nil
ತನ್ನ ಕಾಲದ ಹಲವು ಬಗೆಯ ಒತ್ತಡಗಳನ್ನು ಒಳಗೊಂಡು, ಅರಗಿಸಿಕೊಂಡ ನಂತರವೂ ಸೃಜನಶೀಲತೆಯ ಹೊಸ ಹಾದಿಗಳನ್ನು ಹುಡುಕುವ, 'ಸಯರ ಸಮ್ಮತ ಸಂತೆಯ ದಾರಿ'ಯನ್ನು ಅನುಸರಿಸದ ಲೇಖಕರು ಮಾತ್ರವೇ ಒಂದು ಭಾಷೆಯ ಸಾಹಿತ್ಯವನ್ನು ಕಟ್ಟಬಲ್ಲರು. ರಂಗಭೂಮಿ, ಚಲನಚಿತ್ರ, 'ಜೀವಂತ' ಜೀವನ ಮುಂತಾದ ಹತ್ತು ಹಲವು ಸಂಗತಿಗಳಲ್ಲಿ ತೀವ್ರವಾದ ಆಸಕ್ತಿಗಳನ್ನು ಹೊಂದಿರುವ ಗೆಳೆಯ ಮೌನೇಶ ಬಡಿಗೇರ್ ಅವರು ಅಂತಹ ಕೆಲವು ತರುಣ-ತರುಣಿಯರಲ್ಲಿ ಒಬ್ಬರು. ಕಥೆ, ಕವಿತೆ, ಕಾದಂಬರಿ ಮುಂತಾದ ಪುಕಾರಗಳ ಸಾಧ್ಯತೆಗಳನ್ನು ಅರಸುವ ಕೆಲಸವು 'ಸೃಜನಶೀಲ ಕಲ್ಪನೆ' ಮತ್ತು 'ಮಾಧ್ಯಮ ಶೋಧನೆ'ಗಳನ್ನು ಅವಲಂಬಿಸಿರುತ್ತದೆ. ಇವುಗಳ ಜೊತೆಗೆ, ಜಡವಲ್ಲದ ಕೇವಲ ಬೌದ್ಧಿಕವಲ್ಲದ ತಾತ್ವಿಕ ಕುತೂಹಲ/ಚಿಂತನೆಯೂ ಅದಕ್ಕೆ ಅಗತ್ಯವಾದ ಇನ್ನೊಂದು ಗುಣ. ಇದೆಲ್ಲದರ ಸಂಗಡ ಕತೆಸಾರನಿಗೆ ಲೋಕವನ್ನು ಅದರ ಸ್ಕೂಲನೆಲೆಯಲ್ಲಿ ಮಾತ್ರವಲ್ಲ, ವಿವರಗಳಲ್ಲಿ ಕಾಣುವ ಸುಣವೂ ಬೇಕು. ಮೂರ' ಮತ್ತು 'ಅಮೂರ' ಒಟ್ಟಿಸೆ ಗ್ರಹಿಸುವ, ಒಟ್ಟಾಗಿ ಹೆಣೆಯುವ ಕೆಲಸ ಬಹಳ ಜಟಲವಾದುದು. ಮೌನೇಶ್ ಈ ಎಲ್ಲ ಶಕ್ತಿಗಳನ್ನೂ ಬೇರೆ ಬೇರೆ ಪ್ರಮಾಣದಲ್ಲಿ ಪಡೆದಿದ್ದಾರೆ. ಆದ್ದರಿಂದ ಅವರ ಈ ಕಾದಂಬರಿ ನನಗೆ ಇಷ್ಟವಾಯಿತು. ನನ್ನನ್ನು ಬೆಳೆಸಿತು. ನಾನು ಅವರ ಕಥೆ, ಕವಿತೆಗಳನ್ನೂ ಪ್ರೀತಿಯಿಂದ ಓದಿದ್ದೇನೆ. -ಎಚ್. ಎಸ್. ರಾಘವೇಂದ್ರ ರಾವ್
ರತಿಯು ಬೇಲಿ ದಾಟಿ ನಾಲ್ಲು ದಾಪು ನಡೆದು ಬಾವಿ ತಲುಪಿ ಕಟ್ಟೆಯ ಹಸಿರು ಮೆತ್ತೆ ಮೇಲೆ ಕುಳಿತಳು. ಪಾಚಿಯನ್ನು ನೇವರಿಸಿದಳು. ಸಮಾಧಾನವೆನ್ನಿಸಿತು. ನೀರಿನ ಮೇಲೈಯು ಗಾಳಿಗೆ ಕಂಪಿಸುತ್ತ ತರಂಗಗಳು ಹುಟ್ಟಿ, ಬೆಳೆದು, ಮತ್ತೆ ಹುಟ್ಟಿ ಬೆಳೆದು ಅಂತರ್ಧಾನ ಆಗುವುದನ್ನು ನೋಡತೊಡಗಿದಳು. ಅದೊಂದು ಮುಗಿಯದ ವರ್ತುಲವಾಗಿ ಯಾವುದು ಶುರು, ಎಲ್ಲಿಗೆ ಕೊನೆ ಎಂದು ಅವಳಿಗೆ ಬಗೆಹರಿಯಲಿಲ್ಲ. ಬಿಸಿಲು ಇಳಿಯುತ್ತಿತ್ತು. ಕುಳಿತಿದ್ದ ರತಿ ಎದ್ದಳು. ಅವಳು ಇನ್ನೂ ನೀರಿನ ಮೈಯನ್ನೇ ನೋಡುತ್ತಿದ್ದಳು. ತಿಳಿಬಣ್ಣದ ನೀರು ಮರದ ನೆರಳು, ಸಂಜೆಯ ಛಾಯೆಯ ಜೊತೆ ಸೇರಿಕೊಂಡು ಕಪ್ಪಾಗಿ ಕಾಣುತ್ತಿತ್ತು. ರತಿಯ ಕಣ್ಣಿಗೆ ಗಳಿಗೆ ಗಳಿಗೆಗೂ ಆ ಕಪ್ಪು ಗಾಡವಾಗುತ್ತ ಹೋದಂತೆನಿಸಿ, ಒಂದು ಹಂತದಲ್ಲಿ ಎಲ್ಲ ಕಡೆ ಕಪ್ಪು ಆವರಿಸಿಕೊಂಡುಬಿಟ್ಟಿತು. ಆ ಕ್ಷಣ ಸುತ್ತಲ ಶಬ್ದಗಳೂ ಸದ್ದಡಗಿ, ಕತ್ತಲ ಸುರಂಗದೊಳಗೆ ಹೋಗುತ್ತಿರುವ ಅನುಭವವಾಯಿತಷ್ಟೆ,
ಕಮಲನಯನ ಕಣ್ಣಿಟ್ಟಿದ್ದ ಸಂನ್ಯಾಸಿ ಒಳ್ಳೆಯವನೋ? ಕೆಟ್ಟವನೋ? ಕೆಲವೊಮ್ಮೆ ಒಳ್ಳೆಯವನಾಗಿಯೂ, ಕೆಲವೊಮ್ಮೆ ದುಷ್ಟನಾಗಿಯೂ ಕಾಣುವ ಸಂನ್ಯಾಸಿಯು ಎರಡು ವ್ಯಕ್ತಿತ್ವವುಳ್ಳವನೇ? ಕಮಲನಯನ ಮತ್ತು ಅವನ ಗುಂಪು ಶೋಧಿಸಿದಾಗ ದೊರಕುವ ಆಘಾತಕರ ಸತ್ಯಗಳು. ಬಲೆಯನ್ನು ಇತರರನ್ನು ಹಿಡಿಯಲು ಹರಡಿದರೂ ಅದು ಮೊದಲು ಬಲೆ ಹರಡಿದವನನ್ನೇ ಬಲಿ ತೆಗೆದುಕೊಳ್ಳುವುದೇನು?
ಜೆಯಮೋಹನ್ ಅವರು ಸತ್ಯಕ್ಕೆ ಮುಸುಕೆಳೆಯದೆ, ಅದರ ಉಗ್ರ ಸ್ವರೂಪವನ್ನು ಹಸಿಯಾಗಿಯೇ ನಮ್ಮ ಮುಂದಿಡುತ್ತಾರೆ. ಅವರ ಕೃತಿಗಳನ್ನು ಓದದಿದ್ದರೆ ಸಮಕಾಲೀನ ಭಾರತವನ್ನು ಕುರಿತ ನಮ್ಮ ಅರಿವು ಅಪೂರ್ಣವಾಗಿ ಉಳಿಯುತ್ತದೆ. - ವಿವೇಕ ಶಾನಭಾಗ
ತನ್ನ ಮಾಲೀಕನ ಮಗಳನ್ನು ಪತ್ತೆ (ತುಬ್ಬು) ಹಚ್ಚಲು ಮಾನವ್ ಬೆಂಗಳೂರಿನಿಂದ ಅಮೆರಿಕಾಗೆ ಹೋಗುತ್ತಾನೆ. ಅವಳು ಹೇಗಿರುವಳೆಂದೂ, ಎಲ್ಲಿರುವಳೆಂದೂ ತಿಳಿಯದಿದ್ದ ಅವನು ಅಮೆರಿಕಾದ ಅನೇಕ ಊರುಗಳಿಗೂ, ಕದ್ದು ಮೆಕ್ಸಿಕೋಗೂ, ನಂತರ ಮತ್ತೊಂದುಖಂಡಕ್ಕೂ ಹೋಗುತ್ತಾನೆ. ಅವನ ಪ್ರಯತ್ನದಲ್ಲಿ ಅವನು ಸಾಫಲ್ಯಕಂಡನೇ? ಆಸಕ್ತಿಕರ, ಮಾಹಿತಿಪೂರ್ಣ ಕಾದಂಬರಿ...
Showing 241 to 270 of 640 results