರ ಈ ಪ್ರಯತ್ನ ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ಅತ್ಯಂತ ಮಹತ್ವದ್ದು, – ನರಹಳ್ಳಿ ಬಾಲಸುಬ್ರಹ್ಮಣ್ಯ ಮುನ್ನುಡಿಯಿಂದ

₹275   ₹245

ಗಾಂಧೀ ಜೋಡಿನ ಮಳಿಗೆ | Gandhi Jodina Malige

ಕತೆಗಾರಿಕೆಯ ಕೌಶಲವನ್ನು ಕತೆಗಾರನ ಆಳವಾದ ಸಂವೇದನಾಶೀಲತೆಯನ್ನು, ಸಮಾಜಮುಖಿಯಾದ ನೈಜ ಕಾಳಜಿಯನ್ನು ಹೊಂದಿರುವ ಗಟ್ಟಿಯಾದ ಕಥಾವಸ್ತುವುಳ್ಳ ಕತೆಗಳು ಸಂಕಲನದ ಮಹತ್ವವನ್ನು ಹೆಚ್ಚಿಸಿವೆ. ಪ್ರಕಾಶ ಅವರು ನೆಲಮೂಲದ ಸಂಸ್ಕೃತಿಯ ಸತ್ವದಿಂದ ವಿಶೇಷವಾಗಿ ಪುಷ್ಟಿಗೊಂಡವರು.

₹175   ₹156

ನೂರಕ್ಕೆ ನೂರು ಕಲಿಕೆ ಮತ್ತು ಅಂಕ ಗಳಿಕೆ | Noorakke nooru Kalike mattu Anka Galike

ಇದೊಂದು ವಿನೂತನವಾದ ಶೈಕ್ಷಣಿಕ ಮನೋವಿಜ್ಞಾನದ ಗ್ರಂಥ. ಇದರ ಪುಟಪುಟಗಳಲ್ಲೂ ವಿದ್ಯಾರ್ಥಿಗಳಿಗೆ ಅವಶ್ಯವಿರುವ ವಿಪುಲ ಮನೋವೈಜ್ಞಾನಿಕ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಈ ಗ್ರಂಥದ ಪರಿವಿಡಿಯ ಮೇಲೆ ಒಮ್ಮೆ ಕಣ್ಣಾಡಿಸಿದರೆ ಸಾಕು, ಅಲ್ಲಿಯ ಶೀರ್ಷಿಕೆಗಳು ವಿದ್ಯಾರ್ಥಿಗಳ ಮನಸ್ಸನ್ನು ಸೆರೆಹಿಡಿಯುತ್ತವೆ. ಶಿಕ್ಷಣದ ಜೀವಾಳವಾಗಿರುವ ವಾಚನ, ವ್ಯಾಸಂಗ, ಮನನ ಮುಂತಾದವುಗಳ ಸ್ವರೂಪದ ಕುರಿತು ಸಂಕ್ಷಿಪ್ತವಾದರೂ ಮನಮುಟ್ಟುವಂತೆ ವಿವರಿಸಿದ್ದಾರೆ. ಒಟ್ಟು ಶಿಕ್ಷಣದ ಪ್ರಕ್ರಿಯೆಗಳಾದ ಕಲಿಕೆಗೆ ಪ್ರೇರಣೆ, ಏಕಾಗ್ರತೆಯ ಸಂವರ್ಧನೆ, ಸಮಯದ ನಿರ್ವಹಣೆ, ಓದಿನ ವೇಗವನ್ನು ಹೆಚ್ಚಿಸಿಕೊಳ್ಳುವುದು, ಸುಂದರವಾಗಿ ಬರೆಯುವುದು, ನೂರಕ್ಕೆ ನೂರು ಅಂಕ ಗಳಿಕೆಯ ಅಭಿಲಾಷೆಯಿಂದ ಮುನ್ನಡೆಯುವುದು, ಪರೀಕ್ಷೆಯ ಬಗೆಗಿನ ಭಯಭೀತಿಗಳನ್ನು ಧೈರ್ಯದಿಂದ ಎದುರುಗೊಂಡು ನಿರ್ವಹಿಸುವುದು- ಹೀಗೆ ವಿದ್ಯಾರ್ಥಿಗಳಿಗೆ ಸೂಕ್ತ ಹಾಗೂ ವಾಸ್ತವಿಕ ಮಾರ್ಗದರ್ಶನ ಮಾಡಬಲ್ಲ ಸಂಗತಿಗಳನ್ನು ಬಹು ಸರಳವಾಗಿ ಮತ್ತು ಸ್ಪಷ್ಟವಾಗಿ ಮಂಡಿಸಿದ್ದಾರೆ.

₹85   ₹76