nil
ಒಟ್ಟು 28 ಅಧ್ಯಾಯಗಳಿರುವ ಈ ಪುಸ್ತಕದ ಎಲ್ಲಾ ಅಧ್ಯಾಯಗಳೂ ಭರಪೂರ ಆತ್ಮ ನಿವೇದನೆಯಂಥಾ ರಸಪಾಕಗಳೇ. ಯಾವುದು ಚೆನ್ನಾಗಿದೆ, ಯಾವುದು ಚೆನ್ನಾಗಿಲ್ಲ ಎಂದು ವಿಂಗಡಿಸುವುದು ಸಾಧ್ಯವೇ ಇಲ್ಲ. ಒಮ್ಮೆ ಓದಲು ಶುರುವಿಟ್ಟುಕೊಂಡರೆ ಸಾಕು ನಿಲ್ಲಿಸುವ ಮನಸ್ಸೇ ಬಾರದು. ಉದಾಹರಣೆಗೆ 'ಎನೌಂಟರ್ ವಿತ್ ಮುತ್ತಪ್ಪ ರೈ' ಅಧ್ಯಾಯವನ್ನೇ ತೆಗೆದುಕೊಳ್ಳಿ, ಇಲ್ಲಿ ಯಾವುದಿಲ್ಲ, ಯಾವುದುಂಟು ಎಂದು ವಿಂಗಡಿಸುವುದು ಕಷ್ಟ ಕಷ್ಟ.. 'ಹಮ್ಮುಬಿಮ್ಮಿಲ್ಲದ ಹೃದಯವಂತ ದೊರೆ'ಯಲ್ಲಿನ ಅಂಬರೀಶ್ ನಮ್ಮ ಮುಂದೆ ಬೇರೆಯದ್ದೇ ಅವತಾರ ತಾಳಿ ಪ್ರತ್ಯಕ್ಷರಾಗುತ್ತಾರೆ. 'ಸಾಹಸಸಿಂಹನ ಸನ್ನಿಧಿಯಲ್ಲಿ'ನ ವಿಷ್ಣುವರ್ಧನ್ ಮತ್ತಷ್ಟು ಹತ್ತಿರವಾಗುವುದು ಕವಿಯ ನಿರ್ಮಲ ಹೃದಯದ ಅಭಿವ್ಯಕ್ತಿಯಿಂದ. 'ಈ ಮನುಷ್ಯರನ್ನೇಕೆ ದೇವತಾ ಮನುಷ್ಯ ಅನ್ನೋದು' ಅಧ್ಯಾಯದ ರಾಜಕುಮಾರ್ ನಮ್ಮ ಮುಂದೆ ಪ್ರತ್ಯಕ್ಷವಾಗುವ ರೀತಿ ಬೇರೆಯದ್ದೇ ಆದ ಅಂಗಲ್ನಲ್ಲಿ. 'ಕಿಚ್ಚನ ಪತ್ನಿಯ ಕಿವಿಯೋಲೆ ಪ್ರಸಂಗ'ದಲ್ಲಿ ಈ ಕವಿ ತಮ್ಮನ್ನು ತಾವೇ ಹೀಯಾಳಿಸುತ್ತಾರೋ, ಸಾಂತ್ವನಗೊಳಿಸುತ್ತಾರೋ, ರಹಸ್ಯ ಬಿಚ್ಚಿಡುತ್ತಾರೋ... ಅದೊಂದು ಸಸ್ಪೆನ್ಸ್. ಹಾಗೆಯೇ 'ಸಲಾಂ ಯಶ್ ಭಾಯ್', 'ರಶ್ಮಿಕಾ ಕ್ರಶ್ಮಿಕಾ ಆಗುವ ಮುನ್ನ...' ಮೊದಲಾದ ಅಧ್ಯಾಯಗಳು ರಸಿಕ ಹೃದಯದ ಸಂವೇದನೆಗಳು! ಸರಾಗವಾಗಿ ಓದಿಸಿಕೊಂಡು ಹೋಗುವ ಕವಿಯ ಶೈಲಿಗೆ ನಮೋ ನಮಃ. ಕಣ್ಣಿಗೆ ಕಟ್ಟಿದಂತೆ ಅಕ್ಷರಗಳಲ್ಲಿ ಘಟನೆಗಳನ್ನು ಹೆಣೆಯುವ ಪರಿಗೆ ಯಾರಾದರೂ ಅಚ್ಚರಿಗೊಳ್ಳಲೇಬೇಕು. ಎಲ್ಲೂ ಬೋರು ಹೊಡೆಯದಂತೆ ವಾಕ್ಯ ರಚನೆಯಲ್ಲಿ ತೆಗೆದುಕೊಂಡ ಜಾಗ್ರತೆ ನಿಚ್ಚಳವಾಗಿ ಎದ್ದುಕಾಣುತ್ತದೆ. ಇದು ಈ ಕೃತಿಯ ಸಾರ್ಥಕತೆ. ಗಣೇಶ್ ಕಾಸರಗೋಡು
ಸದಾ ನಿಸರ್ಗದ ನಿಯಂತ್ರಣಕ್ಕೆ ಒಳಪಟ್ಟ ಕಾಡೊಂದರ ಅಭಿವೃದ್ಧಿಯ ಹಿಂದಿನ ರೂವಾರಿಗಳ ಶ್ರಮ, ಪ್ರತಿಭೆಗಳು ಸಾಮಾನ್ಯವಾಗಿ ಕಾಡಿನ ಗರ್ಭದಲ್ಲೇ ಕಣ್ಮರೆಯಾಗುವುದುಂಟು. ಇಡೀ ಜೀವನವನ್ನು ಅರಣ್ಯಗಳ ಏಳಿಗೆಗಾಗಿಯೇ ಮೀಸಲಿರಿಸಿ ಎಲೆಮರೆಯಲ್ಲೇ ಕಾಯಾಗಿ ನೇಪಥ್ಯಕ್ಕೆ ಸರಿದ ಮಹನೀಯರೆಷ್ಟೋ ಮಂದಿ ನಮ್ಮಲ್ಲಿದ್ದಾರೆ. ಇಂಥ ಕೆಲವೇ ವ್ಯಕ್ತಿತ್ವಗಳಲ್ಲಿ ಅರಣ್ಯಾಧಿಕಾರಿ ಮಾರಪ್ಪನವರೂ ಒಬ್ಬರು. ಅರಣ್ಯದ ಕಿರು ಉತ್ಪನ್ನವೆಂದೇ ಪರಿಗಣಿಸಲಾದ ಹುಣಸೆ ಮೂಲಕವೇ ಬರಡು ಜಿಲ್ಲೆಯೊಂದರ ಜನಸಮುದಾಯದ ಆರ್ಥಿಕ ಉನ್ನತಿ ಸಾಧಿಸುವ ಕನಸು ಕಂಡ ಮಾರಪ್ಪನವರ ದೂರದೃಷ್ಟಿ, ಆಶಯಗಳನ್ನು ಈ ಪುಸ್ತಕದಲ್ಲಿ ಪರಿಚಯಿಸಲು ಯತ್ನಿಸಲಾಗಿದೆ. ಅಧಿಕಾರದ ನಡುವೆಯೂ ಜನಸಮುದಾಯದ ಬಗ್ಗೆ ಸಹಜಪ್ರೀತಿ, ಅರಣ್ಯ, ಪರಿಸರಗಳ ಬಗ್ಗೆ ಸಾಮಾಜಿಕ ಎಚ್ಚರ ಎರಡನ್ನು ಹೊಂದಿದ್ದ ಮಾರಪ್ಪನವರಂಥ ವ್ಯಕ್ತಿಯೊಬ್ಬರನ್ನು ಇಂದಿನ ಪೀಳಿಗೆಯವರಿಗೆ ಪರಿಚಯಿಸುವುದೇ ಒಂದು ಸಾಮಾಜಿಕ ಜವಾಬ್ದಾರಿ. ಈ ಕಾರ್ಯವನ್ನು ಈ ಕೃತಿಯಲ್ಲಿ ಎಚ್.ಎ. ಪುರುಷೋತ್ತಮರಾವ್ ಪ್ರೀತಿಯಿಂದ ನಿರ್ವಹಿಸಿದ್ದಾರೆ. ವೃತ್ತಿಯಿಂದ ಅರಣ್ಯ ಇಲಾಖೆಯ ಉದ್ಯೋಗಿಯಾಗಿ ನಿವೃತ್ತರಾಗಿರುವ ಎಚ್.ಎ. ಪುರುಷೋತ್ತಮರಾವ್ ಪ್ರವೃತ್ತಿಯಿಂದ ಲೇಖಕರು. ಸಾಹಿತ್ಯಾಭಿರುಚಿಯುಳ್ಳ ಇವರು ನಮ್ಮ ನಿತ್ಯಬದುಕಿಗೆ ಸಂಬಂಧಿಸಿದಂತೆ ಹಲವಾರು ವಿಜ್ಞಾನ ಬರಹಗಳನ್ನು ಬರೆದಿದ್ದಾರೆ. 'ಕಿವುಡನಮಾಡಯ್ಯ ತಂದೆ', 'ಭೂರಮೆಗೆ ಸೈಥೋಸ್ಕೋಪ್', 'ಗಾಳಿ ಬೇರುಗಳು', 'ಪೆದ್ದನ್ನನ ಇಕಾಲಜಿ ಮತ್ತು ಪರಿಸರ ಲೇಖನಗಳು' ಇನ್ನೂ ಮುಂತಾದ ಕೃತಿಗಳನ್ನು ಈಗಾಗಲೆ ಪ್ರಕಟಿಸಿದ್ದಾರೆ. ನಾಡು ಮರೆತ ಕಾಡು ಪ್ರತಿಭೆ ಮಾರಪ್ಪನವರ ಜೀವನ, ಸಾಧನೆ ಕುರಿತಂತೆ ಇಂಥದ್ದೊಂದು ವಿಶಿಷ್ಟ ಕೃತಿಯನ್ನು ರಚಿಸಿರುವ ಪುರುಷೋತ್ತಮರಾವ್ ಅಭಿನಂದನಾರ್ಹರು. -ಪ್ರಕಾಶಕ
Showing 31 to 60 of 185 results