nil
ಕನಸುಗಳನ್ನು ಶೃಂಗರಿಸುವ ಜರೂರನ್ನು ಕಾಪಾಡಿಕೊಳ್ಳುವುದು. ಸ್ತ್ರೀ ಸ್ವಾತಂತ್ರ್ಯ, ವೈಚಾರಿಕತೆಯನ್ನು ಮುಟ್ಟಲು ಕಾದಂಬರಿ ಮೇರೆ ಮೀರಿ ಪ್ರಯತ್ನಿಸಿದೆ ಮತ್ತು ಆ ಮೂಲಕ ಸರ್ವಾಂಗೀಣ ಬೆಳವಣಿಗೆ ಸಾಧ್ಯತೆಯನ್ನು ಸಾರಲು ಪರಿಕ್ರಮಿಸಿದೆ. ಎಲ್ಲಾ ತಾರತಮ್ಯವನ್ನು ತಿರಸ್ಕರಿಸಿ ಸಾಮಾಜಿಕ ಕಳಕಳಿಯ ಅಂಶವನ್ನು ಎತ್ತಿಹಿಡಿಯುವ ಮಾರ್ಗದಲ್ಲಿ ಸಾಗಿದೆ. ಲೇಖಕರೊಬ್ಬರ ಲೇಖನಿಯಲ್ಲಿ ಎಲ್ಲವೂ ಶುಭಂ ಆಗುವ ಸಂಭವವಿರುವುದರಿಂದ, ಕಾದಂಬರಿಯೂ ಸಹ ಆತಂಕ, ತಲ್ಲಣಗಳನ್ನು ಹೊತ್ತು ಕೊಂಡೇ, ಆದಷ್ಟೂ ಬದುಕಿನ ಸಹಜತೆಯನ್ನು ಕಾಯ್ದುಕೊಳ್ಳಲು ಯತ್ನಿಸಿದೆ. ಕಥೆಯಲ್ಲಿ ಹೆಚ್ಚು ಕಡಿಮೆ ಎಲ್ಲಾ ಪಾತ್ರಗಳಿಗೂ ಅವಕಾಶವಿದೆ. ಅಧ್ಯಾಯದ ಉಪಕತೆಗಳಲ್ಲಿ ಕನೆಕ್ಟಿವಿಟಿ ಇದೆ. ಒಟ್ಟು ಮುನ್ನೂರಕ್ಕೂ ಹೆಚ್ಚು ಪುಟಗಳ ಕಾದಂಬರಿ ಮೂವತ್ತು ಅಧ್ಯಾಯಗಳನ್ನು ಒಳಗೊಂಡಿದೆ. ಸಾದಾಸೀದವಾಗಿ ಯಾವುದೇ ಭಾರವಿಲ್ಲದೇ ಸರಳವಾಗಿ ಓದಿಸಿಕೊಳ್ಳುತ್ತದೆ. ಉದ್ವಿಗ್ನತೆ, ಒತ್ತಡದ ಸನ್ನಿವೇಶಗಳನ್ನು ಬರೆಯುವಾಗ ತೀರಾ ಒದ್ದಾಡದೆ, ನಿರುದ್ವಿಗ್ನವಾಗಿ ನಿರೂಪಿಸುತ್ತಾ ನೇರ ಮಾರ್ಗಕ್ಕೆ ತಂದು ಬಿಡುತ್ತಾರೆ. ಶೃಂಗಾರದ ಸಮಯ ತೀರಾ ಕಡಿಮೆಯಿವೆ. ಧಾರಾವಾಹಿಗಳಂತೆ ಅಸಹಜತೆಗಳಿಲ್ಲದೆ, ಕೃತಕ ಅಲಂಕಾರಗಳಿಲ್ಲದೆ, ನಿರಾಡಂಬರವಾಗಿ ವಿನ್ಯಾಸಿಸಿದ್ದಾರೆ. ಒಂದು ಸಿನೆಮಾವನ್ನು ಕುಟುಂಬ ಸಮೇತವಾಗಿ ನೋಡಬಹುದು ಅನ್ನುತ್ತಾರಲ್ಲ ಹಾಗೆ ಕನಸು ಸೊಗಸು ಎಲ್ಲಾ ವರ್ಗದ, ವಯೋಮಾನದ ಮಂದಿಯೂ ಓದಬಹುದಾದ ವಸ್ತು ವಿಷಯ ಹೊಂದಿದೆ. ಶ್ರೀನಾಥರಿಗೆ ಒಳಿತಾಗಲಿ, ಅವರು ಹಲವಾರು ಪ್ರಕಾರಗಳಲ್ಲಿ ಬರೆಯುವಂತಾಗಲಿ. ಈ ಕಾದಂಬರಿಯ ಸೊಗಡು ಸಾಹಿತ್ಯಕವಾಗಿ ಸಾಕಷ್ಟು ಹರಡಲಿ ಎಂಬ ಸದಾಶಯದೊಡನೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
NA
ಹಿರಿಯ ಸಾಹಿತಿ ನಾ. ದಾಮೋದರ ಶೆಟ್ಟಿಯವರ 'ಕರಿಮಾಯಿ ಗುಡ್ಡ' ಕಾದಂಬರಿ ಸಂಶೋಧನಾತ್ಮಕ ಹಾಗೂ ಪತ್ತೇದಾರಿಯ ಗುಣಗಳನ್ನು ಹೊಂದಿದೆ. ಆಧುನಿಕ ಬದುಕಿಗೆ ಸಮೀಪವಾದ ಕಥಾವಸ್ತುವನ್ನೊಳಗೊಂಡಿದ್ದು ರೋಚಕ ತಿರುವುಗಳಿಂದ ಕೂಡಿ. ಕುತೂಹಲ ಕೆರಳಿಸುತ್ತ ಸಾಗುವ ಕಾದಂಬರಿ ಚೇತೋಹಾರಿ ಶೈಲಿಯಿಂದ ಕೂಡಿದೆ. ఇంగ్లీష్ ಸಾಹಿತ್ಯದಲ್ಲಿ ಇರಬಹುದಾದ ಇಂಥ ಕಥಾನಕಗಳು ಕನ್ನಡದಲ್ಲಿ ಅಪರೂಪ. ಎಸ್ಟೇಟ್ ಮಧ್ಯದ ಸಿರಿವಂತರ ಬದುಕಿನ ನಿಗೂಢ ಘಟನೆಯೊಂದನ್ನು ನಾದಾ ಅವರು ರೋಚಕವಾಗಿ ಹೆಣೆದಿದ್ದಾರೆ. ಎಸ್ಟೇಟು ಬಂಗಲೆಯಲ್ಲಿ ನಡೆಯುವ ಈ ಕಥೆಯು ಪ್ರೀತಿ, ದ್ವೇಷ, ಅಸೂಯೆ, ವಂಚನೆ ಮುಂತಾದ ಹಲವು ಭಾವಗಳ ಸಮ್ಮಿಲನವಾಗಿದೆ. ವಿನಾಕಾರಣ ಕೊಲೆಯಾಗುವ ಓರ್ವ ಅಮಾಯಕ ಹೆಣ್ಣಿನ ಮನಸ್ಸನ್ನು ಆರ್ಥೈಸಲಾಗದೆ ಆಕೆಯ ಭಾವನೆಗಳ ಮೌಲ್ಯವನ್ನು ತಿಪ್ಪೆಗೆಸೆಯುವ ಕ್ರೌರ್ಯ ತಮ್ಮ ಜನ್ಮಸಿದ್ದ ಹಕ್ಕು ಎಂಬಂತೆ ವರ್ತಿಸುವ ಪುರುಷ ಸಮಾಜವನ್ನು ಈ ಕಾದಂಬರಿ ನಿಕಷಕ್ಕೊಡ್ಡುತ್ತದೆ. ಕೊಡಗಿನ ಪ್ರಾಕೃತಿಕ ರಮಣೀಯತೆ ಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿರುವುದು ಈ ಕಾದಂಬರಿಯ ಮತ್ತೊಂದು ವಿಶೇಷ. ಕರಾವಳಿ ತೀರದ ನಾದಾ ಅವರ ಈ ಕಾದಂಬರಿ ಕನ್ನಡ ಸಾರಸ್ವತ ಲೋಕಕ್ಕೆ ಒಂದು ಅನುಪಮ ಕೊಡುಗೆ. ಟಿ.ಎಸ್. ದಕ್ಷಿಣಾಮೂರ್ತಿ
“ಯೀಟ್ ದಿನ ಕತ್ಲು ಕೋಣ್ಯಾಗೆ ಬುಡ್ಡಿ ದೀಪದ್ ಮಬ್ಬು ಬೆಳ್ಕಲ್ಲಿ ಯಾರ್ ಯಾರಿಗೋ ಸೆರಗಾಸಿ ; ಮೈನ ಅವರಿಗೊಪ್ಸಿದ್ ಕೈಗಳು, ಇವತ್ತು ಕುವೆಂಪು ಸರ್ಕಲ್ನಾಗೆ, ಶಂಕರ್ ನಾಗ್ ಆಟೋ ಸ್ಟಾಂಡ್ ರೋಡ್ನಾಗೆ , ಸಂತ್ಯಾಗಿರೋ ನಾಕ್ ಮಂದಿ ತಾವ್ ನಿಂತು. ಕನ್ನಡ ಪುಸ್ತಕಗಳನ್ನ ಕೈಲಿಡ್ದು “ ಅಣ್ಣೋ ತೇಜಸ್ವಿಯವರ್ದು ಕರ್ವಾಲೋ, ಮಾದ್ಹೇವಣ್ಣಂದು ಎದೆಗೆ ಬಿದ್ದ ಅಕ್ಷರ, ಕುವೆಂಪುರವರದ್ದು ಮಂತ್ರ ಮಾಂಗಲ್ಯ, ಬೇಂದ್ರೆ ಅಜ್ಜಂದು ನಾಕುತಂತಿ. ಇವೆಲ್ಲಾ ಕನ್ನಡ ಪುಸ್ತಕಗಳು ಕಣಣ್ಣ, ಒಂದೇ ಒಂದ್ ಪುಸ್ತಕ ತಗೋ ಬಾ ಅಣ್ಣ, ಬಾರಕ್ಕ, ಸಾರ್, ಮೇಡಂ ಅಂತ ಕೂಗಿ -ಕೂಗಿ ಕರ್ದು, ನಾನಾ ನಮೂನಿ ಕನ್ನಡ ಸಾಹಿತ್ಯ ಪುಸ್ತಕಗಳನ್ನ ಮಾರಿ ಇಂದು ಬದ್ಕ ಕಟ್ಕೊಂಡಿವ್ನಿ. ಅವತ್ ನಾನು ಸೂಳೆ ದಿಟ, ಆದ್ರೆ ಇವತ್ ನಾನ್ ಸೂಳೆ ಅಲ್ಲ ಕನ್ರಪ್ಪೋ ಅಂತ ನಿರೂಪಿಸೀವ್ನಿ. ವೇಶ್ಯೆ ಅನ್ನೋ ಹಳೇ ನೀರು ಹರಿದೋಗಿ, ಹೊಸ ಹೆಣ್ಣಾಗಿ ಕನ್ನಡ ಪುಸ್ತಕಗಳ ಹೊಳೇಲಿ ತೇಲ್ತೀವ್ನಿ.” ಒಂದು ಪುಸ್ತಕ ಒಂದು ಬದಲಾವಣೆಗೆ ಕಾರಣವಾಗುತ್ತೆ, ಕಲ್ಲೆದೆಯಲ್ಲೂ ಭಾವನೆಗಳ ನೀರುಕ್ಕಿಸುವ ಕೆಲಸ ಕೆಲವು ಪುಸ್ತಕಗಳು ಮಾಡ್ತವೆ. ಈಗಿನ ಕಾಲದಲ್ಲಿ, ಕೈಲಿ ಪುಸ್ತಕಗಳನ್ನಿಡಿಯೋ ಬದಲು ಮೊಬೈಲ್ಗಳನ್ನ ಹಿಡಿಯೋ ಕೈಗಳೆ ಹೆಚ್ಚಿರುವಾಗ, ನೀನು ಪುಸ್ತಕಗಳನ್ನ ಮಾರಿ ಬದುಕ್ತಿನಿ ಅಂತಿದೀಯ
Showing 121 to 150 of 640 results