ಅನು ಬೆಳ್ಳೆ

ಹೆಸರು: ರಾಘವೇಂದ್ರ ಬಿ. ರಾವ್ ಕಾವ್ಯ ನಾಮ: ಅನು ಬೆಳ್ಳೆ
ಮೂಲತಃ ಉಡುಪಿ ಜಿಲ್ಲೆಯ ಬೆಳ್ಳೆ ಯವನಾದರೂ ಹುಟ್ಟಿದ್ದು ತಮಿಳುನಾಡಿನ ಮಧುರೈನ ವೆತ್ತಲಕುಂಡ್ ನಲ್ಲಿ. ವಿದ್ಯಾಭ್ಯಾಸ ಉಡುಪಿ ಜಿಲ್ಲೆಯಲ್ಲಿ. ಧಾರವಾಡ ಯೂನಿವರ್ಸಿಟಿಯಿಂದ ಎಂ.ಕಾಂ. ಸ್ನಾತಕೋತ್ತರ ಪದವಿ ಹಾಗೂ ಕುವೆಂಪು ಯೂನಿವರ್ಸಿಟಿಯ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪಡೆದು ಸದ್ಯ ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರ ಉಪನ್ಯಾಸಕ ನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡದ ಎಲ್ಲಾ ಜನಪ್ರಿಯ ಪತ್ರಿಕೆಗಳಲ್ಲಿಯೂ ಇವರ ಕಥೆ ಕಾದಂಬರಿಗಳು ಪ್ರಕಟವಾಗಿವೆ. ಈವರೆಗೆ ಇವರು ರಚಿಸಿದ ಕೃತಿಗಳು ಒಟ್ಟು ಐವತ್ತೈದು. ಇವರಿಗೆ ಕರವೇ ನಲ್ನುಡಿ ಕಥಾ ಪ್ರಶಸ್ತಿ, ಭಾಮಿನಿ ಕಥಾ ಪ್ರಶಸ್ತಿ, ಉತ್ಥಾನ ಕಥಾ ಪ್ರಶಸ್ತಿಗಳು ಲಭಿಸಿವೆ. ಇವರ ‘ಭೂತದ ಕೋಳಿ’ ಕಥಾ ಸಂಕಲನಕ್ಕೆ ವರ್ಧಮಾನ ಉದಯೋನ್ಮುಖ ಪ್ರಶಸ್ತಿಯೂ ಲಭಿಸಿದೆ.