“ಅನಾಥ ಪ್ರೀತಿಯ ಅನುಬಂಧ” ಕಾದಂಬರಿಯ ಲೇಖಕರು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯವರು. ಹಾಲಾಡಿ, ಶಂಕರನಾರಾಯಣದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣ. ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಬಿ.ಎಸ್ಸಿ. ಪದವಿ.
ಸಿಂಡಿಕೇಟ್ ಬ್ಯಾಂಕಿನ ಮಥುರಾ, ನವದೆಹಲಿ, ಮಂಗಳೂರು, ಬೆಳಗಾವಿ, ಶಂಕರನಾರಾಯಣ ಶಾಖೆ-ಕಚೇರಿಗಳಲ್ಲಿ ಮೂವತ್ತಾರು ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತಿಯ ನಂತರ ಪ್ರಸ್ತುತ ಹಾಲಾಡಿಯ ಬೆಳಾರಮಕ್ಕಿಯಲ್ಲಿ ನೆಲೆಸಿದ್ದಾರೆ.
ಯಕ್ಷಗಾನ, ನಾಟಕ, ಸಾಹಿತ್ಯದಲ್ಲಿ ಬಾಲ್ಯದಿಂದಲೇ ಆಸಕ್ತಿ. ಕನ್ನಡ ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಐವತ್ತು ವರ್ಷಗಳಿಂದ ಕಥೆ, ಕವನ, ಲೇಖನಗಳು ಪ್ರಕಟವಾಗಿವೆ. `ಮತ್ತೊಂದು ದಿನ ಮತ್ತು ಇತರ ಕಥೆಗಳು’ ಪ್ರಕಟಿತ ಕಥಾ ಸಂಕಲನ. ಇದೇ ಹೆಸರಿನ ಕಥೆಯಾಧರಿತ ಕಿರು ಚಿತ್ರ ಬೆಂಗಳೂರು ದೂರದರ್ಶನದಲ್ಲಿ ಪ್ರಸಾರವಾಗಿದೆ. `ಕಣ್ತೆರೆದ ಕನಸು’ ಕಾದಂಬರಿಯ ಮುದ್ರಣವೂ ಈಗಷ್ಟೇ ಮುಗಿದಿದೆ.
ಮಂಜುನಾಥ ಕಾಮತ್
20
May