ಎಸ್ ವಿ ಶ್ರೀನಿವಾಸಮೂರ್ತಿ

ಹೆಸರು ಶ್ರೀನಿವಾಸಮೂರ್ತಿ. ಊರು ತಾಯಿ ಶಾರದೆಯ
ನೆಲೆವೀಡಾದ ಶೃಂಗೇರಿ. ಓದಿದ್ದು ಬಿ.ಎಸ್‌ಸಿ. ಮತ್ತು ಸೇರಿದ್ದು
ಬ್ಯಾಂಕ್ ಕೆಲಸಕ್ಕಾದರೂ ವಿಜ್ಞಾನದ ಬಗೆಗಿನ ಪ್ರೀತಿಯನ್ನು
ಇನ್ನೂ ಉಳಿಸಿಕೊಂಡಿದ್ದೇನೆ. ಮೊದಲಿನಿಂದಲೂ ಓದುವ
ಹವ್ಯಾಸವನ್ನು ಬೆಳೆಸಿಕೊಂಡಿದ್ದ ನನಗೆ ರಾತ್ರಿಯ ಶುಭ್ರ
ಆಕಾಶವನ್ನು ನೋಡುತ್ತ ಗ್ರಹ, ತಾರೆಗಳನ್ನು ವೀಕ್ಷಿಸುವುದೆಂದರೆ
ಬಹಳ ಇಷ್ಟ. ಪಠ್ಯದ ಓದಿಗಿಂತ ಬೇರೆ ಓದಿನಲ್ಲೇ ಹೆಚ್ಚು
ಆಸಕ್ತಿಯಿತ್ತು. ಜೊತೆಗೆ ಓದಿದ್ದನ್ನು, ತಿಳಿದುಕೊಂಡಿದ್ದನ್ನು
ನಾಲ್ಕಾರು ಜನರ ಜೊತೆಗೆ ಹಂಚಿಕೊಳ್ಳಬೇಕೆAಬ ತುಡಿತ
ನನ್ನದು. `ತರಂಗ’ ವಾರಪತ್ರಿಕೆ ಹಾಗೂ `ಸೂತ್ರ’ ವಿಜ್ಞಾನ
ಮಾಸಪತ್ರಿಕೆಗಳಲ್ಲೂ ನಿರಂತರವಾಗಿ ಬರೆಯುತ್ತಿದ್ದೆ.
ಗೌರಿಬಿದನೂರಿನ ಡಾ|| ಎಚ್ಚೆನ್ ಉಪಪ್ರಾದೇಶಿಕ ವಿಜ್ಞಾನ
ಕೇಂದ್ರದ ಕೆಲಸಗಳಲ್ಲೂ ಒಂದಿಷ್ಟು ಅಳಿಲುಸೇವೆ ಸಲ್ಲಿಸಿದ
ಭಾಗ್ಯ ನನ್ನದು.