#
nil
ವಸಾಹತುಪೂರ್ವ ಮತ್ತು ವಸಾಹತುಕಾಲೀನ ಭಾರತದ ಸಂದರ್ಭದಲ್ಲಿ ಆರ್ಥಿಕತೆಯ ಜೀವನಾಡಿಯಾಗಿದ್ದುದು ಕೃಷಿ ಮತ್ತು ಅದಕ್ಕೆ ಪೂರಕವಾಗಿದ್ದ ಕೈಗಾರಿಕೆಗಳ ವ್ಯವಸ್ಥೆಯೇ ಆಗಿದ್ದರೂ ಕರ್ನಾಟಕಕ್ಕೆ ಸಂಬಂಧಿಸಿ ಆ ಕುರಿತ ಅಧ್ಯಯನಗಳು ನಡೆದದ್ದು ಕಡಿಮೆಯೇ. ಈ ದೃಷ್ಟಿಯಿಂದ ಗೆಳೆಯ ಸಿದ್ದಲಿಂಗಸ್ವಾಮಿಯವರ ''ವಸಾಹತುಶಾಹಿ ಮೈಸೂರು ಸಂಸ್ಥಾನದ ಆರ್ಥಿಕ ಚರಿತ್ರೆ'' ಎಂಬ ಈ ಕೃತಿ ಸ್ವಾಗತಾರ್ಹವಾದುದು. 19ನೆಯ ಶತಮಾನಾರಂಭದಿಂದ ಹಿಡಿದು 20ನೇ ಶತಮಾನದ ಪೂರ್ವಾರ್ಧದ ವರೆಗಿನ ಅವಧಿಯ ಕರ್ನಾಟಕದ ಕೃಷಿ, ಕೃಷಿ ವ್ಯವಸ್ಥೆ, ಭೂ ಹಿಡುವಳಿ, ಭೂಕಂದಾಯ ವ್ಯವಸ್ಥೆಗಳು, ಔದ್ಯಮೀಕರಣ ಹಾಗೂ ನಗರೀಕರಣಗಳ ಪ್ರಕ್ರಿಯೆಯಲ್ಲಿ ಉಂಟಾದ ಕೃಷಿಯ ವಾಣಿಜೀಕರಣದಿಂದ ಉಂಟಾದ ಸ್ಥಿತ್ಯಂತರಗಳೇ ಮೊದಲಾದ ವಿಷಯಗಳನ್ನು ಸಿದ್ದಲಿಂಗಸ್ವಾಮಿಯವರು ವಿಮರ್ಶಾತ್ಮಕವಾಗಿ ಪರಿಶೀಲಿಸಿದ್ದಾರೆ.
ವಾಬಿ ಸಾಬಿ – ಅಪರಿಪೂರ್ಣತೆಯಲ್ಲಿನ ವಿವೇಕ ನೀವು ಅದೆಷ್ಟು ಅತ್ಯುತ್ತಮ ಅಪರಿಪೂರ್ಣ ವ್ಯಕ್ತಿಯಾಗಬಲ್ಲಿರೋ, ಆಗಿರಿ! ಸರಳ ಹಾಗೂ ಸುಲಭಗ್ರಾಹ್ಯವಾದ ಶೈಲಿಯಲ್ಲಿ, ನಮ್ಮ ಅಪರಿಪೂರ್ಣತೆ ಮತ್ತು ಅಶಾಶ್ವತತೆಯನ್ನು ಅಪ್ಪಿಕೊಳ್ಳುವುದರಿಂದ ಅದು ನಮ್ಮನ್ನು ನಾವು ಉತ್ತಮಗೊಳಿಸಿಕೊಳ್ಳಲು ಹೇಗೆ ಮುಕ್ತವಾಗಿರಿಸುತ್ತದೆ, ಹಾಗೂ ‘ಉತ್ತಮಗೊಳ್ಳುವುದು’ ಎಂಬ ಪದದ ಅರ್ಥವನ್ನು ಅದು ಹೇಗೆ ಒಂದು ರೀತಿ ಮೌಲ್ಯೀಕರಿಸುತ್ತದೆ, ಹಾಗೆ ನೋಡಿದರೆ ನಿಜಕ್ಕೂ ಅದೇ ಲೆಕ್ಕಕ್ಕೇ ಬರುವಂತಹದ್ದು, ಮತ್ತು ಅದನ್ನೇ ನಾವು ನಿಜಕ್ಕೂ ಬಯಸಿರುವುದು ಎಂಬುದನ್ನು ‘ವಾಬಿ ಸಾಬಿ’ ತೋರಿಸುತ್ತದೆ. ನೀವು ಮತ್ತು ನಿಮ್ಮ ಅಪರಿಪೂರ್ಣ ಜೀವನ ಇವೆರಡೂ ಕೂಡ, ನೀವು ಅವನ್ನು ಹೇಗೆಂದು ತಿಳಿದುಕೊಂಡಿದ್ದಿರೋ ಅವಕ್ಕಿಂತ ಬಹಳ ಬಹಳ ಉತ್ತಮವಾಗಿವೆ ಎಂದು ಆವಿಷ್ಕಾರ ಮಾಡಲು ಈ ಪುಸ್ತಕ ನಿಮಗೆ ಸಹಾಯ ಮಾಡಬಲ್ಲದ್ದು, ಹಾಗೂ ನಿಮ್ಮ ಪಾಲಿಗೆ ಬಂದುದ್ದನ್ನು ಸ್ವೀಕರಿಸಿ, ಬಾರದ್ದನ್ನು ಬಿಡುವುದಿದೆಯಲ್ಲ, ಅದು ನಿಮ್ಮನ್ನು ಅತ್ಯುತ್ತಮ ಮತ್ತು ಸಂತೋಷದಾಯಕವಾಗಿರುವ ನಿಮ್ಮತ್ತಲೇ ಕರೆದೊಯ್ಯಬಲ್ಲುದು.
Showing 4291 to 4320 of 5422 results