
Category: | ಕನ್ನಡ |
Sub Category: | ವ್ಯಕ್ತಿತ್ವ ವಿಕಸನ |
Author: | ಸಂತೋಷ್ ರಾವ್ ಪೆರ್ಮುಡ | Santhosh Rao Permuda |
Publisher: | ಕದಂಬ ಪ್ರಕಾಶನ | Kadamba Prakashana |
Language: | Kannada |
Number of pages : | |
Publication Year: | |
Weight | |
ISBN | |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ನಮ್ಮ ಜೀವನದಲ್ಲಿ ನಾವು ಯಶಸ್ಸು ಗಳಿಸಬೇಕು ಎಂದರೆ ಅದಕ್ಕೆ ವಿಭಿನ್ನ ಮಂತ್ರ ಪರಿಸಬೇಕು. ನಮ್ಮ ಸೋಲಿಗೆ, ಬಡತನಕ್ಕೆ, ಅಪಯಶಸ್ಸಿಗೆ, ಜಂಜಾಟದ ಬದುಕಿಗೆ, ನೋವಿಗೆ ಮತ್ತು ದುಃಖಕ್ಕೆ ಯಾರು ಕಾರಣವೆಂದು ಒಮ್ಮೆ ಕೂಲಂಕುಶವಾಗಿ ಯೋಜನೆ ಮಾಡಿದರೆ ನಿಜಾಂಶ ತಿಳಿಯುತ್ತದೆ. ನಮ್ಮೆಲ್ಲ ಸೋಲು ಗೆಲುವುಗಳಿಗೆ, ನೋವು ನಲಿವುಗಳಿಗೆ, ಏಳು ಬೀಳುಗಳಿಗೆ, ಕಷ್ಟ ನಷ್ಟಗಳಿಗೆ, ಉನ್ನತಿ ಅವನತಿಗಳಿಗೆಲ್ಲ ನಾವೇ ಕಾರಣರು ನಮ್ಮ ಸೋಲು ಗೆಲುವು, ಬಡತನ ಹಿರಿತನಕ್ಕೆ ನಾವೇ ಜವಾಬ್ದಾರರಲ್ಲದೇ ಮತ್ಯಾರೂ ಜವಾಬ್ದಾರರು ಆಗಿರುವುದಿಲ್ಲ. ನಮ್ಮ ಜೀವನದಲ್ಲಿ ನಾವು ಮಾಡುವ ಸಣ್ಣಪುಟ್ಟ ತಪ್ಪುಗಳು, ಬೇಜವಾಬ್ದಾರಿಗಳು, ನಿರ್ಲಕ್ಷ್ಯಗಳು ನಮ್ಮನ್ನು ಸೋಲಿನ ಸುಳಿಯಲ್ಲಿ ಸಿಲುಕಿಸಿ ನಮ್ಮನ್ನು ಅಪಯಶಸ್ಸಿನ ತೂಪಕ್ಕೆ ತಳ್ಳುತ್ತವೆ. ಆದ್ದರಿಂದ ನಮ್ಮ 'ಲೈಘನ ಸಕ್ಸೆಸ್ ಮಂತ್ರ' ನಮ್ಮ ಬಳಿಯೇ ಇದೆ ಎಂದು ಹೇಳಬಹುದು. ನಮ್ಮ ಬದುಕಿನ ಅತಿದೊಡ್ಡ ಸಕ್ಸಸ್ ಮಂತ್ರ ನಾವೇ ಆಗಿರುತ್ತೇವೆ. ತುಸು ಪ್ರಬುದ್ಧರಾಗಿ ಯೋಚನೆ ಮಾಡಿದರೆ ನಮ್ಮ ಭವಿಷ್ಯವು ಇನ್ನಷ್ಟು ಉಜ್ವಲ ಮತ್ತು ಸ್ಪಷ್ಟವಾಗಿ ಗೋಚರಿಸುತ್ತದೆ. ಜೀವನದಲ್ಲಿ ಯಶಸ್ವಿ ವ್ಯಕ್ತಿಯಾಗಬೇಕು ಎಂಬ ತುಡಿತ ಇದ್ದರೆ ಎಲ್ಲರೂ ಬದುಕಿನಲ್ಲಿ ಸಕ್ಸೆಸ್ ಮಂತ್ರವನ್ನು ಅಳವಡಿಕೆ ಮಾಡಿಕೊಳ್ಳಬೇಕು.
'ಮಂತ್ರದಿಂದ ಮಾವಿನ ಕಾಯಿ ಉದುರುವುದಿಲ್ಲ' ಎನ್ನುವ ಗಾದೆ ಮಾತು ಎಷ್ಟು ಸತ್ಯವೋ ಅದೇ ರೀತಿ ಬದುಕಿನಲ್ಲಿ ಯಶಸ್ಥ ಅಷ್ಟು ಸುಲಭವಾಗಿ ದಕ್ಕುವುದಿಲ್ಲ. ಅದಕ್ಕಾಗಿ ಕಠಿಣ ವ್ರತವನ್ನು ಮಾಡಬೇಕು, ಹಲವು ತ್ಯಾಗಗಳನ್ನು ಮಾಡಬೇಕು. ಕಣ್ಣೀರಿನಿಂದ ಕೂಡಿದ ಸನ್ನಿವೇಶಗಳನ್ನೂ ನಿರ್ಲಿಪ್ತತೆಯಿಂದ ಎದುರಿಸಬೇಕು, ಹಲವು ವಿಚಾರಗಳಲ್ಲಿ ನಮ್ಮ ವ್ಯಕ್ತಿತ್ವವನ್ನು ನಾವು ಬದಲಾವಣೆ ಮಾಡಿಕೊಳ್ಳಬೇಕು, ಹಲವು ವಿಚಾರಗಳನ್ನು ಬಿಟ್ಟುಬಿಡಬೇಕು, ಹಲವು ವಿಚಾರಗಳಲ್ಲಿ ರಾಜಿ ಅಗಬೇಕು. ಈ ಎಲ್ಲದರಲ್ಲೂ ತನ್ನನ್ನು ತಾನು ತೊಡಗಿಸಿಕೊಂಡು ಶಿಲ್ಪದಂತೆ ಕೆತ್ತನೆಗೆ ಒಳಪಟ್ಟ ವ್ಯಕ್ತಿಗಳ ಷ್ಟೇ ಯಶಸ್ಸು ಎನ್ನುವ ಮಂತ್ರವನ್ನು ಪರಿಸಬಹುದು. ಈ ಭೂಮಿಯಲ್ಲಿ ಹುಟ್ಟಿದ್ದೇನೆ. ಹೇಗೋ ಬದುಕಿದರಾಯ್ತು ಎಂದು ಬದುಕುವಾತ ಜೀವನದ ಸಾಗರವನ್ನೇ ದಾಟಲಾರ. ಆದ್ದರಿಂದ ಯಶಸ್ವಿಗಾಗಿ ಹಲವು ಮಂತ್ರಗಳನ್ನು ಪ್ರತಿಕ್ಷಣವೂ ಪರಿಸಬೇಕು ಮತ್ತು ಹಲವು ವಾಗ್ದಾನ ಮಾಡಕಾದ್ದು ಅತೀ ಮುಖ್ಯ.
ಸಂತೋಷ್ ರಾವ್ ಪೆರ್ಮುಡ
ಸಂತೋಷ್ ರಾವ್ ಪೆರ್ಮುಡ | Santhosh Rao Permuda |
0 average based on 0 reviews.