ಮಂಜುನಾಥ ಕಾಮತ್

“ಅನಾಥ ಪ್ರೀತಿಯ ಅನುಬಂಧ” ಕಾದಂಬರಿಯ ಲೇಖಕರು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯವರು. ಹಾಲಾಡಿ, ಶಂಕರನಾರಾಯಣದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣ. ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಬಿ.ಎಸ್ಸಿ. ಪದವಿ.
ಸಿಂಡಿಕೇಟ್ ಬ್ಯಾಂಕಿನ ಮಥುರಾ, ನವದೆಹಲಿ, ಮಂಗಳೂರು, ಬೆಳಗಾವಿ, ಶಂಕರನಾರಾಯಣ ಶಾಖೆ-ಕಚೇರಿಗಳಲ್ಲಿ ಮೂವತ್ತಾರು ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತಿಯ ನಂತರ ಪ್ರಸ್ತುತ ಹಾಲಾಡಿಯ ಬೆಳಾರಮಕ್ಕಿಯಲ್ಲಿ ನೆಲೆಸಿದ್ದಾರೆ.
ಯಕ್ಷಗಾನ, ನಾಟಕ, ಸಾಹಿತ್ಯದಲ್ಲಿ ಬಾಲ್ಯದಿಂದಲೇ ಆಸಕ್ತಿ. ಕನ್ನಡ ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಐವತ್ತು ವರ್ಷಗಳಿಂದ ಕಥೆ, ಕವನ, ಲೇಖನಗಳು ಪ್ರಕಟವಾಗಿವೆ. `ಮತ್ತೊಂದು ದಿನ ಮತ್ತು ಇತರ ಕಥೆಗಳು’ ಪ್ರಕಟಿತ ಕಥಾ ಸಂಕಲನ. ಇದೇ ಹೆಸರಿನ ಕಥೆಯಾಧರಿತ ಕಿರು ಚಿತ್ರ ಬೆಂಗಳೂರು ದೂರದರ್ಶನದಲ್ಲಿ ಪ್ರಸಾರವಾಗಿದೆ. `ಕಣ್ತೆರೆದ ಕನಸು’ ಕಾದಂಬರಿಯ ಮುದ್ರಣವೂ ಈಗಷ್ಟೇ ಮುಗಿದಿದೆ.